More

    ಎಸ್​.ಎಲ್.ಧರ್ಮೇಗೌಡ ನಿಧನ: ಶಾಸಕ ಸಿ.ಟಿ.ರವಿ ಕಂಬನಿ

    ಚಿಕ್ಕಮಗಳೂರು: ಆಘಾತಕಾರಿ ಸುದ್ದಿ ಕೇಳಿದ ತತ್​​ಕ್ಷಣವೇ ಗುಣಸಾಗರಕ್ಕೆ ಧಾವಿಸಿದ ಶಾಸಕ ಸಿ.ಟಿ.ರವಿ ಪೊಲೀಸರು ಮತ್ತು ಅಧಿಕಾರಿಗಳೊಂದಿಗೆ ಮುಂದಿನ ಕಾರ್ಯಗಳಿಗೆ ಸೂಚನೆಗಳನ್ನು ನೀಡಿದ್ದರು. ಅಗಲಿದ ಆತ್ಮೀಯ ಧರ್ಮೇಗೌಡರ ಬಗ್ಗೆ ಕಂಬನಿ ಮಿಡಿದ ಅವರು ಫೇಸ್​ಬುಕ್​ನಲ್ಲಿ ದುಃಖವನ್ನು ಹಂಚಿಕೊಂಡದ್ದು ಹೀಗೆ..
    ನನ್ನ ಆತ್ಮೀಯರೂ, ಜೆ.ಡಿ.ಎಸ್ ಪಕ್ಷದ ಮುಖಂಡರು ಹಾಗೂ ವಿಧಾನ ಪರಿಷತ್ತಿನ ಮಾನ್ಯ ಉಪಸಭಾಪತಿಯವರಾಗಿದ್ದ ಶ್ರೀ ಎಸ್ ಎಲ್ ಧರ್ಮೇಗೌಡ ಅವರು ಅಕಾಲಿಕವಾಗಿ ಇಂದು ನಮ್ಮನ್ನಗಲಿದ್ದಾರೆ.
    ಬೀರೂರು ಕ್ಷೇತ್ರದ ಮಾಜಿ ಶಾಸಕ ದಿವಂಗತ ಲಕ್ಷ್ಮಯ್ಯನವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡರ ಸಹೋದರರಾದ ಶ್ರೀ ಎಸ್ ಎಲ್ ಧರ್ಮೇಗೌಡರು ಚಿಕ್ಕಮಗಳೂರು ಜಿಲ್ಲೆಯ ಸಹಕಾರಿ ಕ್ಷೇತ್ರದ ಪ್ರಮುಖರಾಗಿದ್ದರು. ಗ್ರಾಮ ಮಟ್ಟದ ” ಗ್ರಾಮೀಣ ವ್ಯವಸಾಯ ಸೇವಾ ಸಂಘ”ದಿಂದ ಪ್ರಾರಂಭಿಸಿ ಅಂತರಾಷ್ಟ್ರೀಯ ಮಟ್ಟದ “ಇಂಟರ್ ನ್ಯಾಷನಲ್ ಕೋ ಆಪರೇಟಿವ್ ಅಲಯನ್ಸ್”ವರೆಗೂ ಸಹಕಾರಿ ರಂಗದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ರಾಜಕೀಯ ಜೀವನದಲ್ಲಿ ಉದ್ದೇಬೋರನ ಹಳ್ಳಿಯ ಮಂಡಲ ಪಂಚಾಯತಿ ಪ್ರಧಾನರಾಗಿ, ಚಿಕ್ಕಮಗಳೂರು ತಾಲ್ಲೂಕು ಪಂಚಾಯತಿ ಸದಸ್ಯರಾಗಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಸದಸ್ಯರಾಗಿ, 2004ರಲ್ಲಿ ಬೀರೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದ ಧರ್ಮೇಗೌಡರು 2018 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, ವಿಧಾನ ಪರಿಷತ್ತಿನ ಉಪಸಭಾಪತಿ ಹುದ್ದೆಯನ್ನು ಅಲಂಕಸಿರಿದ್ದರು.
    ಶ್ರೀಯುತರ ಅಕಾಲಿಕ ಮೃತ್ಯು ಚಿಕ್ಕಮಗಳೂರ ಜನತೆಗೆ ತುಂಬಲಾರದ ನಷ್ಟ. ಅಗಲಿದ ಅವರಾತ್ಮಕ್ಕೆ ಶಾಂತಿ ಪ್ರಾಪ್ತಿಯಾಗಲಿ, ಅವರ ಕುಟುಂಬಕ್ಕೆ, ಅಭಿಮಾನಿ ವರ್ಗಕ್ಕೆ, ಸ್ನೇಹಿತರ ಬಳಗಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀದೇವರು ಕರುಣಿಸಲಿ ಎಂದು ಪ್ರಾರ್ಥಿಸೋಣ. #ಓಂಶಾಂತಿಃ #OmShanthi

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಡೆತ್​​ನೋಟ್​ ಬರೆದಿಟ್ಟಿದ್ರಾ ಧರ್ಮೇಗೌಡರು!?

    ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ನಿಧನ: ಸಂತಾಪ ಸೂಚಿಸಿದ ಮುಖ್ಯಮಂತ್ರಿ ಮತ್ತು ಇತರೆ ಗಣ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts