ಹುಣಸೂರು: ತಾಲೂಕಿನಾದ್ಯಂತ ಮುಸ್ಲಿಮರು ಗುರುವಾರ ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಜಮಾವಣೆಗೊಂಡ ಮುಸ್ಲಿಮರು ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಈದ್ಗಾ ಮೈದಾನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ರತ್ನಪುರಿ: ರತ್ನಪುರಿ (ದರ್ಗಾ)ಯಲ್ಲೂ ರಂಜಾನ್ ಹಬ್ಬ ಆಚರಿಸಲಾಯಿತು. ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಮುಖಂಡರಾದ ಎಸ್.ಪಿ.ಚಾಂದ್, ಅಜ್ಗರ್ ಪಾಷಾ, ಮಹಮದ್ ರಫೀಕ್ ಅಲ್ತಾಪ್ ಶರೀಫ್, ಮಹಮದ್, ಮುಜೀಬ್ ಇತರರು ಇದ್ದರು.