ಮುಂಬೈ: ಸುಶಾಂತ್ ಮತ್ತು ರಿಯಾ ಚಕ್ರವರ್ತಿ ಇಬ್ಬರನ್ನೂ ಜೂನ್ 13ರಂದು ನೋಡಿದ್ದಾಗಿ, ರಿಯಾ ಪಕ್ಕದ ಮನೆಯ ಡಿಂಪಲ್ ತವಾನಿ ಎನ್ನುವವರು ಹೇಳಿದ್ದರು. ತಮ್ಮ ವಿರುದ್ಧ ಸುಳ್ಳು ಹೇಳುವುದರ ಜತೆಗೆ, ಕೇಸ್ ದಿಕ್ಕು ತಪ್ಪಿಸಿದ್ದಿಕ್ಕೆ ಡಿಂಪಲ್ ವಿರುದ್ಧ ರಿಯಾ ಕೇಸ್ ಹಾಕುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಇದೇ ಶುಕ್ರವಾರ ಚಿರಂಜೀವಿ ‘ಶಿವಾರ್ಜುನ’ ಮರು ಬಿಡುಗಡೆ; 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ…
ಇದಕ್ಕೂ ಮುನ್ನ ಸುಶಾಂತ್ ಆತ್ಮಹತ್ಯೆ ಪ್ರಕರಣದ ಕುರಿತಾಗಿ ಡಿಂಪಲ್ ಮಾತನಾಡಿದ್ದರು. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಜೂನ್ 14ರಂದು. ಅದರ ಮುನ್ನಾ ದಿನ ಅಂದರೆ ಜೂನ್ 13ರಂದು ಸುಶಾಂತ್ ಅವರು ರಿಯಾ ಮನೆಗೆ ಬಂದಿದ್ದರು ಮತ್ತು ಅವರಿಬ್ಬರನ್ನು ನೋಡಿದ್ದಾಗಿ ಡಿಂಪಲ್ ಮಾಧ್ಯಮಗಳೆದುರು ಹೇಳಿಕೊಂಡಿದ್ದರು.
ಈ ವಿಷಯವಾಗಿ ಇತ್ತೀಚೆಗೆ ಸಿಬಿಐ ಅಧಿಕಾರಿಗಳು, ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಸುಶಾಂತ್ ಬಂದಿದ್ದನ್ನು ತಾನು ನೋಡಿಯೇ ಇಲ್ಲ ಎಂದು ಡಿಂಪಲ್ ಹೇಳಿದ್ದಾರೆನ್ನಲಾಗಿದೆ. ಆ ವಿಷಯವನ್ನು ಬೇರೆ ಯಾರೋ ತಮಗೆ ಹೇಳಿದ್ದು, ತಮಗೆ ಈ ವಿಷಯವನ್ನು ಹೇಳಿದ ವ್ಯಕ್ತಿ ಸಹ ಸುಶಾಂತ್ ಮತ್ತು ರಿಯಾ ಒಟ್ಟಿಗೆ ಇದ್ದುದನ್ನು ನೋಡಿಲ್ಲ ಎಂದು ಒಪ್ಪಿಕೊಂಡಿದ್ದಾರಂತೆ.
ಡಿಂಪಲ್ ತನಿಖೆಯ ಹಾದಿಯನ್ನು ಬೇರೆಡೆ ತಿರುಗಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಿಬಿಐ ಅಧಿಕಾರಿಗಳು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಹೀಗೆ ಮಾಧ್ಯಮದವರ ಎದುರು ಬೇಕಾಬಿಟ್ಟಿ ಮಾತನಾಡಬಾರದು ಎಂದು ಹೇಳಿ ಕಳುಹಿಸಿದ್ದಾರಂತೆ.
ಇದನ್ನೂ ಓದಿ: ಇದೊಂಥರಾ ಟೀಚರ್ಗೆ ಮಕ್ಕಳು ದೂರು ಕೊಟ್ಟಂಗಾಯ್ತು: ರಾಮ್ಗೋಪಾಲ್ ವರ್ಮಾ
ಈ ಮಧ್ಯೆ, ರಿಯಾ ಸಹ ಡಿಂಪಲ್ ವಿರುದ್ಧ ಕೇಸ್ ಹಾಕಲಿದ್ದಾರೆ ಎಂದು ಆಕೆಯ ಪರ ವಕೀಲ ಸತೀಶ್ ಮಾನಶಿಂಧೆ ಹೇಳಿದ್ದಾರೆ. ತಮ್ಮನ್ನು ತೇಜೋವಧೆ ಮಾಡುವುದರ ಜತೆಗೆ, ಸುಳ್ಳು ಸುದ್ದಿ ಹೇಳುವ ಮೂಲಕ ತಮ್ಮ ಮುಖಕ್ಕೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸಿದ್ದಾರೆ ಎಂದು ರಿಯಾ, ಡಿಂಪಲ್ ವಿರುದ್ಧ ಸದ್ಯದಲ್ಲೇ ಕೇಸು ಹಾಕುತ್ತಾರೆ ಎಂದು ಸತೀಶ್ ಮಾಧ್ಯಮದವರೆದುರು ಹೇಳಿಕೊಂಡಿದ್ದಾರೆ.
ಸಲ್ಮಾನ್ ಚಿತ್ರದ ಫೈಟ್ ನಿರ್ದೇಶಿಸಿದ ದ.ಕೊರಿಯಾದ ಖ್ಯಾತ ಸ್ಟಂಟ್ ಮಾಸ್ಟರ್!