More

    ಸಿಡಿ ಲೇಡಿಯ ಪರ ವಕೀಲನಿಗೆ ಬಂತು ಕುತ್ತು… ವಕೀಲಿವೃತ್ತಿ ನಡೆಸುವ ಪರವಾನಗಿ ಆಯ್ತು ಅಮಾನತು!

    ಬೆಂಗಳೂರು: ಒಂದೆಡೆ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಿರುವ ಬೆನ್ನಲ್ಲೇ ಇದೀಗ ಸಿಡಿಯಲ್ಲಿರುವ ಯುವತಿಯ ಪರವಾಗಿ ವಕಾಲತು ವಹಿಸಿದ್ದ ವಕೀಲರನ ವಕೀಲಿವೃತ್ತಿಗೇ ಕುತ್ತು ಬಂದಿದೆ!

    ಮಾಧ್ಯಮಗಳ ಮುಂದೆ ಸಿಡಿ ಲೇಡಿಯ ಪರವಾಗಿ ಕೆ.ಎನ್​. ಜಗದೀಶ್​ ಅವರು ಮಾಹಿತಿ ನೀಡುತ್ತಿದ್ದರೆ, ಅಸಲಿಗೆ ಅವರು ಯುವತಿಯ ಪರವಾದ ನಿಜವಾದ ವಕೀಲರಲ್ಲ. ಬದಲಿಗೆ ಜಗದೀಶ್​ ಅವರ ಪಕ್ಕ ಇರುವ ಆರ್​.ಮಂಜುನಾಥ್​ ಅವರು ಯುವತಿಯ ಪರವಾಗಿ ವಕಾಲತ್ತು ವಹಿಸಿದ್ದಾರೆ. ಕೋರ್ಟ್​ನಲ್ಲಿ ವಾದ ಮಾಡುತ್ತಿರುವವರು ಇದೇ ಮಂಜುನಾಥ್​.

    ಆದರೆ ಇದೀಗ ರಾಜ್ಯ ವಕೀಲರ ಪರಿಷತ್ತಿನ (ಬಾರ್​ ಕೌನ್ಸೆಲ್​) ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ತಮ್ಮ ವಕೀಲಿವೃತ್ತಿಗೆ ಕುತ್ತು ತಂದುಕೊಂಡಿದ್ದಾರೆ. ವಕೀಲರ ಪರಿಷತ್ತಿನ ವಿರುದ್ಧ ಕೆಲವು ಆರೋಪ ಮಾಡಿರುವ ಜಗದೀಶ್​ ಅವರು, ವಕೀಲರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ವೆಲ್​ಫೇರ್​ ಸ್ಟ್ಯಾಂಪ್​ಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ.

    ಸಿಡಿ ಲೇಡಿಯ ಪರ ವಕೀಲನಿಗೆ ಬಂತು ಕುತ್ತು... ವಕೀಲಿವೃತ್ತಿ ನಡೆಸುವ ಪರವಾನಗಿ ಆಯ್ತು ಅಮಾನತು!

