More

    ಹೆದ್ದಾರಿಯಲ್ಲಿ ಪುಡಿ ರೌಡಿಗಳ ಪುಂಡಾಟ: ಮರಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು

    ರಾಮನಗರ: ಜಗಳವಾಡುತ್ತಿದ್ದವರನ್ನು ಪ್ರಶ್ನಿಸಿದವರ ಮೇಲೆ ಪುಡಿ ರೌಡಿಗಳು ಮಾರಕಾಸಗಳಿಂದ ಹಲ್ಲೆ ನಡೆಸಿರುವುದು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಾಗಡಿ ತಾಲೂಕು ಮರೂರು ಹ್ಯಾಂಡ್‌ಪೋಸ್ಟ್ ಬಳಿಯ ಸೂರಪ್ಪನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

    ಮಂಗಳೂರು ಮೂಲದ ಸುದರ್ಶನ್ ಪೈ ಮತ್ತು ಅವೀಸ್ ಎಂಬುವವರು ಮಂಗಳವಾರ ಗ್ರಾಮದ ಮುಖ್ಯರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿಕೊಂಡು ಕಿತ್ತಾಡುತ್ತಿದ್ದರು. ಇದನ್ನು ಗಮನಿಸಿದ ಸೂರಪ್ಪನಹಳ್ಳಿಯ ಮುದ್ದಹನುಮೇಗೌಡ ಅವರು ಕಿತ್ತಾಡದಂತೆ ತಿಳಿ ಹೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು, ಇದನ್ನು ಗಮನಿಸಿದ ಮುದ್ದಹನುಮೇಗೌಡರ ಮಗ ರಾಮಾಂಜನೇಯ ತಂದೆಯ ನೆರವಿಗೆ ಧಾವಿಸಿದಾಗ ಅವನೊಂದಿಗೂ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರೌಡಿಗಳು ಕಾರಿನಲ್ಲಿದ್ದ ಲಾಂಗ್ ತಂದು ರಾಮಾಂಜನೇಯನ ಮೇಲೆ ಹಲ್ಲೆ ನಡೆಸಿದ್ದಾರೆ.

    ಕಿರುಚಾಟ ಕೇಳಿ ಧಾವಿಸಿದ ಸುತ್ತಮುತ್ತಲಿನ ಜನ ಹಾಗೂ ವಾಹನ ಸವಾರರು ಸುದರ್ಶನ್‌ಪೈ ಮತ್ತು ಅವೀಸ್ ಅವರನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕುದೂರು ಪೊಲೀಸರು ಜನರನ್ನು ಚದುರಿಸಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.
    ಮುದ್ದಹನುಮೇಗೌಡ ಮತ್ತು ರಾಮಾಂಜನೇಯ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಹಲ್ಲೆ ಮಾಡಿದ ಮಂಗಳೂರು ಮೂಲದ ಸುದರ್ಶನ್‌ಪೈ ಮತ್ತು ಅವೀಸ್ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts