ಶ್ರೀನಗರ: ಜಮ್ಮು ಕಾಶ್ಮೀರ ಬಾರಮುಲ್ಲಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೊನ್ನೆಯಷ್ಟೇ ಉಗ್ರರ ದಾಳಿಗೆ ಸಿಆರ್ಪಿಎಫ್ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾದ ಬೆನ್ನಲ್ಲೇ ಸೇನೆ ಇಂದು ಬೆಳಗ್ಗೆ ರಾಷ್ಟ್ರೀಯ ರೈಫಲ್ಸ್ನ ಮೇಜರ್ ಒಬ್ಬರು ಗಾಯಗೊಂಡಿದ್ದಾರೆ.
ಕಳೆದ ವಾರ ಲಷ್ಕರ್ ಕಮಾಂಡರ್ ಉಗ್ರ ಸಜ್ಜದ್ನನ್ನು ಕೂಡ ಇದೇ ಸ್ಥಳದಲ್ಲಿ ಹೊಡೆದುರುಳಿಸಲಾಗಿತ್ತು. ಇದೀಗ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.
ಗುಂಡಿನ ಚಕಮಕಿ ನಡೆಯುತ್ತಿದೆ. ಬಾರಾಮುಲ್ಲಾ ಜಿಲ್ಲೆಯ ಪಟ್ಟಾನ್ ಪ್ರದೇಶದ ಯೆಡಿಪೋರಾದಲ್ಲಿ ನಡೆಯುತ್ತಿರುವ ಚಕಮಕಿಯಲ್ಲಿ ಭಾರತೀಯ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಜನಾಥ್ ಸಿಂಗ್ ಜತೆ ಮಾತುಕತೆಗೆ ಮುಂದಾದ ಚೀನಿ ರಕ್ಷಣಾ ಸಚಿವ
ರಾಷ್ಟ್ರೀಯ ರೈಫಲ್ಸ್, ಸಿಆರ್ ಪಿಎಫ್ ಯೋಧರು ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಕಾಶ್ಮೀರ್ ಪೊಲೀಸರು ಈ ಬಗ್ಗೆ ಟ್ವೀಟ್ ಮಾಡಿದ್ದು, ಬಾರಾಮುಲ್ಲಾದ ಯೆಡಿಪೋರಾದಲ್ಲಿ ಎನ್ ಕೌಂಟರ್ ಆರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ತಮ್ಮ ಕೆಲಸ ಆರಂಭಿಸಿದ್ದಾರೆ. ಇನ್ನಷ್ಟು ಮಾಹಿತಿಗಳನ್ನು ನೀಡಲಿದ್ದೇವೆ ಎಂದಿದ್ದಾರೆ.
ವಿಡಿಯೋ: ವಿಮಾನದೊಳಕ್ಕೆ ಸೆಖೆ ಎಂದು ಈಕೆ ಹೀಗೆ ಮಾಡೋದಾ? ಬೇಸ್ತು ಬಿದ್ದ ಪ್ರಯಾಣಿಕರು
ಎರಡೆರಡು ಬಾರಿ ಮತ ಹಾಕಿ ಎಂದು ಟ್ರಂಪ್ ಹೇಳಿದ್ದೇಕೆ? ವಿವಾದ ಮೈಮೇಲೆ ಎಳೆದುಕೊಂಡ ಅಧ್ಯಕ್ಷ!