ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಮನಗೆದ್ದ ನಟ ಪುನೀತ್ ರಾಜ್ಕುಮಾರ್ ಎಲ್ಲರನ್ನೂ ಅಗಲಿ ಇಂದಿಗೆ 11 ದಿನಗಳು ಕಳೆದಿವೆ. 11ನೇ ದಿನದ ಕಾರ್ಯಕ್ಕೆ ಕುಟುಂಬಸ್ಥರು ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ಇದಾಗಲೇ ಸಮಾಧಿ ಇರುವ ಕಂಠೀವರ ಸ್ಟುಡಿಯೋಕ್ಕೆ ಕುಟುಂಬಸ್ಥರು ಆಗಮಿಸಿ, ವಿಧಿವಿಧಾನ ಕಾರ್ಯ ನೆರವೇರಿಸುತ್ತಿದ್ದಾರೆ. ಅಪ್ಪುಗೆ ಇಷ್ಟವಾದ ಊಟವನ್ನ ಸಮಾಧಿ ಮುಂದೆ ಇಟ್ಟು ಪೂಜೆ ಮಾಡಲಿದ್ದಾರೆ. ನಾಳೆ (ಮಂಗಳವಾರ) 12 ಗಂಟೆಗೆ ಅನ್ನ ಸಂತರ್ಪಣೆ ಇರಲಿದೆ.
ಕಂಠೀರವ ಸ್ಟುಡಿಯೋದಲ್ಲಿ ಈಗ ನಡೆಯುತ್ತಿರುವ ವಿಧಿವಿಧಾನಗಳ ನೇರ ಪ್ರಸಾರ ಇಲ್ಲಿದೆ: