More

    ಶಾಲೆಗೆಂದು ಹೋಗಿದ್ದ ವಿದ್ಯಾರ್ಥಿ ಮನೆಗೆ ಮರಳಲೇ ಇಲ್ಲ; ಸಿಕ್ಕಿದ್ದು ಶವವಾಗಿ..

    ಚಿಕ್ಕಮಗಳೂರು: ರಾಜ್ಯದಲ್ಲಿ 1ನೇ ಇಯತ್ತೆಯಿಂದ 5ರ ವರೆಗೆ ಭೌತಿಕ ತರಗತಿ ನಡೆಸಲು ಅನುಮತಿ ಸಿಕ್ಕಿ ಶಾಲೆಗಳು ಆರಂಭವಾದ ಮೊದಲ ದಿನವೇ ದುರಂತವೊಂದು ಸಂಭವಿಸಿದೆ. ಶಾಲೆಗೆಂದು ಹೇಳಿ ಹೋಗಿದ್ದ ಬಾಲಕನೊಬ್ಬ ಮನೆಗೆ ಮರಳದೆ, ಕೊನೆಗೆ ಶವವಾಗಿ ಪತ್ತೆಯಾದ ಘಟನೆಯೊಂದು ಜರುಗಿದೆ.

    ಚಿಕ್ಕಮಗಳೂರಿನ ಚಂದ್ರಕಟ್ಟೆಯ 11 ವರ್ಷದ ಬಾಲಕ ಸುಹಾಸ್​ ಸಾವಿಗೀಡಾಗಿರುವ ವಿದ್ಯಾರ್ಥಿ. ಈತ ಇಲ್ಲಿನ ಕೆಂಪನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ. ಇಂದು ಶಾಲೆಗೆ ಹೋಗುವುದಾಗಿ ಹೇಳಿದ್ದ ಬಾಲಕ ಮನೆಗೆ ಜೀವಂತವಾಗಿ ಮರಳಬೇಕಿತ್ತು. ಆದರೆ ಮನೆಯವರು ಮಗನ ಶವವನ್ನು ನೋಡುವಂತಾಗಿದೆ.

    ಇದನ್ನೂ ಓದಿ: ಕುಡಿದು ಕಾರು ಚಲಾಯಿಸಿದ್ದ, ತಡೆದಿದ್ದಕ್ಕೆ ‘ನಾನ್ಯಾರು ಗೊತ್ತಾ?’ ಎಂದು ಪೊಲೀಸ್​ಗೇ ಕಾರು ಗುದ್ದಿಸಿ ಕೊನೆಗೂ ಸಿಕ್ಕಿಬಿದ್ದ..

    ಸುಹಾಸ್ ಚಂದ್ರಕಟ್ಟೆಯ ಸಮೀಪ ಇರುವ ಕೆರೆಯಲ್ಲಿ ಮಧ್ಯಾಹ್ನದ ನಂತರ ನೀರಿನಲ್ಲಿ ಮೋಜು ಮಾಡಲು ಈಜಿಗೆಂದು ಧುಮುಕಿದ್ದ. ಆದರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಬಾಲಕನ ಶವವನ್ನು ನೀರಿನಿಂದ ಹೊರತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

    18 ವರ್ಷಕ್ಕೆ ಕೊಲೆ ಮಾಡಿದ್ದವ 36 ವರ್ಷಕ್ಕೇ ಕೊಲೆಯಾಗಿ ಹೋದ; ಜೈಲಿಂದ ಬಿಡುಗಡೆಯಾದ ಮೂರೇ ದಿನದಲ್ಲಿ ಈ ಲೋಕದಿಂದಲೇ ಬಿಡುಗಡೆ!

    ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts