More

    ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯಿಂದ ವಿಶ್ವಾಸಾರ್ಹ ಸೇವೆ

    ರಟ್ಟಿಹಳ್ಳಿ: ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಕರ್ನಾಟಕ ಸೇರಿ, ಮಹಾರಾಷ್ಟ್ರದ ವಿವಿಧೆಡೆ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಸಹಕಾರಿ ಸಂಘಗಳ ಕ್ಷೇತ್ರದಲ್ಲಿ ಈ ಸೊಸೈಟಿಯು ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಮೀಣ ಭಾಗದ ಜನರಿಗೆ ನೆರವಾಗಿದ್ದು, ವಿಶ್ವಾಸರ್ಹತೆಯನ್ನು ಹೊಂದಿ ಉತ್ತಮ ಸೇವೆ ನೀಡುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಪಟ್ಟಣದ ಎಸ್.ಬಿ. ಗೂಳಪ್ಪನವರ ಕಟ್ಟಡದಲ್ಲಿ ಭಾನುವಾರ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ 159ನೇ ಶಾಖೆ ಉದ್ಘಾಟಿಸಿ ಮಾತನಾಡಿದರು. ರಟ್ಟಿಹಳ್ಳಿ ತಾಲೂಕು ಕೇಂದ್ರದಲ್ಲಿ ನೂತನವಾಗಿ ಶಾಖೆಯನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿನ ಗ್ರಾಹಕರಿಗೆ ಸೊಸೈಟಿ ಉತ್ತಮ ಸೇವೆ ನೀಡಲಿ ಎಂದು ಹೇಳಿದರು.

    ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಸಂಸ್ಥೆಯ ಸಂಸ್ಥಾಪಕರು ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಅವರ ಕುಟುಂಬ ರಾಜಕೀಯ ಕ್ಷೇತ್ರದಲ್ಲಿ ಮಾತ್ರವದಲ್ಲದೆ, ಸಹಕಾರಿ ಕ್ಷೇತ್ರದಲ್ಲೂ ಉತ್ತಮ ಸೇವೆ ನೀಡುತ್ತಿದೆ. ಸೊಸೈಟಿಯ ಈ ಭಾಗದಲ್ಲೂ ಉತ್ತಮ ಆರ್ಥಿಕ ಬೆಳವಣಿಗೆಯೊಂದಿಗೆ ಗ್ರಾಹಕರಿಗೆ ಅನುಕೂಲ ಒದಗಿಸುವ ಯೋಜನೆಗಳನ್ನು ಜಾರಿಗೆ ತರಲಿ ಎಂದು ಆಶಿಸಿದರು.

    ಹಿರೇಕೆರೂರು ಬ್ರಾಂಚ್ ಮ್ಯಾನೇಜರ್ ಶ್ರೀಶೈಲ ಪುಟಾಣಿ ಮಾತನಾಡಿ, ಗ್ರಾಹಕರಿಗೆ ಅಮೂಲ್ಯ ಕಿರು ಸಾಲ, ಮ್ಯುಚುವಲ್ ಫಂಡ್, ಜೀವ ಆರೋಗ್ಯ ಸಾಮಾನ್ಯ ವಿಮೆ, ಅಟ್ ಪರ್ ಚೆಕ್, ನೆಪ್ಟ್ ಮತ್ತು ಆರ್.ಟಿ.ಜಿ.ಎಸ್. ಸೇರಿದಂತೆ ಅನೇಕ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು ಎಂದರು.

    ಕೆ.ಓ.ಎಫ್. ನಿರ್ದೇಶಕ ಜಗದೀಶ ತಂಬಾಕದ, ಎಸ್.ಬಿ. ಗೂಳಪ್ಪನವರ, ಶಿವಪ್ರಕಾಶ ಕಡೂರ, ಶಂಭುಲಿಂಗ ತಂಬಾಕದ, ವೀರನಗೌಡ್ರ ಮಕರಿ, ರಾಘವೇಂದ್ರ ಹರವಿಶೆಟ್ಟರ್, ಗಣೇಶ ವೆರ್ಣೆಕರ, ಮಂಜುಳಾ ಬಾಳೇಕಾಯಿ, ಮಂಜುಳಾ ಮರಿಗೌಡ್ರ, ಮಾಲತೇಶಗೌಡ ಗಂಗೋಳ, ದೇವರಾಜ ನಾಗಣ್ಣನವರ, ನಾಗನಗೌಡ ಮರಿಗೌಡ್ರ, ಪ್ರಶಾಂತ ದ್ಯಾವಕ್ಕಳವರ, ಸುರೇಶ ನಾಯ್ಕ, ಶಾಖಾ ವ್ಯವಸ್ಥಾಪಕ ಗಜನಾನನ ಮಾಳಗೆ, ಲೆಕ್ಕ ಪರಿಶೋಧಕ ಪಿ.ಡಿ. ಪಾಟೀಲ, ಪ್ರಕಾಶ ಮಾಳಿ, ಸತೀಶ ಗೌಡನಕಟ್ಟಿ ಮತ್ತು ವಿಜಯಕುಮಾರ ಶಿವಶೆಟ್ಟರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts