More

    ಲೈಂಗಿಕ ದೌರ್ಜನ್ಯ ಎಸಗಿದರೆಂದು ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದಳು: ಆದರೆ ನಡೆದದ್ದೇ ಬೇರೆ…!

    ತಿರುವನಂತಪುರ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದರು ಎಂದು ಹೇಳಿ ಕೇರಳದ ತಿರುವನಂತಪುರದ ಸ್ವಾಮಿ ಗಂಗೇಶಾನಂದರರ ಮರ್ಮಾಂಗ ಕತ್ತರಿಸಿದ್ದ ಕಾನೂನು ವಿದ್ಯಾರ್ಥಿನಿಯ ಕೇಸ್​ಗೆ ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ. 2017ರಲ್ಲಿ ನಡೆದಿರುವ ಈ ಘಟನೆ, ಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಬೇರೆಯದ್ದೇ ಕಥೆಯನ್ನು ಹೇಳುತ್ತಿದೆ.

    2017ರಲ್ಲಿ ತಿರುವನಂತಪುರದ 23 ವರ್ಷದ ಕಾನೂನು ವಿದ್ಯಾರ್ಥಿ ಸ್ವಾಮಿ ಗಂಗೇಶಾನಂದರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಳು. ಮೇ 19 ಮತ್ತು 20ರ ಮಧ್ಯರಾತ್ರಿ ತನ್ನ ಮನೆಯಲ್ಲಿ ಸ್ವಾಮಿ ಗಂಗೇಶಾನಂದರು ತನ್ನ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದರು. ಈ ವೇಳೆ ಅವರ ಮರ್ಮಾಂಗವನ್ನು ಕತ್ತರಿಸಿರುವುದಾಗಿ ಆಕೆ ಹೇಳಿಕೆ ನೀಡಿದ್ದಳು.

    ಲೈಂಗಿಕ ದೌರ್ಜನ್ಯದ ಅಡಿ ಸ್ವಾಮಿ ವಿರುದ್ಧ ಕೇಸ್​ ದಾಖಲಾಗಿತ್ತು. ಆದರೆ ತನಿಖೆ ವೇಳೆ ಯುವತಿ ಬೇರೆಯದ್ದೇ ಕಥೆ ಹೇಳಲು ಶುರು ಮಾಡಿದ್ದಳು. ಸ್ವಾಮೀಜಿ ತನ್ನ ಮೇಲೆ ರೇಪ್ ಮಾಡಲು ಬಂದಿರಲಿಲ್ಲ ಆದ್ದರಿಂದ ಪ್ರಕರಣವನ್ನು ಹಿಂತೆಗೆದುಕೊಳ್ಳುವೆ ಎಂದು ವಾಪಸ್​ ಪಡೆದುಕೊಂಡಿದ್ದಳು. ಗಂಗೇಶಾನಂದ ತನಗೆ ಕಿರುಕುಳ ನೀಡಲು ಪ್ರಯತ್ನಿಸಲಿಲ್ಲ, ಅವರ ಮಾಜಿ ಸಹೋದ್ಯೋಗಿ ಅಯ್ಯಪ್ಪದಾಸ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಳು.

    ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಸ್ವಾಮೀಜಿ ದೂರು ದಾಖಲು ಮಾಡಿದ್ದರು. ಜತೆಗೆ ಕೆಲವು ಉನ್ನತ ಪೊಲೀಸ್ ಅಧಿಕಾರಿಗಳು ತನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಆದ್ದರಿಂದ ಅಪರಾಧ ತನಿಖಾ ದಳವು 2020 ರ ಮೇನಲ್ಲಿ ಮರು ತನಿಖೆಗೆ ಆದೇಶಿಸಿತು.

    ನಂತರ ತಿಳಿದುಬಂದಿರುವ ಸತ್ಯವೇ ಶಾಕಿಂಗ್​ದ್ದಾಗಿದೆ. ಅದೇನೆಂದರೆ, ಯುವತಿ ಅಯ್ಯಪ್ಪ ದಾಸ್​ನನ್ನು ಪ್ರೀತಿಸುತ್ತಿದ್ದಳು. ಆದರೆ ಇದನ್ನು ಸ್ವಾಮೀಜಿ ವಿರೋಧಿಸಿದ್ದರು. ಆದ್ದರಿಂದ ತಮ್ಮ ಮದುವೆಗೆ ಸ್ವಾಮೀಜಿ ಅಡ್ಡಪಡಿಸುತ್ತಾರೆ ಎಂದುಕೊಂಡು ಇವರಿಬ್ಬರೂ ಸೇರಿ ಹಲ್ಲೆ ಮಾಡಲು ಯೋಜನೆ ರೂಪಿಸಿದ್ದರು. ಅಯ್ಯಪ್ಪ ಚಾಕು ಖರೀದಿಸಿ, ಮರ್ಮಾಂಗ ಹೇಗೆ ಕತ್ತರಿಸಬೇಕು ಎಂಬ ವಿಡಿಯೋವನ್ನು ಒಟ್ಟಿಗೆ ವೀಕ್ಷಿಸಿದ್ದರೆನ್ನಲಾಗಿದೆ. ಕ್ರೈಂ ಬ್ರಾಂಚ್‌ ಅನ್ವಯ ಈ ಜೋಡಿ ಗೂಗಲ್‌ನಲ್ಲೂ ಜನನಾಂಗ ಹೇಗೆ ಕತ್ತರಿಸುವುದು ಎಂದು ಹುಡುಕಿದ ಹಿಸ್ಟರಿ ಲಭ್ಯವಾಗಿದೆ ಎನ್ನಲಾಗಿದೆ.

    ತನಿಖಾ ಸಂಸ್ಥೆಯು ಹೊಸ ಸಂಶೋಧನೆಗಳ ಆಧಾರದ ಮೇಲೆ ದಂಪತಿಯನ್ನು ವಿಚಾರಣೆಗೆ ಒಳಪಡಿಸಬಹುದೇ ಎಂಬುದರ ಕುರಿತು ಅಡ್ವೊಕೇಟ್ ಜನರಲ್ (ಎಜಿ) ರಿಂದ ಕಾನೂನು ಸಲಹೆಯನ್ನು ಕೇಳಿತು. ಮೊದಲ ಪ್ರಕರಣದಲ್ಲಿ ಗಂಗೇಶಾನಂದ ವಿರುದ್ಧ ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಸಬಹುದೇ ಎಂದು ಕಾನೂನು ಸಲಹೆಯನ್ನೂ ಕೇಳಿದೆ.

    ತನ್ನ ಮೊದಲ ಹೇಳಿಕೆಯಲ್ಲಿ, ಬಾಲಕಿಯು ತಾನು ಅಪ್ರಾಪ್ತಳಾಗಿದ್ದಾಗ ಗಂಗೇಶಾನಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಳು. ವಿಶೇಷವಾಗಿ ಬಾಲಕಿಯ ಹಿಂದಿನ ಹೇಳಿಕೆಯ ಆಧಾರದ ಮೇಲೆ ಪೊಲೀಸ್ ತನಿಖೆಯು ತಪ್ಪಾಗಿದೆ ಎಂದು ಕ್ರೈಂ ಬ್ರಾಂಚ್ ಕಂಡುಹಿಡಿದಿದೆ.

    ಬೆಂಗಳೂರಿನ ಜೈಲಿನಲ್ಲಿದ್ದಾಕೆಗೆ ಸಿಗ್ತು ಪಾಕಿಸ್ತಾನದ ಪೌರತ್ವ: ಜೈಲಲ್ಲೇ ಮಗುಹೆತ್ತ ಈಕೆಯ ಕಥೆಯೇ ಇಂಟರೆಸ್ಟಿಂಗ್‌!

    ತುಂಡು ತುಂಡು ಕತ್ತರಿಸೋದಾಗಿ ಹೇಳಿ ಎಸ್ಕೇಪ್‌ ಆದ ಕೈ ಮುಖಂಡ! ಮೂರು ದಿನವಾದ್ರೂ ಪೊಲೀಸರು ಗಪ್‌ಚುಪ್‌?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts