ಬೆಂಗಳೂರು: ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಟಿ ಕವಿತಾ ಗೌಡ ಅವರ ಅಪಹರಣದ ಭಯಾನಕ ಸಿಸಿಟಿವಿ ಫುಟೇಜ್ ವಿಡಿಯೋ ಹರಿದಾಡುತ್ತಿದೆ. ಲಕ್ಷ್ಮಿ ಬಾರಮ್ಮ ಧಾರವಾಹಿಯ ಚಿನ್ನು ಪಾತ್ರಧಾರಿಯಾಗಿ ಮನೆಮಾತಾಗಿರುವ ತಮ್ಮ ನೆಚ್ಚಿನ ನಟಿಯ ಕಿಡ್ನಾಪ್ ಆಗಿರುವುದನ್ನು ಕೇಳಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಸೆಲ್ಫಿ ಕೇಳುವ ನೆಪದಲ್ಲಿ ಕವಿತಾ ಅವರನ್ನು ಹತ್ತಿರ ಕರೆದಿದ್ದಾನೆ. ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದ ಕವಿತಾ ಆ ವ್ಯಕ್ತಿಗೆ ಸೆಲ್ಫಿ ನೀಡಲು ತಯಾರಾಗಿ ಹತ್ತಿರ ಹೋಗಿದ್ದಾರೆ. ಅದೇ ವೇಳೆ ಆ ವ್ಯಕ್ತಿ ಸೆಲ್ಫಿ ನೆಪದಲ್ಲಿ ಕಾರಿನ ಹತ್ತಿರ ಕರೆದುಕೊಂಡು ಹೋಗಿದ್ದಾನೆ. ನಂತರ ಕಾರಿನ ಒಳಗಿದ್ದ ಇನ್ನೊಬ್ಬ ವ್ಯಕ್ತಿ ಕವಿತಾರನ್ನು ಕಾರಿನೊಳಕ್ಕೆ ನೂಕಿದ್ದಾನೆ. ಇಬ್ಬರೂ ಸೇರಿ ನಟಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ.
ಈ ದೃಶ್ಯ ಸಕತ್ ವೈರಲ್ ಆಗಿದ್ದು, ತಮ್ಮ ನಟಿಗೆ ಇನ್ನೇನಾಯಿತೋ ಎಂಬ ಭಯದಲ್ಲಿ ಅಭಿಮಾನಿಗಳು ಇದ್ದರು. ಇದೀಗ ಈ ಅಪಹರಣದ ನಿಜವಾಗಿರುವ ವಿಷಯ ಏನು? ಯಾರು ಈಕೆಯನ್ನು ಅಪಹರಿಸಿದ್ದು ಎಂಬ ವಿಷಯ ಬಹಿರಂಗವಾಗಿದೆ.
ಅಷ್ಟಕ್ಕೂ, ಕವಿತಾರ ಅಭಿಮಾನಿಗಳು ಭಯಪಡುವ ಅಗತ್ಯವೇನೂ ಇಲ್ಲ. ಏಕೆಂದರೆ ಸಿಸಿಟಿವಿಯಲ್ಲಿ ಕಂಡಿರುವ ಅಪಹರಣ ದೃಶ್ಯ ನಿಜವಾದರೂ, ಇದು ನಿಜವಾಗಿ ನಡೆದ ಅಪಹರಣವಲ್ಲ! ಅಂದರೆ, ಕವಿತಾ ಅವರ ‘ಗೋವಿಂದ ಗೋವಿಂದ’ ಇದೇ 26ರಂದು ಬಿಡುಗಡೆ ಆಗುತ್ತಿದೆ. ಪ್ರಚಾರದ ದೃಷ್ಟಿಯಿಂದ ಚಿತ್ರತಂಡ ಚಿತ್ರದ ತುಣುಕೊಂದನ್ನು ರಿಲೀಸ್ ಮಾಡಲಾಗಿದ್ದು, ಈ ದೃಶ್ಯ ಕೂಡ ಅದೇ ಚಿತ್ರದ್ದಾಗಿದೆ. ಕಾಮಿಡಿ ಥ್ರಿಲ್ಲರ್ ಚಿತ್ರವಾಗಿರುವ ‘ಗೋವಿಂದ ಗೋವಿಂದ’ ಕುರಿತು ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಲು ಹೀಗೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಚಿತ್ರದಲ್ಲಿ ಕವಿತಾ ಜತೆ ಸುಮಂತ್ ಶೈಲೇಂದ್ರ ಬಾಬು, ಭಾವನಾ ಮೆನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಹಾಗೂ ಮಲಯಾಳಂನಲ್ಲೂ ತೆರೆ ಕಾಣಲಿದೆ. ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ವಿ.ಮನೋಹರ್, ಕೆ ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ ಹಲವರು ಈ ಚಿತ್ರದಲ್ಲಿದ್ದಾರೆ.
‘ಘಟನೆ ನೆನೆದರೆ ಮೈನಡಗುತ್ತಿದೆ… ರೇಪ್ಗೆ ಒಳಗಾದವಳು ನಾನೇ ಕೊನೆಯವಳಾಗಲಿ… ಬದುಕುವ ಆಸೆ ಇತ್ತು… ಆದರೆ…’