ಕೊಲ್ಲಂ: ಬೈಕ್ ಸ್ಟಂಟ್ ಮಾಡಲು ಹೋಗಿ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಕೇರಳದ ಕೊಲ್ಲಂನ ಕೊಟ್ಟಾರಕ್ಕರದಲ್ಲಿ ನಡೆದಿದೆ.
ವಿದ್ಯಾರ್ಥಿಗಳ ಗುಂಪೊಂದು ಸೆಲ್ಫಿ ತೆಗೆದುಕೊಳ್ಳುವ ಉದ್ದೇಶದಿಂದ ಬೈಕ್ ಸ್ಟಂಟ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಬಿಎ ವಿದ್ಯಾರ್ಥಿ ಆಶ್ವಂತ್ ಕೃಷ್ಣ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಇದೇ ವೇಳೆ ಎದುರುಗಡೆಯಿಂದ ಬುಲೆಟ್ ಬರುತ್ತಿತ್ತು. ಅದು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆಯಿಂದ ಬೈಕ್ ಸಂಪೂರ್ಣ ಜಖಂಗೊಂಡಿದೆ. ಆಶ್ವಂತ್ ಹಿಂದಿನಿಂದ ಬರುತ್ತಿದ್ದ ಕೆಲ ವಿದ್ಯಾರ್ಥಿಗಳ ಬೈಕ್ ಸಹ ಘಟನೆಯಲ್ಲಿ ಜಖಂಗೊಂಡಿವೆ. ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್ ಸ್ಟಂಟ್ ವೇಳೆ 100 ಕಿಲೋಮೀಟರ್ಗೂ ವೇಗವಾಗಿ ಬೈಕ್ ಚಲಿಸುತ್ತಿತ್ತು ಎನ್ನಲಾಗಿದೆ.
ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಲು ಕಾರಣನಾಗಿದ್ದ ರಾಜಕೀಯ ಮುಖಂಡ ಅರೆಸ್ಟ್!
ಪ್ರಿಯಕರನ ಮೇಲೆ ಕೋಪಗೊಂಡು ಆತನಿಗೆ ಕಳುಹಿಸಿದಳೊಂದು ಮೆಸೇಜ್- ಮರಣದಂಡನೆ ವಿಧಿಸಿದ ಕೋರ್ಟ್!