ಬೆಂಗಳೂರು: ಸುಳ್ಳು ಸುದ್ದಿಗಳಿಂದಾಗುವ ದುಷ್ಪರಿಣಾಮದ ಬಗ್ಗೆ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಬಸವನಗುಡಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವವರೊಬ್ಬರು ಸಿಕ್ಕಿದ್ದರು. ಸಾಕಷ್ಟು ಒಳ್ಳೆಯ ಹೆಸರುಳ್ಳ ಹೋಟೆಲ್ ಅವರದು. ಹೇಗಿದೆ ವ್ಯಾಪಾರ? ಎಂದು ಕೇಳಿದೆ. ಕಳೆದ ವಾರ ಚೆನ್ನಾಗಿತ್ತು. ಆದರೆ ಈ ವಾರ ಪೂರ್ತಿ ಡಲ್ ಎಂದರು. ಏಕೆ ಹೀಗೆ? ಎಂಬ ನನ್ನ ಪ್ರಶ್ನೆಗೆ ಅವರು ತಮ್ಮ ಮೊಬೈಲ್ನಲ್ಲಿ ಒಂದು ವಾಟ್ಸಪ್ ಸಂದೇಶ ತೋರಿಸಿದರು.
ಇದನ್ನೂ ಓದಿ: ಉತ್ತರ ಕೊರಿಯಾ ಸರ್ವಾಧಿಕಾರಿ ಕೋಪಕ್ಕೆ ಕಾರಣವಾಯ್ತು ಪತ್ನಿಯ ಅಶ್ಲೀಲ ಚಿತ್ರಗಳು…!
ಅವರ ಮತ್ತು ಆ ಭಾಗದ ಇತರೆ ಪ್ರಸಿದ್ಧ 2-3 ಹೋಟೆಲ್ಗಳಲ್ಲಿ ಕರೊನಾ ಸೋಂಕು ತಗುಲಿದವರು ಇದ್ದಾರೆ ಹಾಗೂ ಬಂದು ಹೋಗಿದ್ದಾರೆ ಎಂಬುದು ಆ ವಾಟ್ಸಪ್ ಸಂದೇಶದ ತಿರುಳು.
ರಾಜಾಜಿನಗರದ ಪ್ರಸಿದ್ಧ ಬೇಕರಿ ಕುರಿತು ಇದೇ ರೀತಿಯ ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಪೋಲೀಸ್ ಕಂಪ್ಲೇಂಟ್ ದಾಖಲಿಸಿ, ಬೇಕರಿಯ ಮುಂದೆ ತಮ್ಮ ಬೇಕರಿಯ ಬಗ್ಗೆ ಹರಡುತ್ತಿರುವುದು ಸುಳ್ಳು ಸುದ್ದಿ ಎಂದು ತಿಳಿಸುವ ಬ್ಯಾನರ್ ಸಹ ಹಾಕಲಾಗಿದೆ.
ಈ ರೀತಿಯ ಶುದ್ಧ ಸುಳ್ಳು ಸುದ್ದಿ ಹರಡಿ ವಿಕೃತಾನಂದ ಅನುಭವಿಸುವವರಿಗೆ ಏನನ್ನಬೇಕು? “ಒಳ್ಳೆಯ ಹೆಸರು ಸಂಪಾದಿಸುವುದಕ್ಕೆ ಹತ್ತು ವರುಷ, ವಾಟ್ಸ್ಆ್ಯಪ್ಗೆ ಹತ್ತು ನಿಮಿಷ” ಎಂಬ ಹೊಸ ಗಾದೆ ಸೃಷ್ಟಿಸಬಹುದೇನೋ? ಎಂದು ಸುರೇಶ್ ಕುಮಾರ್ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ ಮಾಡಿದ ದುರುಳ ಪತಿ