ಮಂಗಳೂರು: ಕೊಲೆ ಆರೋಪಿಯನ್ನೇ ಕೊಲೆ ಮಾಡಲು ಯತ್ನಿಸಿ ಗ್ಯಾಂಗ್ವೊಂದು ವಿಫಲಗೊಂಡಿರುವ ಪ್ರಕರಣ ಕರಾವಳಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ದೀಪಕ್ ಕೊಲೆ ಆರೋಪ ಎದುರಿಸುತ್ತಿರುವ ಪಿಂಕಿ ನವಾಜ್ ಎಂಬಾತನ ಮೇಲೆ ಇನ್ನೊಂದು ಗ್ಯಾಂಗ್ ದಾಳಿ ನಡೆಸಿದ್ದು, ನವಾಜ್ ಗಾಯಗೊಂಡಿದ್ದಾನೆ.
ಮಂಗಳೂರು ಹೊರವಲಯದ ಸುರತ್ಕಲ್ನ ಕಾಟಿಪಳ್ಳ ಸೆಕೆಂಡ್ ಬ್ಲಾಕ್ ಬಳಿ ಈ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ನವಾಜ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬಂದಿದ್ದ ಆರು ಜನರ ತಂಡ ಈ ದಾಳಿ ನಡೆಸಿ ಪರಾರಿಯಾಗಿದ್ದು, ಸುರತ್ಕಲ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಗಾಯಗೊಂಡಿರುವ ಕೊಲೆ ಆರೋಪಿ ಪಿಂಕಿ ನವಾಜ್ ತನ್ನ ಕೊಲೆ ಯತ್ನದ ಬಗ್ಗೆ ಮತ್ತೊಂದು ಗ್ಯಾಂಗ್ ವಿರುದ್ಧ ಆರೋಪ ಮಾಡಿದ್ದಾನೆ. ಶಾಕಿಬ್ ಅಲಿಯಾಸ್ ಶಾಬು ಎಂಬಾತನ ಗ್ಯಾಂಗ್ನಿಂದ ಈ ದಾಳಿ ನಡೆದಿದೆ ಎಂದು ನವಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪಿಂಕಿ ನವಾಜ್ ಇತ್ತೀಚೆಗೆ ಈ ಗ್ಯಾಂಗ್ ಜೊತೆ ಮನಸ್ತಾಪಗೊಂಡಿದ್ದ ಎನ್ನಲಾಗಿದೆ.
ಸಾಲ ಮರಳಿಸದವಳ ಬಳಿ ಸೆಕ್ಸ್ ಕೇಳಿದ ವೃದ್ಧ! ಒಂದೇ ವರ್ಷದಲ್ಲಿ ಸೂಟ್ಕೇಸ್ನಲ್ಲಿ ಹೆಣವಾಗಿ ಸಿಕ್ಕ!
ಆ ‘ಮಹಿಳೆಯರು’ ಹೆದ್ದಾರಿಯಲ್ಲಿ ಲಿಫ್ಟ್ ಕೇಳಿದರು; ಆಮೇಲೆ ಆಗಿದ್ದೇ ಬೇರೆ…