More

    ಸೂರ್ಯನೊಬ್ಬನಿದ್ದರೆ ಆಹಾರವೇ ಬೇಡ ಎನ್ನುತ್ತ 27 ವರ್ಷ ಉಪವಾಸವಿದ್ದು ಬದುಕಿದ್ದ ಅಚ್ಚರಿಯ ಸಾಧಕನ ನಿಧನ

    ತಿರುವನಂತಪುರ (ಕೇರಳ) : 1995ರಿಂದ ಆಹಾರ ಸೇವನೆಯಿಲ್ಲದೆ ಬದುಕಿದ್ದ ಕುತೂಹಲದ ವ್ಯಕ್ತಿ ಹಡಗು ಉದ್ಯಮಿ, ಹೀರಾ ರತನ್ ಮಾಣೆಕ್ ಅವರು ಮೃತಪಟ್ಟಿದ್ದಾರೆ. ಇವರಿಗೆ 84 ವರ್ಷ ವಯಸ್ಸಾಗಿತ್ತು.

    ದೇಹವು ಸೂರ್ಯನಿಂದ ಶಕ್ತಿಯನ್ನು ಪಡೆದುಕೊಂಡಾಗ ಅದು ಅದು ಚಿಪ್ ಆಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನಿಂದ ನೀವು ಪಡೆಯುವ ಶಕ್ತಿಯೊಂದಿಗೆ ಆಹಾರವಿಲ್ಲದೆ ನೀರನ್ನು ಮಾತ್ರ ಕುಡಿಯುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಹೇಳುತ್ತಿದ್ದ ಮಾಣೆಕ್ ಅವರು, ಸೌರ ಶಕ್ತಿ ಮತ್ತು ನೀರನ್ನು ಮಾತ್ರ ಬಳಸಿಕೊಂಡು ತಮ್ಮ ಬದುಕನ್ನು ಕಳೆದ 18 ವರ್ಷಗಳಿಂದ ಸಾಗಿಸುತ್ತಿದ್ದರು.

    2002ರ ಜುಲೈನಿಂದ ನವೆಂಬರ್‌ರವರೆಗೆ, ಅಮೆರಿಕನ್ ಬಾಹ್ಯಾಕಾಶ ಕೇಂದ್ರ (ನಾಸ) ಅವರನ್ನು ಆಹ್ವಾನಿಸಿತ್ತು. ಅವರ ಮೇಲೆ ಸಂಶೋಧನೆ ಕೂಡ ನಡೆಸಿತು. ಮಾನವರು ಬಾಹ್ಯಾಕಾಶ ಪರಿಶೋಧನೆಗೆ ಹೋದಾಗ ಹೀರಾ ರತನ್ ಅವರ ಜೀವನ ಪರಿಸ್ಥಿತಿಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಅಧ್ಯಯನವನ್ನು ಆ ವೇಳೆ ಮಾಡಲಾಗಿತ್ತು.

    ಮಾಣೆಕ್ ಹುಟ್ಟಿ ಬೆಳೆದದ್ದು ಕೇರಳ ಕೋಯಿಕ್ಕೋಡ್​​ನಲ್ಲಿ. ಇವರ ಕುಟುಂಬವು ಮೂಲತಃ ಗುಜರಾತ್‌ನ ಕಚ್‌ನಿಂದ ಇಲ್ಲಿಗೆ ವಲಸೆ ಬಂದಿತ್ತು. 1962ರಲ್ಲಿ ಪಾಂಡಿಚೇರಿಯ ಅರಬಿಂದೋ ಆಶ್ರಮಕ್ಕೆ ಭೇಟಿ ನೀಡಿದಾಗ ಸೌರ ಚಿಕಿತ್ಸೆ ಬಗ್ಗೆ ತಿಳಿದುಕೊಂಡಿದ್ದರು. ನಂತರ, ಸ್ವ ಆಸಕ್ತಿಯಿಂದ ಸೂರ್ಯನ ಧ್ಯಾನ ಮಾಡಲು ಪ್ರಾರಂಭಿಸಿದ್ದರು.

    ಮಾಣೆಕ್ ಅವರು 1992 ರಿಂದ ಪೂರ್ಣ ಪ್ರಮಾಣದ ಸೂರ್ಯನ ಆರಾಧಕರಾಗಿದ್ದರು. ಸೂರ್ಯೋದಯದ ಒಂದು ಗಂಟೆಯ ನಂತರ ಮತ್ತು ಸೂರ್ಯಾಸ್ತದ ಒಂದು ಗಂಟೆಯ ಮೊದಲು ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅವರ ಆರಾಧನಾ ಕ್ರಮವಾಗಿತ್ತು. ಆರಂಭದಲ್ಲಿ ಸೂರ್ಯನನ್ನು ನೋಡುವುದು ಕೆಲವು ಸೆಕೆಂಡುಗಳ ಕಾಲ ತೆಗೆದುಕೊಳ್ಳುತ್ತದೆ. ಆದರೆ ಏಳು ತಿಂಗಳೊಳಗೆ ಅದನ್ನು ಅರ್ಧ ಘಂಟೆಯವರೆಗೆ ಹೆಚ್ಚಿಸಬಹುದು. ಒಂಬತ್ತು ತಿಂಗಳೊಳಗೆ ದೇಹವು ಶಕ್ತಿಯ ಉಗ್ರಾಣವಾಗುತ್ತದೆ. ಇದರಿಂದ ಹಸಿವು ಕಳೆದು ಆಹಾರ ತ್ಯಜಿಸಬಹುದು ಎಂದು ಅವರು ಹೇಳಿದ್ದರು.

    ಜೂನ್ 1995 ರಲ್ಲಿ ಇವರು 213 ದಿನಗಳ ಕಾಲ ಉಪವಾಸ ಮಾಡಿದ್ದರು. ಈ ಪ್ರಯೋಗವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮತ್ತು ಬಾಯಾರಿಕೆಯಾದಾಗ ನೀರು ಕುಡಿಯುವುದನ್ನು ಒಳಗೊಂಡಿತ್ತು. ನಂತರ 2000 ಜನವರಿಯಿಂದ 2001 ಫೆಬ್ರವರಿ 15ರವರೆಗೆ ಅಂದರೆ ಸತತ 411 ದಿನಗಳ ಕಾಲ ಉಪವಾಸ ಮಾಡಿದ್ದರು. ಈ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದರು. ಇದಾದ ನಂತರ ಅವರ ಮೇಲಿನ ಎರಡನೇ ಪ್ರಯೋಗವನ್ನು ಅಂದಿನ ಐಎಂಎ ಮುಖ್ಯಸ್ಥರ ನೇತೃತ್ವದಲ್ಲಿ 21 ವೈದ್ಯರ ಮೇಲ್ವಿಚಾರಣೆಯಲ್ಲಿ ನಡೆಸಲಾಗಿತ್ತು.

    ಪೆನ್ಸಿಲ್ವೇನಿಯಾ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾನಿಲಯಗಳ ಆಹ್ವಾನದ ಮೇರೆಗೆ ಮಾಣೆಕ್ ಅವರು ಉಪನ್ಯಾಸಗಳನ್ನು ನೀಡಲು ಯುಎಸ್​ಗೂ ಹೋಗಿ ಬಂದಿದ್ದರು ಮತ್ತು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ್ದರು. ಯುರೋಪ್ ಮತ್ತು ಅಮೆರಿಕದಲ್ಲಿ ನಡೆದ ಹಲವಾರು ಕಾರ್ಯಾಗಾರಗಳಲ್ಲಿ ಇವರು ಭಾಗವಹಿಸಿದ್ದರು. ಈ ವಿಷಯದ ಸಂಬಂಧ ಅವರು ಐವತ್ತಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು.

    ಸೂರ್ಯನ ಆರಾಧನೆಯನ್ನು ಅಭ್ಯಾಸ ಮಾಡುವ ಗಗನಯಾತ್ರಿಗಳು ಆಹಾರವಿಲ್ಲದೆ ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಈ ಪ್ರಯೋಗಕ್ಕೆ ಭಾರತದಲ್ಲಿ ಸೂಕ್ತ ಪರಿಗಣನೆ ಸಿಗುತ್ತಿಲ್ಲ ಎಂಬ ಬೇಸರವನ್ನು ಈ ಹಿಂದೆ ಅವರು ವ್ಯಕ್ತಪಡಿಸಿದ್ದರು.

    ಮೊಬೈಲ್‌ ರಿಪೇರಿ ಮಾಡುತ್ತಿದ್ದ ಮಗನೀಗ ಶಾಸಕ: ಶಾಲೆಯಲ್ಲಿ ಕಸಗುಡಿಸೋದನ್ನು ಮುಂದುವರೆಸಿದ ಅಮ್ಮ

    ಒಂದೇ ದಿನ 81 ಮಂದಿಗೆ ಗಲ್ಲು: ಉಗ್ರರು, ದೇಶದ್ರೋಹಿಗಳು, ರೇಪಿಸ್ಟ್‌ಗಳ ಕೊರಳಿಗೆ ನೇಣು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts