More

    ಪ್ರತಿಭಟನೆ ಹಿಂಸೆಗೆ ತಿರುಗಿಸುವ ಹುನ್ನಾರ: ಟ್ರ್ಯಾಕ್ಟರ್​ ಸುಟ್ಟು ಭಸ್ಮ ಮಾಡಿದ ಕಿಡಿಗೇಡಿಗಳು

    ನವದೆಹಲಿ: ಯಾವುದೇ ಪ್ರತಿಭಟನೆಗಳು ನಡೆದಾಗ, ಅದರ ದುರ್ಲಾಭ ಪಡೆದು ಕೆಲವು ಕಿಡಿಗೇಡಿಗಳು ಹೀನಾಯಕೃತ್ಯಕ್ಕೆ ಇಳಿಯುವುದು ಇಂದಿನ ದಿನಗಳಲ್ಲಿ ಮಾಮೂಲಾಗಿದೆ.

    ಅದೇ ರೀತಿ ನೂತನ ಕೃಷಿ ಕಾನೂನಿನ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆ ವೇಳೆ ದೆಹಲಿಯ ಪ್ರಸಿದ್ಧ ಇಂಡಿಯಾ ಗೇಟ್​ ಬಳಿ ಕಿಡಿಗೇಡಿಗಳು ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಸುಮಾರು 15-20 ಮಂದಿಯ ಗುಂಪು ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಬೆಂಕಿಗಾಹುತಿಯಾಗಿರುವ ಟ್ರ್ಯಾಕ್ಟರ್​ ಅನ್ನು ತೆರವುಗೊಳಿಸಿರುವ ಪೊಲೀಸರು ಕಿಡಿಗೇಡಿಗಳನ್ನು ಗುರುತಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಪ್ರತಿಭಟನೆಯನ್ನು ಹಿಂಸೆಗೆ ತಿರುಗಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಮಸಿಬಳಿಯುವ ಯತ್ನ ಇದಾಗಿರುವುದಾಗಿ ಹಲವರು ಆರೋಪಿಸಿದ್ದಾರೆ.

    ತಮ್ಮ ಜೀವನಾಧಾರವಾಗಿರುವ ಟ್ರ್ಯಾಕ್ಟರ್​ ಅನ್ನು ಯಾವುದೇ ಕಾರಣಕ್ಕೂ ಪ್ರತಿಭಟನಾನಿರತ ರೈತರು ಸುಡಲು ಸಾಧ್ಯವೇ ಇಲ್ಲ. ರೈತರ ಪರವಾಗಿರುವ ಕಾನೂನಿನ ವಿರುದ್ಧ ಇಲ್ಲಸಲ್ಲದ ಗುಲ್ಲು ಹಬ್ಬಿಸಿರುವ ಕೆಲವು ಕುತಂತ್ರ ಬುದ್ಧಿಯವರು ರೈತರ ತಲೆಯನ್ನು ತಿರುಗಿಸಿದ್ದಾರೆ. ಈ ಕಿಡಿಗೇಡಿಗಳೇ ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿರುವುದು ಎಂದು ಆರೋಪಗಳು ಕೇಳಿಬಂದಿವೆ.

    ಈ ಮಧ್ಯೆಯೇ ಇಂಥ ಹಿಂಸಾಚಾರಕ್ಕೆ ಕೆಲವು ರಾಜಕೀಯ ಪಕ್ಷಗಳು ಕುಮ್ಮಕ್ಕು ನೀಡುತ್ತಿವೆ ಎಂದು ಗಂಭೀರ ಆರೋಪಗಳನ್ನೂ ಮಾಡಲಾಗುತ್ತಿದೆ.

    ಜೈಲಿನೊಳಗೇ ಸುರಂಗ ತೋಡಿ ಡ್ರಗ್​ ಪೆಡ್ಲರ್​ ಎಸ್ಕೇಪ್​; ಕಣ್​ಕಣ್​ ಬಿಡ್ತಿದ್ದಾರೆ ಅಧಿಕಾರಿಗಳು!

    ಪತ್ನಿ ವಿರುದ್ಧ ಕಿರಿಕ್​ ಮಾಡಿಕೊಂಡು, ಗೆಳತಿ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿದ ಸಬ್​ಇನ್ಸ್​ಪೆಕ್ಟರ್​!

    ವಿಚ್ಛೇದನಕ್ಕೆ ಒಪ್ಪಿದವಳು ಈಗ ಕೋರ್ಟ್​ಗೆ ಬರುತ್ತಲೇ ಇಲ್ಲ: ನನಗೇನು ಪರಿಹಾರವಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts