More

    ಸೆಲ್ಫಿ ಹುಚ್ಚಿಗೆ ಬೈಕ್‌ ಸ್ಟಂಟ್‌- ಸಾವು ಬದುಕಿನ ನಡುವೆ ವಿದ್ಯಾರ್ಥಿ: ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ

    ಕೊಲ್ಲಂ: ಬೈಕ್​​ ಸ್ಟಂಟ್ ಮಾಡಲು ಹೋಗಿ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಕೇರಳದ ಕೊಲ್ಲಂನ ಕೊಟ್ಟಾರಕ್ಕರದಲ್ಲಿ ನಡೆದಿದೆ.

    ವಿದ್ಯಾರ್ಥಿಗಳ ಗುಂಪೊಂದು ಸೆಲ್ಫಿ ತೆಗೆದುಕೊಳ್ಳುವ ಉದ್ದೇಶದಿಂದ ಬೈಕ್​​ ಸ್ಟಂಟ್​ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಬಿಎ ವಿದ್ಯಾರ್ಥಿ ಆಶ್ವಂತ್​ ಕೃಷ್ಣ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಇದೇ ವೇಳೆ ಎದುರುಗಡೆಯಿಂದ ಬುಲೆಟ್‌ ಬರುತ್ತಿತ್ತು. ಅದು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಘಟನೆಯಿಂದ ಬೈಕ್​ ಸಂಪೂರ್ಣ ಜಖಂಗೊಂಡಿದೆ. ಆಶ್ವಂತ್​ ಹಿಂದಿನಿಂದ ಬರುತ್ತಿದ್ದ ಕೆಲ ವಿದ್ಯಾರ್ಥಿಗಳ ಬೈಕ್ ಸಹ ಘಟನೆಯಲ್ಲಿ ಜಖಂಗೊಂಡಿವೆ. ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್​ ಸ್ಟಂಟ್​ ವೇಳೆ 100 ಕಿಲೋಮೀಟರ್​ಗೂ ವೇಗವಾಗಿ ಬೈಕ್​ ಚಲಿಸುತ್ತಿತ್ತು ಎನ್ನಲಾಗಿದೆ.

    ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಲು ಕಾರಣನಾಗಿದ್ದ ರಾಜಕೀಯ ಮುಖಂಡ ಅರೆಸ್ಟ್‌!

    ಪ್ರಿಯಕರನ ಮೇಲೆ ಕೋಪಗೊಂಡು ಆತನಿಗೆ ಕಳುಹಿಸಿದಳೊಂದು ಮೆಸೇಜ್‌- ಮರಣದಂಡನೆ ವಿಧಿಸಿದ ಕೋರ್ಟ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts