More

    ನಿರೀಕ್ಷೆಯಂತೆ ಕೆಲಸ ಮಾಡಲು ನಾನ್ ರೆಡಿ

    ಶಿಕಾರಿಪುರ: ತನ್ನ ಸಾಮಾಜಿಕ ಕಾರ್ಯಗಳಿಂದ ಸೇವೆಯ ಸುಗಂಧವನ್ನು ಹರಡುತ್ತಿದೆ. ಇದು ಮಾದರಿ ಬಳಗ ಎಂದು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
    ಶನಿವಾರ ರಾತ್ರಿ ವಿನಾಯಕ ನಗರದಲ್ಲಿ ಹಮ್ಮಿಕೊಂಡಿದ್ದ ಸುಗಂಧ ಬಳಗದ 18ನೇ ವರ್ಷದ ವಾರ್ಷಿಕ ಸ್ನೇಹಮಿಲನ ಕಾರ್ಯಕ್ರಮ ದಲ್ಲಿ ಮಾತನಾಡಿ, ಒಂದು ಕುಟುಂಬದವರು ಒಂದೆಡೆ ಒಮ್ಮನಿಸ್ಸಿನಿಂದ ಒಂದೆಡೆ ಇರುವದು ದುಸ್ತರವಾದ ಇಂದಿನ ದಿನಗಳಲ್ಲಿ ನೂರಾರು ಕುಟುಂಬಗಳು ಒಂದಾಗಿ ಸುಗಂಧಬಳಗ ಕಟ್ಟಿಕೊಂಡು ಪ್ರೀತಿ, ವಿಶ್ವಾಸ, ಸ್ನೇಹವನ್ನು ಹಂಚುತ್ತ ಜನ್ಮದಿನದಿಂದ ಹಿಡಿದು ಎಲ್ಲ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಒಗ್ಗಟ್ಟಾಗಿ ವರ್ಷವಿಡೀ ಒಂದಲ್ಲ ಒಂದು ಕಾರ್ಯಕ್ರಮ ನಡೆಸುವುದು, ಪರಸ್ಪರರ ಸಂಕಷ್ಟಕ್ಕೆ ಸ್ಪಂದಿಸುವುದು ಒಳ್ಳೆಯ ಕಾರ್ಯ ಎಂದು ಬಣ್ಣಿಸಿದರು.
    ಪ್ರತಿ ಸನ್ಮಾನ, ಪ್ರಶಸ್ತಿಗಳು ಬಂದಾಗಲೆಲ್ಲ ನಾವು ಜಾಗೃತರಾಗಬೇಕು. ನಿಮ್ಮೆಲ್ಲರ ಆಶಯದಂತೆ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜನತೆಯ ನಿರೀಕ್ಷೆಯಂತೆ ಕೆಲಸ ಮಾಡಲು ಸಿದ್ಧನಿದ್ದೇನೆ. ಹಿಂದೆ ಅತ್ಯಂತ ಹಿಂದುಳಿದ ತಾಲೂಕು ಆಗಿದ್ದ ಶಿಕಾರಿಪುರ ಇಂದು ಅಭಿವೃದ್ಧಿ ಪಥದಲ್ಲಿರುವ ತಾಲೂಕುಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ನಾನು ಒಂದು ದಶಕದಿಂದ ಈ ಬಳಗವನ್ನು ಗಮನಿಸುತ್ತಿದ್ದೇನೆ. ಇದೊಂದು ಅಪೂರ್ವವಾದ ಸಂಘಟನೆ ಎಂದು ಹೇಳಿದರು.
    ಬಳಗದ ಅಧ್ಯಕ್ಷ ಎಂ.ಜಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಎ.ಎಸ್.ಶಿವಕುಮಾರ್, ಪುರಸಭೆ ಸದಸ್ಯರಾದ ಪಾಲಾಕ್ಷಪ್ಪ, ರೂಪಕಲಾ ಹೆಗ್ಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts