ಭಟ್ಕಳ: ಪ್ರವಾಸಕ್ಕೆಂದು ಬಂದು ಮೋಜು ಮಸ್ತಿ ಮಾಡಲು ಸಮುದ್ರಕ್ಕೆ ಇಳಿದು ಅಪಾಯಕ್ಕೆ ಸಿಲುಕಿದ್ದ ಮೂವರು ಪ್ರವಾಸಿಗರನ್ನು ಮುರ್ಡೆಶ್ವರ ಕಡಲ ತೀರದ ಲೈಫ್ಗಾರ್ಡ್ಗಳು ರಕ್ಷಿಸಿ, ದಡಕ್ಕೆ ತಂದಿದ್ದಾರೆ.
ಹಾವೇರಿ ಜಿಲ್ಲೆಯ ಹಂಸಬಾವಿ ಗ್ರಾಮದ ಸಿದ್ದಾರ್ಥ(24), ದಿಕ್ಷಿತ್(20), ಸಂತೋಷ(24) ರಕ್ಷಿಸಲ್ಪಟ್ಟವರು.
ಇವರು ಒಟ್ಟು 5 ಜನರು ಸೇರಿ ಧರ್ಮಸ್ಥಳದಿಂದ ಮುರ್ಡೆಶ್ವರಕ್ಕೆ ಪ್ರವಸಕ್ಕೆಂದು ಬಂದಿದ್ದರು.
ಸಮುದ್ರದಲ್ಲಿ ನೀರಿನಾಟಕ್ಕೆ ತೊಡಗಿ ಅಲೆಯ ರಭಸಕ್ಕೆ ಸಿಕ್ಕಿ ಸಮುದ್ರಪಾಲಾಗುವ ಹಂತದಲ್ಲಿದ್ದರು. ಸ್ಥಳದಲ್ಲಿದ್ದ ಲೈಫ್ಗಾರ್ಡ್ಗಳಾದ ಚಂದ್ರಶೇಖರ ದೇವಾಡಿಗ, ಜಯರಾಮ, ಪಾಂಡು, ಹನುಮಂತ ತಕ್ಷಣ ನೀರಿಗೆ ಧುಮುಕಿ ಸಮುದ್ರ ಪಾಲಾಗುತ್ತಿರುವವರನ್ನು ರಕ್ಷಿಸಿದ್ದಾರೆ. ಬೀಚ್ ಸುಪರ್ವೈಸರ್ ದತ್ತಾತ್ರೆಯ ಶೆಟ್ಟಿ ಈ ಕುರಿತು ಮುರ್ಡೆಶ್ವರ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ.