ಹೈದರಾಬಾದ್: 95ನೇ ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ಕಳೆದ ವಾರವಷ್ಟೇ ಮುಗಿದಿದ್ದು, ಈ ಪೈಕಿ ಭಾರತಕ್ಕೆ ಎರಡು ಪ್ರಶಸ್ತಿಗಳು ಸಿಕ್ಕಿವೆ. ‘RRR’ ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಎಂದನಿಸಿಕೊಂಡರೆ, ‘ದಿ ಎಲಿಫೆಂಟ್ ವಿಸ್ಪರರ್ಸ್’ ಎಂಬ ಸಾಕ್ಷ್ಯಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಮಾರಂಭದಲ್ಲಿ ‘RRR’ ಚಿತ್ರತಂಡದವರು ಹಾಜರಿದ್ದು, ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್ ಅವರನ್ನು ಪ್ರೋತ್ಸಾಹಿಸಿದರು.
ಇದನ್ನೂ ಓದಿ: ‘ಲವ್ 360’ ಪ್ರವೀಣ್ ಈಗ ‘ದೇಸಾಯಿ’; ಬಾಗಲಕೋಟೆಯಲ್ಲಿ ಚಿತ್ರ ಪ್ರಾರಂಭ
ಈ ಪೈಕಿ, ಚಿತ್ರತಂಡದಿಂದ ಸಮಾರಂಭಕ್ಕೆ ಆಹ್ವಾನ ಸಿಕ್ಕಿದ್ದು ಕೇವಲ ಕೀರವಾಣಿ ಮತ್ತು ಚಂದ್ರಬೋಸ್ ಅವರಿಗೆ ಮಾತ್ರವಂತೆ. ಅವರಿಬ್ಬರೂ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರಿಂದ ಅವರಿಗೆ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಉಚಿತ ಪಾಸ್ ನೀಡಲಾಯಿತಂತೆ. ಮಿಕ್ಕಂತೆ RRR ಚಿತ್ರತಂಡದವರೆಲ್ಲ ದೊಡ್ಡ ಮೊತ್ತ ಖರ್ಚು ಮಾಡಿ, ಸಮಾರಂಭದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ಮೂಲಗಳ ಪ್ರಕಾರ ಆಸ್ಕರ್ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಒಂದು ಟಿಕೆಟ್ಗೆ 25 ಸಾವಿರ ಡಾಲರ್ ನಿಗದಿಪಡಿಸಲಾಗಿತ್ತಂತೆ. ಇದನ್ನು ಭಾರತೀಯ ರೂಪಾಯಿಯಲ್ಲಿ ಲೆಕ್ಕ ಹಾಕಿದ್ದರೆ. 20 ಲಕ್ಷದಷ್ಟಾಗುತ್ತದೆ. ಈ ಸಮಾರಂಭದಲ್ಲಿ ರಾಜಮೌಳಿ ಅಲ್ಲದೆ, ‘RRR’ ಚಿತ್ರದ ನಾಯಕರಾದ ಜ್ಯೂನಿಯರ್ ಎನ್.ಟಿ.ಆರ್, ರಾಮ್ಚರಣ್ ತೇಜ ಸೇರಿದಂತೆ ಹಲವರು ಭಾಗವಹಿಸಿದ್ದರು. ರಾಜಮೌಳಿ ಅವರೇ ಅವರೆಲ್ಲರ ಟಿಕೆಟ್ ಮೊತ್ತವನ್ನು ಭರಿಸಿದ್ದಾರೆ ಎಂದು ಹೇಳಲಾಗಿದ್ದು, ಅದಕ್ಕಾಗಿಯೇ ಅವರು ಎರಡ್ಮೂರು ಕೋಟಿಗಳನ್ನು ಎತ್ತಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವೈಭವ್ ಈಗ ರವಿ … ಹೊಸ ಚಿತ್ರದಲ್ಲಿ ’ಅಪ್ಪು ಅಭಿಮಾನಿ’
ಅಷ್ಟು ಖರ್ಚು ಮಾಡಿ ಸಮಾರಂಭಕ್ಕೆ ಹೋದರೂ, ಚಿತ್ರತಂಡದವರಿಗೆ ಬಹಳ ಹಿಂದೆ ಸೀಟು ಸಿಕ್ಕಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬರುತ್ತಿದ್ದು, ಅಷ್ಟು ದುಡ್ಡು ಕೊಟ್ಟು ಹೋಗಿದ್ದಕ್ಕಾದರೂ ‘RRR’ ಚಿತ್ರತಂಡದವರಿಗೆ ಒಳ್ಳೆಯ ಜಾಗ ಕೊಡಬೇಕಿತ್ತು ಎಂದು ಹಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉರಿಗೌಡ-ನಂಜೇಗೌಡ ನಮಗೆ ಹೆಮ್ಮೆ, ಆದರೆ…; ಸಿನಿಮಾ ಚಿತ್ರಕಥೆ ಬಗ್ಗೆ ಅಶ್ವತ್ಥ ನಾರಾಯಣ್ ಹೇಳಿದ್ದಿಷ್ಟು…