ಬೆಂಗಳೂರು: ಒಂದೆಡೆ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಿರುವ ಬೆನ್ನಲ್ಲೇ ಇದೀಗ ಸಿಡಿಯಲ್ಲಿರುವ ಯುವತಿಯ ಪರವಾಗಿ ವಕಾಲತು ವಹಿಸಿದ್ದ ವಕೀಲರನ ವಕೀಲಿವೃತ್ತಿಗೇ ಕುತ್ತು ಬಂದಿದೆ!
ಮಾಧ್ಯಮಗಳ ಮುಂದೆ ಸಿಡಿ ಲೇಡಿಯ ಪರವಾಗಿ ಕೆ.ಎನ್. ಜಗದೀಶ್ ಅವರು ಮಾಹಿತಿ ನೀಡುತ್ತಿದ್ದರೆ, ಅಸಲಿಗೆ ಅವರು ಯುವತಿಯ ಪರವಾದ ನಿಜವಾದ ವಕೀಲರಲ್ಲ. ಬದಲಿಗೆ ಜಗದೀಶ್ ಅವರ ಪಕ್ಕ ಇರುವ ಆರ್.ಮಂಜುನಾಥ್ ಅವರು ಯುವತಿಯ ಪರವಾಗಿ ವಕಾಲತ್ತು ವಹಿಸಿದ್ದಾರೆ. ಕೋರ್ಟ್ನಲ್ಲಿ ವಾದ ಮಾಡುತ್ತಿರುವವರು ಇದೇ ಮಂಜುನಾಥ್.
ಆದರೆ ಇದೀಗ ರಾಜ್ಯ ವಕೀಲರ ಪರಿಷತ್ತಿನ (ಬಾರ್ ಕೌನ್ಸೆಲ್) ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ತಮ್ಮ ವಕೀಲಿವೃತ್ತಿಗೆ ಕುತ್ತು ತಂದುಕೊಂಡಿದ್ದಾರೆ. ವಕೀಲರ ಪರಿಷತ್ತಿನ ವಿರುದ್ಧ ಕೆಲವು ಆರೋಪ ಮಾಡಿರುವ ಜಗದೀಶ್ ಅವರು, ವಕೀಲರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ವೆಲ್ಫೇರ್ ಸ್ಟ್ಯಾಂಪ್ಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ.
ಯಾವುದೇ ವಕೀಲ ಒಂದು ಕೇಸ್ನಲ್ಲಿ ವಕಾಲತ್ತು ವಹಿಸುವಾಗ ವೆಲ್ಫೇರ್ ಫಂಡ್ ಸ್ಟ್ಯಾಂಪ್ ಆ ವಕಾಲತ್ತಿಗೆ ಅಂಟಿಸುವುದು ಕಡ್ಡಾಯವಾಗಿದೆ. ಈ ಸ್ಟ್ಯಾಂಪ್ ಹಣದ ರೂಪದಲ್ಲಿ ಅಥವಾ ಡಿಮಾಂಡ್ಡ್ರಾಫ್ಟ್ ರೂಪದಲ್ಲಿ ಇರಬಹುದು. ಇದು ವಕೀಲರ ಕ್ಷೇಮಾಭ್ಯುಯದ ದೃಷ್ಟಿಯಿಂದ ಇದನ್ನು ಜಾರಿಗೊಳಿಸಲಾಗಿದೆ. ಇದರ ವಿರುದ್ಧ ಮಂಜುನಾಥ್ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ವಕೀಲ ಸ್ಟ್ಯಾಂಪ್ ನಿಂದ ಸಂಗ್ರಹಿಸಿದ್ದ ಹಣದಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ವಕೀಲರ ಪರಿಷತ್ತು ತನ್ನ ಸಭೆಯಲ್ಲಿ ಮಂಜುನಾಥ್ ಅವರಿಗೆ ನೋಟಿಸ್ ನೀಡಿದ್ದು, ಮುಂದಿನ ಆದೇಶದವರೆಗೆ ಸನ್ನದನ್ನು ಅಮಾನತುಗೊಳಿಸಿದೆ. ಯಾವುದೇ ವಕೀಲ ವಕೀಲಿವೃತ್ತಿ ನಡೆಸಲು ಅಥವಾ ಯಾವುದೇ ಕೇಸ್ನಲ್ಲಿ ವಾದ ಮಂಡಿಸಲು ಈ ಸನ್ನದು ಅನುಮತಿಯ ಪತ್ರವಿದ್ದಂತೆ. ಇದು ಇಲ್ಲದಿದ್ದರೆ ವಕೀಲಿವೃತ್ತಿಯನ್ನು ನಡೆಸಲು ಆಗುವುದಿಲ್ಲ.
10 ದಿನಗಳ ಒಳಗೆ ಉತ್ತರಿಸುವಂತೆ ಮಂಜುನಾಥ್ ಅವರಿಗೆ ನೋಟಿಸ್ ನೀಡಿರುವ ವಕೀಲರ ಪರಿಷತ್ತು ತನಿಖೆ ಮುಗಿಯವವರೆಗೆ ಮಂಜುನಾಥ್ ಅವರು ವಕೀಲಿವೃತ್ತಿ ನಡೆಸದಂತೆ ಅವರ ಸನ್ನದನ್ನು ಅಮಾನತಿನಲ್ಲಿ ಇಟ್ಟಿದೆ.
ಸಿಡಿ ಲೇಡಿ ಪರವಾಗಿ ಕೋರ್ಟ್ನಲ್ಲಿ ವಾದಿಸುತ್ತಿರುವುದು ಜಗದೀಶ್ ಅಲ್ಲ, ಸುಮ್ಮನೇ ಬೀದಿ ರಂಪಾಟ: ಎಸ್ಐಟಿ ದೂರು
‘ವಿಡಿಯೋ ಮಾಡಿದ್ದು ನಾನೇ… ಸಿಡಿ ವೈರಲ್ ಆದ್ಮೇಲೆ ಗೆಳೆಯನ ಜತೆ ಗೋವಾಕ್ಕೆ ಹೋದೆ…’
ಅತ್ಯಾಚಾರ ಸಂತ್ರಸ್ತೆಯ ದೂರು ಸ್ವೀಕರಿಸಲು ಮಲಗು ಬಾ ಎಂದ ಎಸಿಪಿ! ಕಾಮುಕ ಪೊಲೀಸ್ ವಜಾ
ಜಾರಕಿಹೊಳಿ ಇಂದೂ ಗೈರು- ಸಿಡಿ ಯುವತಿಯನ್ನು ಎದುರಿಸಲಾಗದೇ ಸಾಹುಕಾರ್ಗೆ ಹುಷಾರ್ ತಪ್ಪಿತಾ?