    ಯಾವುದೇ ವಕೀಲ ಒಂದು ಕೇಸ್​ನಲ್ಲಿ ವಕಾಲತ್ತು ವಹಿಸುವಾಗ ವೆಲ್​ಫೇರ್​ ಫಂಡ್​ ಸ್ಟ್ಯಾಂಪ್​ ಆ ವಕಾಲತ್ತಿಗೆ ಅಂಟಿಸುವುದು ಕಡ್ಡಾಯವಾಗಿದೆ. ಈ ಸ್ಟ್ಯಾಂಪ್​ ಹಣದ ರೂಪದಲ್ಲಿ ಅಥವಾ ಡಿಮಾಂಡ್​ಡ್ರಾಫ್ಟ್​ ರೂಪದಲ್ಲಿ ಇರಬಹುದು. ಇದು ವಕೀಲರ ಕ್ಷೇಮಾಭ್ಯುಯದ ದೃಷ್ಟಿಯಿಂದ ಇದನ್ನು ಜಾರಿಗೊಳಿಸಲಾಗಿದೆ. ಇದರ ವಿರುದ್ಧ ಮಂಜುನಾಥ್​ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ವಕೀಲ ಸ್ಟ್ಯಾಂಪ್ ನಿಂದ ಸಂಗ್ರಹಿಸಿದ್ದ ಹಣದಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ವಕೀಲರ ಪರಿಷತ್ತು ತನ್ನ ಸಭೆಯಲ್ಲಿ ಮಂಜುನಾಥ್​ ಅವರಿಗೆ ನೋಟಿಸ್​ ನೀಡಿದ್ದು, ಮುಂದಿನ ಆದೇಶದವರೆಗೆ ಸನ್ನದನ್ನು ಅಮಾನತುಗೊಳಿಸಿದೆ. ಯಾವುದೇ ವಕೀಲ ವಕೀಲಿವೃತ್ತಿ ನಡೆಸಲು ಅಥವಾ ಯಾವುದೇ ಕೇಸ್​ನಲ್ಲಿ ವಾದ ಮಂಡಿಸಲು ಈ ಸನ್ನದು ಅನುಮತಿಯ ಪತ್ರವಿದ್ದಂತೆ. ಇದು ಇಲ್ಲದಿದ್ದರೆ ವಕೀಲಿವೃತ್ತಿಯನ್ನು ನಡೆಸಲು ಆಗುವುದಿಲ್ಲ.

    10 ದಿನಗಳ ಒಳಗೆ ಉತ್ತರಿಸುವಂತೆ ಮಂಜುನಾಥ್​ ಅವರಿಗೆ ನೋಟಿಸ್​ ನೀಡಿರುವ ವಕೀಲರ ಪರಿಷತ್ತು ತನಿಖೆ ಮುಗಿಯವವರೆಗೆ ಮಂಜುನಾಥ್​ ಅವರು ವಕೀಲಿವೃತ್ತಿ ನಡೆಸದಂತೆ ಅವರ ಸನ್ನದನ್ನು ಅಮಾನತಿನಲ್ಲಿ ಇಟ್ಟಿದೆ.

    VIDEO: ಇಂಟರ್​ಕೋರ್ಸ್​ ಮಾಡಿಲ್ಲ ಅಂತ ಯಾವ್ ಬಾಯಲ್ಲಿ ಹೇಳ್ತಾನ್ರಿ…? ಪರೀಕ್ಷೆ ಮಾಡ್ತಾರೆ, ತಪ್ಪಿಸಿಕೊಳ್ಳೋದು ಸಾಧ್ಯನೇ ಇಲ್ಲ…

    ಸಿಡಿ ಲೇಡಿ ಪರವಾಗಿ ಕೋರ್ಟ್​ನಲ್ಲಿ ವಾದಿಸುತ್ತಿರುವುದು ಜಗದೀಶ್ ಅಲ್ಲ, ಸುಮ್ಮನೇ ಬೀದಿ ರಂಪಾಟ: ಎಸ್​ಐಟಿ ದೂರು

    ‘ವಿಡಿಯೋ ಮಾಡಿದ್ದು ನಾನೇ… ಸಿಡಿ ವೈರಲ್​ ಆದ್ಮೇಲೆ ಗೆಳೆಯನ ಜತೆ ಗೋವಾಕ್ಕೆ ಹೋದೆ…’

    ಅತ್ಯಾಚಾರ ಸಂತ್ರಸ್ತೆಯ ದೂರು ಸ್ವೀಕರಿಸಲು ಮಲಗು ಬಾ ಎಂದ ಎಸಿಪಿ! ಕಾಮುಕ ಪೊಲೀಸ್​ ವಜಾ

    ಜಾರಕಿಹೊಳಿ ಇಂದೂ ಗೈರು- ಸಿಡಿ ಯುವತಿಯನ್ನು ಎದುರಿಸಲಾಗದೇ ಸಾಹುಕಾರ್​ಗೆ ಹುಷಾರ್​ ತಪ್ಪಿತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts