ಮಂಡ್ಯ: ಇದು ರಿಯಾಲಿಟಿ ಷೋ ಒಂದರಲ್ಲಿ ಸಕತ್ ಫೇಮಸ್ ಆಗಿರೋ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳಸಿದ್ದನಹುಂಡಿಯ ನಟ ರವಿಯ ಕಥೆ. 4 ವರ್ಷದ ಹಿಂದೆ ಮೈಸೂರು ಮೂಲದ ಬೇಬಿ ಎಂಬಾಕೆಯನ್ನು ಪ್ರೀತಿಸಿ, ಮನೆಯವರ ವಿರೋಧವಿದ್ದರೂ ಮದುವೆಯಾಗಿದ್ದರು ಇವರು.
ಮದುವೆಗೆ ಇಷ್ಟವಿಲ್ಲದಿದ್ದರೂ ಬೇಬಿ, ರವಿಯನ್ನು ಕಾಡಿಸಿ ಪೀಡಿಸಿ ಮದುವೆಯಾಗಿದ್ದಳು. ಈ ಮದುವೆಗೆ ಮನೆಯವರ ವಿರೋಧವೂ ಇತ್ತು. ಇದೇ ಕಾರಣಕ್ಕೆ ರಿಯಾಲಿಟಿ ಷೋನಲ್ಲಿ ಬಂದ ಸಂದರ್ಭದಲ್ಲಿ ರವಿಯ ಅಪ್ಪ-ಅಮ್ಮನ ಎದುರು ರವಿಯಿಂದ ಬೇಬಿಗೆ ತಾಳಿಯನ್ನೂ ಕಟ್ಟಿಸಲಾಗಿತ್ತು. ಇವರನ್ನು ಆದರ್ಶ ಪತಿ,ಪತ್ನಿ ಎಂದೇ ಹೊಗಳಲಾಗಿತ್ತು. ಆದರೆ ಈಗ ಬೇಬಿ ಯೂಟರ್ನ್ ಹೊಡೆದಿದ್ದು, ಪತಿಯನ್ನು ಬಿಟ್ಟು ಹೋಗಿದ್ದಾಳೆ.
ಇದಕ್ಕೆ ಕಾರಣ ಕರೊನಾದಿಂದಾಗಿ ರವಿಗೆ ಯಾವುದೇ ಕೆಲಸ ಇಲ್ಲದೇ ಸಂಪಾದನೆ ಇಲ್ಲದಿರುವುದು. ಈ ಬಗ್ಗೆ ಗೋಳು ತೋಡಿಕೊಂಡಿರುವ ರವಿ, ನನ್ನ ಬಳಿ ಹಣ ಇಲ್ಲ ಎನ್ನುವ ಕಾರಣಕ್ಕೆ ಪತ್ನಿ ಮತ್ತೊಬ್ಬನ ಜತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ನಿನ್ನ ಬಳಿ ದುಡ್ಡಿಲ್ಲ,. ನನಗೆ ಬೇಡ, ಅವನನ್ನೇ ಮದುವೆಯಾಗುತ್ತೇನೆ ಎಂದಿದ್ದು, ಈಗಾಗಲೇ ಮದ್ವೆ ಕೂಡ ಆಗಿದ್ದಾಳೆ ಎಂದಿದ್ದಾರೆ.
ಈ ಮದುವೆ ತಡೆಯಲು ಹೋದ ನನ್ನ ಮೇಲೂ ಇಬ್ಬರೂ ಸೇರಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. ತನಗಾದ ಮೋಸದಂತೆ ಮತ್ಯಾರಿಗೂ ಆಗಬಾರದು, ಆಕೆಗೆ ಶಿಕ್ಷೆ ಆಗಬೇಕು ಅಂತ ಕಲಾವಿದ ರವಿ ಪಟ್ಟು ಹಿಡಿದಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ನೇಣಿಗೆ ಶರಣಾದ ಖ್ಯಾತ ನಟಿಯ ಆತ್ಮಹತ್ಯೆ ಪ್ರಕರಣ ಭೇದಿಸಿದ ಪೊಲೀಸರು