More

    ಒಂಟಿ ಮಹಿಳೆಯ ದರೋಡೆಗೆ ಯತ್ನಿಸಿದಾತ ವಶಕ್ಕೆ

    ವಿಟ್ಲ: ಮೇಗಿನಪೇಟೆಯ ಒಂಟಿ ಮಹಿಳೆ ಮನೆಗೆ ದಾಳಿ ನಡೆಸಿ ದರೋಡೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ವೈಜ್ಞಾನಿಕ ತನಿಖೆಯನ್ನಾಧರಿಸಿ ಭಾನುವಾರ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶ ಸಹರನಪುರ ಜಿಲ್ಲೆ ನಿವಾಸಿ ಜುಬೈರ್ ಅಹಮ್ಮದ್ (24) ಬಂಧಿತ ಆರೋಪಿ. ಮೂರು ವರ್ಷಗಳಿಂದ ವಿಟ್ಲ ಮೇಗಿನಪೇಟೆಯ ಮರದ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ ಲಾಕ್‌ಡೌನ್‌ನಿಂದ ಹಣದ ಕೊರತೆಯಾಗಿ ದರೋಡೆಗೆ ಹುನ್ನಾರ ನಡೆಸಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಕೃತ್ಯದ ಸಮಯ ಬಳಸಿದ ವಸ್ತುಗಳನ್ನು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

    ಪಕ್ಕದ ಬೀದಿಯಲ್ಲೇ ವಾಸ: ಮಹಿಳೆಯ ಮನೆ ಮುಖ್ಯರಸ್ತೆಯ ಪಕ್ಕದಲ್ಲಿದ್ದರೆ, ಪಕ್ಕದ ಬೀದಿಯಲ್ಲಿ ಈ ಆಗಂತುಕ ವಾಸವಾಗಿದ್ದ. ಮುಖ್ಯರಸ್ತೆಯಿಂದ ಒಳ ಹೋಗುವ ರಸ್ತೆಯಲ್ಲೇ ಈತ ಕೆಲಸ ನಿರ್ವಹಿಸುವ ಕಾರ್ಖಾನೆ ಇದ್ದು, ಸಮೀಪದಲ್ಲಿ ಆತನಿಗೆ ವಸತಿ ಕಲ್ಪಿಸಲಾಗಿತ್ತು. ರೂಂನಲ್ಲಿ ಇದ್ದ ಇತರರಲ್ಲಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೊರಬಂದಿದ್ದ ಈತ ದರೋಡೆಗೆ ಯತ್ನ ನಡೆಸಿದ್ದಾನೆ.

    ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿ ಪ್ರಸನ್ನ, ದಿನೇಶ್, ಜಯಕುಮಾರ್, ಪ್ರತಾಪ, ವಿನಾಯಕ, ಹೇಮರಾಜ್ ತಂಡ ಕಾರ್ಯಾಚರಣೆ ನಡೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts