More

    ‘ಪೈಲ್ವಾನ್​’ ನಂತರ ಎರಡು ಚಿತ್ರಗಳೊಂದಿಗೆ ವಾಪಸ್ಸಾದ ಕೃಷ್ಣ

    ಬೆಂಗಳೂರು: ‘ಪೈಲ್ವಾನ್​’ ನಂತರ ಎಸ್​. ಕೃಷ್ಣ ಮುಂದೇನು ಮಾಡುತ್ತಾರೆ? ಯಾರಿಗೆ ಯಾವ ಚಿತ್ರ ನಿರ್ದೇಶನ ಮಾಡುತ್ತಾರೆ? ಎಂಬಂತಹ ಪ್ರಶ್ನೆಗಳು ಜನರ ಮನಸ್ಸಿನಲ್ಲಿದ್ದವು. ಈ ಮಧ್ಯೆ, ನಿಖಿಲ್​ ಕುಮಾರ್​ಗೆ ಕೃಷ್ಣ ಒಂದು ಚಿತ್ರ ಮಾಡುವ ಸುದ್ದಿಯಾಗಿತ್ತು. ಆದರೆ, ಸದ್ಯಕ್ಕೆ ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ.

    ಇದನ್ನೂ ಓದಿ: ಐಎಸ್​ಡಿ ಕೇಳಿದ 40 ಪ್ರಶ್ನೆಗೆ ‘ಬ್ರಹ್ಮಗಂಟು’ ಗೀತಾ ಕೊಟ್ಟ ಉತ್ತರ ಇಲ್ಲಿದೆ…

    ಹಾಗಾದರೆ, ಕೃಷ್ಣ ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಇದೀಗ ಕೊನೆಗೂ ಉತ್ತರ ಸಿಕ್ಕಿದೆ. ತಮ್ಮ ನಿರ್ಮಾಣ ಸಂಸ್ಥೆಯಿಂದ ಎರಡು ಚಿತ್ರಗಳನ್ನು ನಿರ್ಮಿಸುವುದಕ್ಕೆ ಕೃಷ್ಣ ಉದ್ದೇಶಿಸಿದ್ದು, ಇಂದು ಆ ಚಿತ್ರಗಳ ಸ್ಕ್ರಿಪ್ಟ್​ ಪೂಜೆಯನ್ನು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮುಗಿಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಸ್ವಪ್ನ ಕೃಷ್ಣ ಜತೆಗಿದ್ದಾರೆ.

    ಈ ಎರಡು ಚಿತ್ರಗಳ ಪೈಕಿ ಒಂದು ಚಿತ್ರವನ್ನು ಕೃಷ್ಣ ಅವರೇ ನಿರ್ದೇಶನ ಮಾಡುತ್ತಾರಂತೆ. ಇನ್ನೊಂದರ ಜವಾಬ್ದಾರಿಯನ್ನು ಅವರು ಬೇರೆಯವರ ಹೆಗಲಿಗೆ ಏರಿಸಿದ್ದಾರೆ. ಈ ಚಿತ್ರಗಳು ಯಾವಾಗ ಪ್ರಾರಂಭವಾಗುತ್ತವೆ ಮತ್ತು ಈ ಚಿತ್ರಗಳಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಪ್ರಶ್ನೆ ಸಹಜವೇ?

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಕೃಷ್ಣ, ‘ಸದ್ಯಕ್ಕೆ ಒಂದಿಷ್ಟು ಕಲಾವಿದರ ಜತೆಗೆ ಮಾತುಕತೆಯಾಗಿದೆ. ಆದರೆ, ಸದ್ಯಕ್ಕೆ ಅವರೆಲ್ಲಾ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಬೇಕಿದೆ. ಮೊದಲು ಆ ಚಿತ್ರಗಳನ್ನು ಮುಗಿಸಿ, ನಂತರ ನಮ್ಮ ಚಿತ್ರದ ಕಡೆ ಬರಲಿದ್ದಾರೆ. ಈಗಷ್ಟೇ ಒಂದೊಂದೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿರುವುದರಿಂದ, ಈ ಕುರಿತು ಸ್ಪಷ್ಟತೆ ಸಿಗುವುದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಬಹುಶಃ ಅಕ್ಟೋಬರ್​ ಎರಡನೆಯ ವಾರದ ನಂತರ ಒಂದು ಸ್ಪಷ್ಟ ಚಿತ್ರಣ ಸಿಗಬಹುದು’ ಎನ್ನುತ್ತಾರೆ ಅವರು.

    ಇದನ್ನೂ ಓದಿ: ರಿಯಾ ಜಾಮೀನು ಅರ್ಜಿ ವಜಾ … ಅಕ್ಟೋಬರ್​ 06ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

    ಎರಡು ಚಿತ್ರಗಳ ಜತೆಗೆ, ಇಂದು ಹೊಸ ಧಾರಾವಾಹಿಯ ಸ್ಕ್ರಿಪ್ಟ್​ ಪೂಜೆಯನ್ನೂ ಅವರು ಮುಗಿಸಿಕೊಂಡು ಬಂದಿದ್ದಾರೆ. ಈ ಧಾರಾವಾಹಿಯು ಜೀ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

    ಮದುವೆಯಾದ ಹತ್ತೇ ದಿನಕ್ಕೆ ಗಂಡನನ್ನು ಜೈಲಿಗಟ್ಟಿದ ಪೂನಂ ಪಾಂಡೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts