More

    ಮನ್ನಣೆ ಗಳಿಸಿದ ಪಡಿತರ ವಿತರಕರ ಸಂಘ

    ಬೆಳಗಾವಿ: ರಾಜ್ಯ ಸಹಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಅತ್ಯುತ್ತಮ ಕೆಲಸ ಮಾಡಿ ಮೆಚ್ಚುಗೆ ಪಡೆದಿದೆ ಎಂದು ಶಾಸಕ ಆಸ್ೀ ಸೇಠ್ ಹೇಳಿದರು.

    ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯ ಸಹಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪದಗ್ರಹಣ ಮತ್ತು ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

    ಪಡಿತರ ವಿತರಕರಿಗೆ ಬಿಪಿಎಲ್ ಸೇರಿ ಎಲ್ಲ ಕಾರ್ಡುಗಳ ಗ್ರಾಹಕರಿಗೆ ನೀಡುವ ದವಸ ಧಾನ್ಯಗಳಿಗೆ ಸರ್ಕಾರದಿಂದ ಕೊಡುವ ಬೆಂಬಲ ಬೆಲೆಯನ್ನು ಹೆಚ್ಚು ಮಾಡಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

    ಆಹಾರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಾತನಾಡಿ, ಸಹಕಾರಿ ಪಡಿತರ ವಿತರಕರಿಗೆ ಸರ್ಕಾರದಿಂದ ಕಮಿಷನ್ ಹಣ ತಡವಾಗಿ ಬರುತ್ತಿದೆ. ಹೊಸ ಹೊಸ ತಂತ್ರಾಂಶಗಳಿಂದ ಸಮಸ್ಯೆಯಾಗುತ್ತಿದೆ. ಫಲಾನುಭವಿಗಳಿಗೆ ಎಷ್ಟು ಧಾನ್ಯಗಳನ್ನು ವಿತರಿಸುತ್ತಾರೆ ಎನ್ನುವುದು ದಾಖಲು ಮಾಡುವುದು ಕಷ್ಟವಾಗುತ್ತಿದೆ. ಇದನ್ನು ಸರಳೀಕರಣ ಮಾಡಿಕೊಡಬೇಕಿದೆ ಎಂದರು.

    ಉಪಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಉಪಆಯುಕ್ತ ಉದಯಕುಮಾರ ತಳವಾರ, ರಾಜ್ಯ ಸಹಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ, ಜಿಲ್ಲಾಧ್ಯಕ್ಷ ಶಾಂತಿನಾಥ ಬುಡವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts