More

    ಮಲ್ಲ 2 ಮಾಡೋಣ್ವಾ?; ರಾಮು ಅನ್ನೋದೇ ಒಂದು ಬ್ರ್ಯಾಂಡ್ ಎಂದ ರವಿಚಂದ್ರನ್​

    ಬೆಂಗಳೂರು: ‘‘ಮಲ್ಲ 2’ ಸಿನಿಮಾ ಮಾಡೋಣ್ವಾ.. ನಿಮ್ಮ ಜತೆ ಬೇಡ ಅಂದ್ರೆ, ಮಗಳ ಜತೆ ಮಾಡ್ಲಾ. ಹೋಗ್ಲಿ ನನ್ನ ಮಗನ ಜತೆ ಸಿನಿಮಾ ಮಾಡಿಸ್ಲಾ..’- ನಿರ್ಮಾಪಕ ರಾಮು ನೆನಪಲ್ಲಿ ಭಾವುಕವಾಗಿ ಸಾಗುತ್ತಿದ್ದ ಸಮಾರಂಭದಲ್ಲಿ ಹೀಗೆ ಹಾಸ್ಯದ ಗುಳಿಗೆ ಹಾಕಿದವರು ‘ಕ್ರೇಜಿಸ್ಟಾರ್’ ರವಿಚಂದ್ರನ್. ರಾಮು ನಿರ್ಮಾಣದ ಕೊನೇ ಸಿನಿಮಾ ‘ಅರ್ಜುನ್ ಗೌಡ’ ಚಿತ್ರ ಬಿಡುಗಡೆಗೆ (ಡಿ.31) ಒಂದೇ ದಿನ ಬಾಕಿ. ಹಾಗಾಗಿ ಆ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸ್ಟಾರ್​ಗಳ ಸಮಾಗಮವಾಗಿತ್ತು. ಶಿವರಾಜಕುಮಾರ್, ರವಿಚಂದ್ರನ್, ಉಪೇಂದ್ರ, ಗಣೇಶ್, ಕೃಷ್ಣ ಸೇರಿ ಹಲವರು ಭಾಗವಹಿಸಿ, ‘ನಿಮ್ಮ ಜತೆ ನಾವಿದ್ದೇವೆ’ ಎಂಬ ಅಭಯವನ್ನು ಮಾಲಾಶ್ರೀಗೆ ನೀಡಿದರು.

    ‘‘ರಾಮಾಚಾರಿ’ ಸಿನಿಮಾ ಸಮಯದಲ್ಲಿ ಮಾಲಾಶ್ರೀ ತುಂಬ ಬಿಜಿ ನಟಿ. ಕೇವಲ 8 ದಿನಗಳಲ್ಲಿ ಸಿನಿಮಾ ಮುಗಿಸಿಕೊಟ್ಟಿದ್ದರು. ಚಿತ್ರ ಹಿಟ್ ಆಯಿತು. ಆವತ್ತಿನ ಅವರ ಋಣವನ್ನು ನಾನು ‘ಮಲ್ಲ’ ಸಿನಿಮಾದಲ್ಲಿ ತೀರಿಸಿದೆ. ನನ್ನ ಜತೆಗೆ ‘ಶಕುನಿ’ ಸಿನಿಮಾ ಕೈಗೆತ್ತಿಕೊಂಡಿದ್ದ ರಾಮು, ಆ ಪ್ರಾಜೆಕ್ಟ್ ಕೈಬಿಟ್ಟರು. ನನ್ನ ‘ಮಲ್ಲ’ ಸಿನಿಮಾ ಜತೆ ಕೈ ಜೋಡಿಸಿದರು. ಅದೂ ಹಿಟ್. ರಾಮು ಅನ್ನೋದೇ ಒಂದು ಬ್ರಾಂಡ್. ಇಂಡಸ್ಟ್ರಿಯಲ್ಲಿ ಅದಕ್ಕೇ ಒಂದು ಸ್ಥಾನವಿದೆ’ ಎಂದರು ರವಿಚಂದ್ರನ್. ಶಿವರಾಜಕುಮಾರ್ ಸಹ ರಾಮು ಅವರನ್ನೇ ನೆನಪು ಮಾಡಿಕೊಂಡರು.

    ‘ರಾಮು ಸಿನಿಮಾಗಳೆಂದರೆ ನಮ್ಮ ಹೋಂ ಪ್ರೊಡಕ್ಷನ್ ಇದ್ದಂಗೆ. ಅವರ ನಿರ್ವಣದ ಹಲವು ಚಿತ್ರಗಳಲ್ಲಿ ನಟಿಸಿದ್ದೆ. ಚಿತ್ರಕ್ಕೆ ಬಹಳ ಖರ್ಚು ಮಾಡುತ್ತಿದ್ದರು. ನಮ್ಮಿಬ್ಬರಲ್ಲಿ ಸಂಭಾವನೆ ವಿಷಯ ಯಾವತ್ತೂ ಬರಲಿಲ್ಲ. ಅವರು ಹೋದಾಗ ತುಂಬಾ ದುಃಖವಾಗಿತ್ತು. ಮಾಲಾಶ್ರೀ ಹತ್ತಿರ ಮಾತೂ ಸಹ ಆಡಿರಲಿಲ್ಲ. ಇತ್ತೀಚೆಗಷ್ಟೇ ಮಾತಾಡಿದೆ. ಏನು ಮಾತಾಡಬೇಕು ಅಂತ ಗೊತ್ತಿಲ್ಲ. ಮಾತಾಡಿದರೆ ಎಲ್ಲಿ ಅಳುತ್ತೀನೋ ಎಂಬ ಭಯ ಇತ್ತು. ಯಾವುದೇ ಕಾರಣಕ್ಕೂ ಚಿತ್ರ ನಿರ್ಮಾಣ ನಿಲ್ಲಿಸಬೇಡಿ. ನಾವು ನಿಮ್ಮ ಜತೆ ಸದಾ ಇರುತ್ತೀವಿ. ನಿಮ್ಮ ಬ್ಯಾನರ್​ನಲ್ಲಿ ಇನ್ನೊಂದು ಸಿನಿಮಾ ಮಾಡ್ತೀನಿ, ಇದು ನನ್ನ ಪ್ರಾಮಿಸ್’ ಎಂದರು ಶಿವರಾಜಕುಮಾರ್. ಹೆಚ್ಚೇನೂ ಮಾತನಾಡದೆ, ಪತಿಯ ಕೆಲಸವನ್ನು ನೆನಪು ಮಾಡಿಕೊಂಡು ವೇದಿಕೆ ಮೇಲೆಯೇ ಗದ್ಗದಿತರಾದರು ಮಾಲಾಶ್ರೀ. ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್ ಮುಖ್ಯಭೂಮಿಕೆ ಯಲ್ಲಿರುವ ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡಿದ್ದಾರೆ.

    25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts