ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯ ಪತ್ತೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದ ಒಂದೊಂದೆ ಸ್ಪೋಟಕ ಸಂಗತಿಗಳು ಬಯಲಾಗುತ್ತಿವೆ. ಬಾಂಬ್ ಸ್ಪೋಟಕ್ಕೂ ಮುನ್ನ ಆರೋಪಿ ಖತರ್ನಾಕ್ ಐಡಿಯಾ ಮಾಡಿದ್ದ. ತನ್ನ ಸುಳಿವು ಸಿಗದಂತೆ ಮಾಡಲು ಮೊದಲೇ ಪ್ಲಾನ್ ಮಾಡಿದ್ದ ಎಂಬುದು ಬಯಲಾಗಿದೆ.
ಬಾಂಬ್ ಸ್ಪೋಟಕ್ಕೂ ಮುನ್ನ ರಾಮೇಶ್ವರಂ ಕೆಫೆ ರಸ್ತೆಯಲ್ಲಿಯೇ ಆರೋಪಿ ಸಾಕಷ್ಟು ಬಾರಿ ಸಂಚರಿಸಿದ್ದ. ಕೆಫೆ ಮುಂದೆ ಇಳಿಯುವುದಕ್ಕೂ ಮುಂಚೆ 10 ರಿಂದ 15 ಬಾರಿ ಬಸ್ ಚೇಂಜ್ ಮಾಡಿದ್ದಾನೆ. ಬಳಿಕ ಕೆಫೆ ಹತ್ತಿರ KA-57-F-4517 ನಂಬರ್ ಬಸ್ ನಿಂದ ಇಳಿದಿದ್ದ. ಈ ಬಸ್ ಡಿಪೋ-25ಕ್ಕೆ ಸೇರಿದೆ. ಆದರೆ, ಅದಕ್ಕೂ ಮುಂಚೆ ಪ್ರತಿ ಬಸ್ ನಿಲ್ದಾಣದಲ್ಲೂ ಇಳಿದು ಬಸ್ ಚೇಂಜ್ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿ ಕ್ಯಾಮರಾಗಳಿಲ್ಲದ ಬಸ್ ನಿಲ್ದಾಣಗಳನ್ನೇ ನೋಡಿ ಇಳಿದಿದ್ದಾನೆ. ಒಂದೇ ಬಾರಿ ಮೂರರಿಂದ ನಾಲ್ಕು ಬಸ್ ಬಂದಾಗ, ಅನೇಕ ಬಾರಿ ಬಸ್ ಚೇಂಜ್ ಮಾಡಿದ್ದಾನೆ. ತನ್ನ ಸುಳಿವು ಸುಲಭವಾಗಿ ಸಿಗುತ್ತೆ ಅನ್ನೋ ಕಾರಣಕ್ಕೆ ಸಾಕಷ್ಟು ಬಸ್ಗಳನ್ನು ಆರೋಪಿ ಚೇಂಜ್ ಮಾಡಿದ್ದಾನೆ. ಎಲ್ಲೂ ಕೂಡ ಮಾಸ್ಕ್ ತೆಗೆಯದೆ ಮತ್ತು ಮಾತನಾಡದೇ ಸಂಚಾರ ಮಾಡಿದ್ದಾನೆ.
ಆರಾಮಾಗಿ, ಯಾರಿಗೂ ಅನುಮಾನ ಬರದಂತೆ ಬಸ್ನಲ್ಲಿ ಸಂಚರಿಸಿದ್ದಾನೆ. ಬಸ್ನಲ್ಲಿ ಟಿಕೆಟ್ ತೆಗೆದುಕೊಂಡರೆ ತೊಂದರೆ ಆಗುತ್ತೆ ಅಂತಾ ದಿನದ ಪಾಸ್ ತೆಗೆದುಕೊಂಡು ಸಂಚರಿಸಿದ್ದಾನೆ. ವೋಲ್ವೋ ಬಸ್ನಿಂದ ದಿನದ ಪಾಸ್ ತೆಗೆದುಕೊಂಡು ಎಲ್ಲ ಕಡೆ ಪಾಸ್ ತೋರಿಸಿ ಸಂಚರಿಸಿದ್ದಾನೆ.
ರಾಮೇಶ್ವರಂ ಕೆಫೆಯಿಂದ ಕುಂದನಹಳ್ಳಿ ಕಾಲೊನಿ, ಐಟಿಪಿಯಲ್ ಮಾರ್ಗವಾಗಿ ಹಲವು ಬಸ್ಗಳನ್ನು ಆರೋಪಿ ಬದಲಾಯಿಸಿದ್ದಾರೆ. ಮಾರ್ಗ ಮಧ್ಯೆ ಎರಡು ಕಡೆ ತನ್ನ ಶರ್ಟ್ ಚೇಂಜ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಲೇ ಆರೋಪಿ ಸುಳಿವು ಸಿಗದೇ ಪೊಲೀಸ್ ಇಲಾಖೆ ತಲೆಕೆಡಸಿಕೊಂಡಿದೆ.
ಬಿಎಂಟಿಸಿ ಬಸ್ಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಅಧಿಕಾರಿಗಳು ಒಂದೊಂದಾಗಿ ನೋಡಿತ್ತಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಕಂಡು ಹಿಡಿಯುವುದೇ ದೊಡ್ಡ ಟಾಸ್ಕ್ ಆಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಬಿಎಂಟಿಸಿ ಉನ್ನತ ಮೂಲಗಳಿಂದ ಈ ಮಾಹಿತಿ ತಿಳಿದುಬಂದಿದೆ.
ಲಿಪ್ಲಾಕ್ ಮಾಡೋದಾದ್ರೆ ಈ ನಟನೊಂದಿಗೆ ಮಾತ್ರ! ನಟಿ ಪ್ರಿಯಾ ಭವಾನಿ ಶಂಕರ್ ಓಪನ್ ಟಾಕ್
ಕರ್ತವ್ಯ ಮುಗಿಸಿ ಮನೆಗೆ ಹೋಗುವಾಗ ಕೇಳಿಸಿತು ಆಕ್ರಂದನ: ಸಂಪಿಗೆ ಧುಮುಕಿ ಮಗುವನ್ನು ರಕ್ಷಿಸಿದ ಎಸ್ಐ