ಕೇರಳ: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಕೇಂದ್ರದಿಂದ ಹಿಂದಿರುಗಿದ್ದ ವ್ಯಕ್ತಿ, ಒಂದು ದಿನದ ಬಳಿಕ ತನ್ನ ಅಜ್ಜ-ಅಜ್ಜಿಯನ್ನು ಹತ್ಯೆಗೈದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ: VIDEO| ರೈಲ್ವೇ ಟ್ರ್ಯಾಕ್ನಲ್ಲಿ ನೃತ್ಯ ಮಾಡಿದ ತಾಯಿ, ರೆಕಾರ್ಡ್ ಮಾಡಿದ ಮಗಳು ಇಬ್ಬರು ಅರೆಸ್ಟ್
ಆರೋಪಿಯನ್ನು ಅಕ್ಮಲ್ ಎಂದು ಗುರುತಿಸಲಾಗಿದ್ದು, ಹತ್ಯೆಗೈದ ಬಳಿಕ ಸ್ಥಳದಿಂದ ಆತ ಪರಾರಿಯಾಗಿದ್ದ. ಇದೀಗ ಆತನನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಭಾನುವಾರ ತಿರೂರಿನ ಮಾನಸಿಕ ಆರೋಗ್ಯ ಕೇಂದ್ರದಿಂದ ಮನೆಗೆ ಹಿಂದಿರುಗಿದ್ದ ಆರೋಪಿ, ತನ್ನ ಅಜ್ಜ ಅಬ್ದುಲ್ಲಾ (75) ಮತ್ತು ಅಜ್ಜಿ ಜಮೀಲಾ (64) ಅವರೊಂದಿಗೆ ವಾಸಿಸುತ್ತಿದ್ದನು.
ಸೋಮವಾರ ಬೆಳಗ್ಗೆ ಸಂಬಂಧಿಕರೊಬ್ಬರು ದಿನಸಿ ಸಾಮಾಗ್ರಿಗಳನ್ನು ನೀಡಲು ವೃದ್ಧ ದಂಪತಿಗಳಿದ್ದ ಮನೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಮಾಹಿತಿ ಪಡೆದ ಗುರುವಾಯೂರು ಸಹಾಯಕ ಪೊಲೀಸ್ ಕಮಿಷನರ್ (ACP) ಕೆ.ಜಿ.ಸುರೇಶ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದೆ.
ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಪೆಡ್ಲರ್ಗೆ ಖೆಡ್ಡಾ, ವಿಶ್ವೇಶ್ವರಪುರ ಪೊಲೀಸರಿಂದ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಕೊಲೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು. ಸದ್ಯ ಇದೀಗ ಆತನನ್ನು ಬಂಧಿಸಲಾಗಿದ್ದು, ಪ್ರಸ್ತುತ ಆತನನ್ನು ಕರ್ನಾಟಕದ ಮಂಗಳೂರು ಪೊಲೀಸ್ ಠಾಣೆಯ ಕಸ್ಟಡಿಯಲ್ಲಿ ಇರಿಸಲಾಗಿದೆ. ಮಂಗಳೂರಿನತ್ತ ತೆರಳಿರುವ ಕೇರಳದ ಪೊಲೀಸರ ತಂಡ, ಹೆಚ್ಚಿನ ತನಿಖೆಗಾಗಿ ರಾಜ್ಯಕ್ಕೆ ಕರೆತರಲು ಮುಂದಾಗಿದೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).
‘ದ ಕೇರಳ ಸ್ಟೋರಿ’ ಹಿಟ್ ಆದ ಬೆನ್ನಲ್ಲೇ ಹೊಸ ಪ್ರಾಜೆಕ್ಟ್ನಲ್ಲಿ ನಟಿ ಅದಾ ಶರ್ಮಾ; ಈ ಚಿತ್ರ ಒಟಿಟಿಗೆ ಮಾತ್ರ?