ಬೆಂಗಳೂರು: ನನ್ನ ಮಗಳು ಅಮಾಯಕಿ, ಆಕೆ ಅಪಾಯದಲ್ಲಿದ್ದಾಳೆ. ಮೊದಲು ಅವಳನ್ನು ರಕ್ಷಿಸಿ. ಅವಳು ಅಂಥವಳಲ್ಲ, ಯಾರದ್ದೋ ಮಾತು ಕೇಳುತ್ತಿರಬಹುದು ಎಂದು ಎಸ್ಐಟಿ ಪೊಲೀಸರ ಮುಂದೆ ಸಿಡಿ ಲೇಡಿಯ ತಾಯಿ ಕಣ್ಣೀರಿಟ್ಟಿದ್ದಾರೆ.
ಶನಿವಾರ ಬೆಳಗ್ಗೆ ಎಸ್ಐಟಿ ವಿಚಾರಣೆಗೆ ರಮೇಶ್ ಜಾರಕಿಹೊಳಿ ಸಿಡಿ ಕೇಸ್ನ ‘ಸಂತ್ರಸ್ತ’ ಯುವತಿಯ ಪೋಷಕರು ಹಾಜರಾಗಿದ್ದು, ವಿಚಾರಣೆ ವೇಳೆ ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಪೋಷಕರು ಕಣ್ಣಿರಿಟ್ಟಿದ್ದಾರೆ. ಇದನ್ನೂ ಓದಿರಿ ಜಾರಕಿಹೊಳಿ ಸಿಡಿ ಪ್ರಕರಣ ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪೋ?
ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿಯಲ್ಲಿ ಇರುವುದು ನಾನಲ್ಲ ಎಂದು ನನ್ನ ಸಹೋದರಿ ಹೇಳಿದ್ದಳು. ಆಕೆ ಶ್ರೀಕೃಷ್ಣನನ್ನು ನಂಬುತ್ತಾಳೆ. ಕೃಷ್ಣನ ಮೇಲೆ ಆಣೆ ಮಾಡಿದ್ದಾಳೆ ಎಂದು ಯುವತಿಯ ತಮ್ಮ ಎಸ್ಐಟಿ ಮುಂದೆ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ತನ್ನ ಮೊಬೈಲ್ನಲ್ಲಿರುವ ಆಡಿಯೋ ರೆಕಾರ್ಡ್ ಜತೆಗೆ ಯಾವ ನಂಬರ್ನಿಂದ ಕರೆ ಬಂದಿತ್ತು, ಏನು ಮಾತನಾಡಿದ್ರು ಎಂಬುದರ ಬಗ್ಗೆಯೂ ಯುವತಿ ಸಹೋದರ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