More

    ಪಾರ್ಕಿಂಗ್​ ಜಗಳದಿಂದ ನಡೆದೇ ಹೋಯ್ತು ದುರಂತ! ಸೆಕ್ಯುರಿಟಿ ಗಾರ್ಡ್ ಬಂಧನ

    ನವದೆಹಲಿ : ದೆಹಲಿಯ ಮಹಿಪಾಲ್​ಪುರ ಪ್ರದೇಶದಲ್ಲಿ ಕೊಲೆ ಮಾಡಿ, ಮೃತದೇಹವನ್ನು ವಿಲೇವಾರಿ ಮಾಡುವ ಪ್ರಯತ್ನದಲ್ಲಿದ್ದ ಸೆಕ್ಯುರಿಟಿ ಗಾರ್ಡ್​ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಏರ್​ಪೋರ್ಟ್​ನ ಪಾರ್ಕಿಂಗ್ ಸ್ಲಿಪ್ ಹೊಂದಿದ್ದ ಮೃತನ ಗುರುತು ಹಚ್ಚುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

    ಬಂಧಿತ ಆರೋಪಿ, ಸೆಕ್ಯುರಿಟಿ ಗಾರ್ಡ್ ಆಗಿದ್ದ ಸುರ್ಮೇಶ್​ ಮತ್ತು ಮೃತ ವ್ಯಕ್ತಿಯ ನಡುವೆ ಪಾರ್ಕಿಂಗ್​ ವಿಷಯದಲ್ಲಿ ಗುರುವಾರ ರಾತ್ರಿ ಜಗಳವಾಗಿತ್ತು. ಆರೋಪಿಯು ಆ ಪುರುಷನನ್ನು ಥಳಿಸಿ, ಕತ್ತು ಹಿಚುಕಿ ಸಾಯಿಸಿದ್ದ. ಮೃತದೇಹವನ್ನು ಎರಡು ದಿನ ಪಾರ್ಕಿಂಗ್​ನ ಬೇಸ್​ಮೆಂಟ್​ನಲ್ಲಿ ಮುಚ್ಚಿಟ್ಟಿದ್ದು, ಇಂದು ಬೆಳಗಿನ ಜಾವ ಅದನ್ನು ವಿಲೇವಾರಿ ಮಾಡಲು ಸಾಗಿಸುವ ಪ್ರಯತ್ನದಲ್ಲಿದ್ದ. ಗಸ್ತಿನಲ್ಲಿದ್ದ ಪೊಲೀಸ್​ ಪೇದೆ ವಿನೋದ್​ ಕುಮಾರ್​ ಅವರು ಅನುಮಾನಗೊಂಡು ಪರಿಶೀಲಿಸಿದಾಗ ಮೃತದೇಹದೊಂದಿಗೆ ಆರೋಪಿ ಸುರ್ಮೇಶ್ ಸಿಕ್ಕಿಬಿದ್ದಿದ್ದಾನೆ ಎಂದು ಡಿಸಿಪಿ ಇಂಗಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

    ಇದನ್ನೂ ಓದಿ: ಚಿನ್ನವನ್ನು ಗುದದ್ವಾರದಲ್ಲಿ ಮುಚ್ಚಿಟ್ಟುಕೊಂಡು ತಂದ ಪ್ರಯಾಣಿಕ!

    ವಸಂತ್ ಕುಂಜ್​ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು, ಕೃತ್ಯದ ಸ್ಥಳ ಪರಿಶೀಲನೆಗೆ ಪೊಲೀಸ್​ ತಂಡ ತೆರಳಿದೆ. ಮೃತನ ಎಡತೋಳಿನ ಮೇಲೆ ಟ್ಯಾಟೂ ಇದ್ದು, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಲಿಪ್ ಸಿಕ್ಕಿದೆ. ದೇಹವನ್ನು ಸಫ್ದಾರ್​ ಜಂಗ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ಆತನ ಗುರುತು ಪತ್ತೆ ಹಚ್ಚಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಮತ್ತಷ್ಟು ಅನ್​ಲಾಕ್​: ಪೂಜಾ ಚಟುವಟಿಕೆಗಳಿಗೆ ಅನುಮತಿ; ಮನೋರಂಜನಾ ಉದ್ಯಾನಗಳಿಗೆ ಅವಕಾಶ

    ‘ಗುಚಿ’ಯೊಂದಿಗೆ ರಣವೀರ್​ ಸಿಂಗ್​ರ ಆಕರ್ಷಕ ಲುಕ್ಸ್​ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts