ಮಹಾಮಾರಿ ಕರೊನಾದಂತಹ ಸಂಕಷ್ಟ ಸಮಯದಲ್ಲಿ ದೇಶದ ಒಳಿತಿಗಾಗಿ ತನು, ಮನ, ಧನ ಅರ್ಪಿಸಿದ ಪ್ರತಿಯೊಬ್ಬ ಭಾರತೀಯನ ಉತ್ಸಾಹಕ್ಕೆ ನೀತಾ ಅಂಬಾನಿ ಮುಖ್ಯಸ್ಥರಾಗಿರುವ ರಿಲಯನ್ಸ್ ಫೌಂಡೇಶನ್ ಕೂಡ ತನ್ನ ಹಲವು ಉಪಕ್ರಮಗಳ ಮೂಲಕ ಕೈಜೋಡಿಸಿದೆ.
ಹಾಡಿನ ಸಂದೇಶ ಹೊತ್ತ ವಿಡಿಯೋವೊಂದನ್ನು ರಿಲಯನ್ಸ್ ಫೌಂಡೇಶನ್ ಬಿಡುಗಡೆ ಮಾಡಿದ್ದು, ವಿಶಾಲ್ ಮಿಶ್ರಾ ಎಂಬುವರು ಸಂಗೀತದ ಜತೆಗೆ ಧ್ವನಿಯನ್ನು ನೀಡಿದ್ದಾರೆ. ಗಾಯನದ ಮೂಲಕ ವಿಡಿಯೋದಲ್ಲಿ ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ರಿಲಯನ್ಸ್ ಫೌಂಡೇಶನ್ ಜನತೆಯ ಬೆನ್ನಿಗೆ ನಿಂತಿದ್ದನ್ನು ಕಣ್ಣಿಗೆ ಕಟ್ಟಿಕೊಡಲಾಗಿದೆ.
ಕೋವಿಡ್-19 ಭಾರತವನ್ನು ಸ್ತಬ್ಧವಾಗಿಸಿದೆ ಹೊರತು ನಮ್ಮ ಉತ್ಸಾಹವನ್ನಲ್ಲ ಎಂದು ಸಂದೇಶದೊಂದಿಗೆ ಆರಂಭವಾಗುವ ಹಾಡಿನಲ್ಲಿ ರಿಲಯನ್ಸ್ ಫೌಂಡೇಶನ್ ಮಾನವೀಯ ಕಾರ್ಯಗಳನ್ನು ವಿವರಿಸಲಾಗಿದೆ.
ತಾಯ್ನಾಡಿಗಾಗಿ ರಿಯಲನ್ಸ್ ತಂಡವು ಏನೇನು ಸಾಧ್ಯವೋ ಎಲ್ಲವನ್ನು ಮಾಡುತ್ತಿದೆ. ರಿಲಯನ್ಸ್ ಸೈನ್ಸ್ ಟೀಮ್ ಭಾರತದ ಅತಿದೊಡ್ಡ ಟೆಸ್ಟಿಂಗ್ ಲ್ಯಾಬ್ ಅಳವಡಿಸಿದ್ದು, ದಿನವೊಂದಕ್ಕೆ 3500 ಪರೀಕ್ಷೆಗಳನ್ನು ನಡೆಸುತ್ತಿದೆ. ಭಾರತದ ಮೊದಲ ಕೋವಿಡ್ 19 ವಿಶೇಷ ಆಸ್ಪತ್ರೆಯನ್ನು ಅಳವಡಿಸಿದ್ದೇವೆ. ಹೆಚ್ಚುವರಿ ಸೌಲಭ್ಯವಾಗಿ 2000 ಬೆಡ್ಗಳನ್ನು ಅಳವಡಿಸಲಾಗಿದೆ. ಗುಣಮುಖರಾದ ರೋಗಿಗಳ ಹಾಗೂ ಅವರ ಕುಟುಂಬದ ಕೃತಜ್ಞತೆಗಳಿಂದ ನಮ್ಮ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕದೆ. ವಿಶೇಷ ಕಾರ್ಖಾನೆಯಲ್ಲಿ 100,000 ಪಿಪಿಇ ಮತ್ತು ಮಾಸ್ಕ್ಗಳನ್ನು ತಯಾರಿಸಲಾಗುತ್ತಿದೆ ಎಂದು ದೃಶ್ಯ ಸಹಿತ ತಿಳಿಸಲಾಗಿದೆ.
ಇಷ್ಟೇ ಅಲ್ಲದೆ, ಕರೊನಾ ವಾರಿಯರ್ಸ್ಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ಶ್ರಮಿಕ ವರ್ಗದವರಿಗೆ ರೇಷನ್ ಹಾಗೂ ರಿಮೋಟ್ ಕಂಟ್ರೋಲ್ ಏರಿಯಾಗಳಿಗೂ ಅಗತ್ಯ ಸೌಲಭ್ಯ ಮತ್ತು ಜಾನುವಾರುಗಳಿಗೆ ಮೇವು ಸೇರಿದಂತೆ ಅನೇಕ ಸೌಲಭ್ಯಗಳನ್ನು ರಿಲಯನ್ಸ್ ಫೌಂಡೇಶನ್ ಒದಗಿಸುವ ಮೂಲ ಕೋವಿಡ್ ಹೋರಾಟದಲ್ಲಿ ಭಾರತೀಯರ ಬೆನ್ನಿಗೆ ನಿಂತಿದೆ.
ಕರೊನಾ ಸಂಕಷ್ಟ ದೂರ ಮಾಡಲು ಕೈಜೋಡಿಸಿದ ರಿಲಯನ್ಸ್ ಫೌಂಡೇಶನ್
ಮಹಾಮಾರಿ ಕರೊನಾದಂತಹ ಸಂಕಷ್ಟ ಸಮಯದಲ್ಲಿ ದೇಶದ ಒಳಿತಿಗಾಗಿ ತನು, ಮನ, ಧನ ಅರ್ಪಿಸಿದ ಪ್ರತಿಯೊಬ್ಬ ಭಾರತೀಯನ ಉತ್ಸಾಹಕ್ಕೆ ನೀತಾ ಅಂಬಾನಿ ಮುಖ್ಯಸ್ಥರಾಗಿರುವ ರಿಲಯನ್ಸ್ ಫೌಂಡೇಶನ್ ಕೂಡ ತನ್ನ ಹಲವು ಉಪಕ್ರಮಗಳ ಮೂಲಕ ಕೈಜೋಡಿಸಿದೆ. ಅದರ ವಿವರಗಳನ್ನುಳ್ಳ ವಿಡಿಯೋ ಇಲ್ಲಿದೆ.#RelianceFoundation #MukeshAmbani #NitaAmbani #Coronavirus #Pandemic
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮೇ 16, 2020