ಮುಂಬೈ: ಬಾಲಿವುಡ್ನ ಜನಪ್ರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ‘ಬೈಜು ಬಾವ್ರಾ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವ ವಿಷಯ ನಿನ್ನೆ ಮೊನ್ನೆಯದಲ್ಲ. ಒಂದೆರೆಡು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆ ಚಿತ್ರಕ್ಕೆ ರಣಬೀರ್ ಕಪೂರ್ ನಾಯಕನಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಇತ್ತು. ಈಗ ಬಂದಿರುವ ಸುದ್ದಿಯ ಪ್ರಕಾರ, ರಣವೀರ್ ಸಿಂಗ್ ಚಿತ್ರದ ನಾಯಕರಾಗಿ ಆಯ್ಕೆಯಾಗಿದ್ದಾರಂತೆ. ಈಗಾಗಲೇ ಬನ್ಸಾಲಿ ನಿದೇಣದಲ್ಲಿ ರಣವೀರ್, ‘ರಾಮ್-ಲೀಲಾ’, ‘ಬಾಜಿರಾವ್ ಮಸ್ತಾನಿ’ ಮತ್ತು ‘ಪದ್ಮಾವತ್’ ಚಿತ್ರಗಳಲ್ಲಿ ನಟಿಸಿದ್ದರು. ಈಗ ಬನ್ಸಾಲಿ ಮತ್ತು ರಣವೀರ್ ಕಾಂಬಿನೇಷನ್ನ ನಾಲ್ಕನೇ ಚಿತ್ರ ‘ಬೈಜು ಬಾವ್ರಾ’ ಆಗಲಿದೆ.
ಇದನ್ನೂ ಓದಿ: ಶುಭಾ, ಶಮಂತ್ ಎಲಿಮಿನೇಶನ್ನಿಂದ ಲ್ಯಾಗ್ ಮಂಜುಗೆ ಬಂಪರ್, ಅರವಿಂದ್ ಕನಸಿಗೆ ತಣ್ಣೀರು!
ಆಲಿಯಾ ಭಟ್ ಅಭಿನಯದಲ್ಲಿ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರವನ್ನು ನಿರ್ದೇಶಿಸಿರುವ ಬನ್ಸಾಲಿ, ಈ ವರ್ಷದ ಕೊನೆಯಲ್ಲಿ ಆ ಚಿತ್ರವನ್ನು ಬಿಡಗುಡೆ ಮಾಡಲಿದ್ದಾರೆ. ಆ ಚಿತ್ರ ಮುಗಿಯುತ್ತಿದ್ದಂತೆಯೇ ಅವರು, ‘ಬೈಜು ಬಾವ್ರಾ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದು, ನಾಯಕನ ಪಾತ್ರ ಮಾಡುವುದಕ್ಕೆ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರಂತೆ. ರಣವೀರ್ ಸಹ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ಹಾಗೆ ನೋಡಿದರೆ, ರಣಬೀರ್ ಸಿಂಗ್ ಯಾವತ್ತೂ ಬನ್ಸಾಲಿ ಅವರ ಆಯ್ಕೆ ಆಗಿರಲಿಲ್ಲವಂತೆ. ‘ಬೈಜು ಬಾವ್ರಾ’ ಚಿತ್ರದಲ್ಲಿನ ನಾಯಕನ ಪಾತ್ರ ಮಾಡುವುದಕ್ಕೆ ಅವರ ಮೊದಲ ಆಯ್ಕೆ ರಣವೀರ್ ಸಿಂಗ್ ಆಗಿತ್ತಂತೆ. ಆದರೆ, ಚಿತ್ರದ ಬಗ್ಗೆ ಸುಳ್ಳುಸುದ್ದಿಗಳು ಹೆಚ್ಚಾದ ಕಾರಣ, ಇದೀಗ ಬನ್ಸಾಲಿ ಅವರೇ ಮುಂದೆ ಬಂದು ಚಿತ್ರಕ್ಕೆ ರಣವೀರ್ ಆಯ್ಕೆಯಾಗಿರುವ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಬ್ಲೂಫಿಲ್ಮ್ಂ ಕೇಸ್ನಲ್ಲಿ ಅಪ್ಪ ಜೈಲುಪಾಲು- ಅಮ್ಮನ ಕಣ್ಣೀರು: ಇನ್ಸ್ಟಾಗ್ರಾಂನಲ್ಲಿ ಮಗನ ಪೋಸ್ಟ್
1952ರಲ್ಲೊಮ್ಮೆ ‘ಬೈಜು ಬಾವ್ರಾ’ ಚಿತ್ರ ಬಂದಿದ್ದು, ಬಾವ್ರಾ ಪಾತ್ರವನ್ನು ಆಗಿನ ಖ್ಯಾತ ನಟ ಭರತ್ ಭೂಷಣ್ ನಿರ್ವಹಿಸಿದ್ದರು. ಅವರಿಗೆ ನಾಯಕಿಯಾಗಿ ಮೀನಾಕುಮಾರಿ ನಟಿಸಿದ್ದು, ಈಗ ಆ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.