ನವದೆಹಲಿ : ದೆಹಲಿಯ ಮಹಿಪಾಲ್ಪುರ ಪ್ರದೇಶದಲ್ಲಿ ಕೊಲೆ ಮಾಡಿ, ಮೃತದೇಹವನ್ನು ವಿಲೇವಾರಿ ಮಾಡುವ ಪ್ರಯತ್ನದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಏರ್ಪೋರ್ಟ್ನ ಪಾರ್ಕಿಂಗ್ ಸ್ಲಿಪ್ ಹೊಂದಿದ್ದ ಮೃತನ ಗುರುತು ಹಚ್ಚುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಬಂಧಿತ ಆರೋಪಿ, ಸೆಕ್ಯುರಿಟಿ ಗಾರ್ಡ್ ಆಗಿದ್ದ ಸುರ್ಮೇಶ್ ಮತ್ತು ಮೃತ ವ್ಯಕ್ತಿಯ ನಡುವೆ ಪಾರ್ಕಿಂಗ್ ವಿಷಯದಲ್ಲಿ ಗುರುವಾರ ರಾತ್ರಿ ಜಗಳವಾಗಿತ್ತು. ಆರೋಪಿಯು ಆ ಪುರುಷನನ್ನು ಥಳಿಸಿ, ಕತ್ತು ಹಿಚುಕಿ ಸಾಯಿಸಿದ್ದ. ಮೃತದೇಹವನ್ನು ಎರಡು ದಿನ ಪಾರ್ಕಿಂಗ್ನ ಬೇಸ್ಮೆಂಟ್ನಲ್ಲಿ ಮುಚ್ಚಿಟ್ಟಿದ್ದು, ಇಂದು ಬೆಳಗಿನ ಜಾವ ಅದನ್ನು ವಿಲೇವಾರಿ ಮಾಡಲು ಸಾಗಿಸುವ ಪ್ರಯತ್ನದಲ್ಲಿದ್ದ. ಗಸ್ತಿನಲ್ಲಿದ್ದ ಪೊಲೀಸ್ ಪೇದೆ ವಿನೋದ್ ಕುಮಾರ್ ಅವರು ಅನುಮಾನಗೊಂಡು ಪರಿಶೀಲಿಸಿದಾಗ ಮೃತದೇಹದೊಂದಿಗೆ ಆರೋಪಿ ಸುರ್ಮೇಶ್ ಸಿಕ್ಕಿಬಿದ್ದಿದ್ದಾನೆ ಎಂದು ಡಿಸಿಪಿ ಇಂಗಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಚಿನ್ನವನ್ನು ಗುದದ್ವಾರದಲ್ಲಿ ಮುಚ್ಚಿಟ್ಟುಕೊಂಡು ತಂದ ಪ್ರಯಾಣಿಕ!
ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು, ಕೃತ್ಯದ ಸ್ಥಳ ಪರಿಶೀಲನೆಗೆ ಪೊಲೀಸ್ ತಂಡ ತೆರಳಿದೆ. ಮೃತನ ಎಡತೋಳಿನ ಮೇಲೆ ಟ್ಯಾಟೂ ಇದ್ದು, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಲಿಪ್ ಸಿಕ್ಕಿದೆ. ದೇಹವನ್ನು ಸಫ್ದಾರ್ ಜಂಗ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ಆತನ ಗುರುತು ಪತ್ತೆ ಹಚ್ಚಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)
ಮತ್ತಷ್ಟು ಅನ್ಲಾಕ್: ಪೂಜಾ ಚಟುವಟಿಕೆಗಳಿಗೆ ಅನುಮತಿ; ಮನೋರಂಜನಾ ಉದ್ಯಾನಗಳಿಗೆ ಅವಕಾಶ