More

    ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

    ಕಿಕ್ಕೇರಿ: ಗ್ರಾಮದಲ್ಲಿ ಮುಸ್ಲಿಮರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

    ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ನಂತರ ಕೋಟೆ ಗಣಪತಿ, ಆಂಜನೇಯ ಬೀದಿಯ ಮೂಲಕ ಮೆರವಣಿಗೆ ಸಾಗಿ ರಥಬೀದಿ, ಮಂದಗೆರೆ ರಸ್ತೆ ಮೂಲಕ ಅಂತಿಮವಾಗಿ ಗ್ರಾಮದ ಹೊರವಲಯದ ಈದ್ಗಾ ಮೈದಾನದಲ್ಲಿ ಸೇರಿ ಧರ್ಮಗುರು ಫಕ್ರಿಯ ಆಲಂ ಅವರು ಕುರಾನ್ ಪಠಣೆ ಮಾಡಿದರು. ಬಳಿಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

    ನಂತರ ಅಮಾನಿಕೆರೆ ಬಳಿ ಇರುವ ಸ್ಮಶಾನಕ್ಕೆ ತೆರಳಿ ಅಗಲಿದ ಪಿತೃಗಳಿಗೆ ನಮಸ್ಕರಿಸಿದರು. ಪುಟಾಣಿ ಮಕ್ಕಳು, ಹಿರಿಯರು, ಯುವಕರು ಹೊಸ ಉಡುಗೆ ತೊಟ್ಟು ಸಂಭ್ರಮಿಸಿದರು. ಮುಖಂಡರಾದ ಸಿದಿಖ್‌ಪಾಷ, ಯುಸೂಫ್‌ಖಾನ್, ಮುಬರಕ್‌ಆಲಿ, ಏಜಸ್ ಪಾಷ, ಶಬ್ಬೀರ್‌ಖಾನ್, ದಾವುದ್‌ಖಾನ್, ಅಬ್ಬಾಸ್, ಅಕ್ಬರ್, ಜಬರ್‌ಪಾಷ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts