More

    ತನಿಖೆ ವೇಳೆ ಬಯಲಾಯ್ತು ಸಿಡಿ ಗ್ಯಾಂಗ್​ನ ತಂತ್ರ! ಇದು ಎಕ್ಸ್​ಕ್ಲೂಸಿವ್​ ಮಾಹಿತಿ

    ಬೆಂಗಳೂರು: ಬಗೆದಷ್ಟೂ ಆಳ ಎಂಬಂತೆ ತನಿಖೆ ಮುಂದುವರಿದಂತೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ ಲೀಕಾಸುರರ ಎಕ್ಸ್​ಕ್ಲೂಸಿವ್​ ಮಾಹಿತಿ ಲಭ್ಯವಾಗುತ್ತಲೇ ಇದೆ.

    ಸಿಡಿ ಲೀಕ್​ ಆದಾಗಿನಿಂದ ಊರೂರು ಸುತ್ತುತ್ತಿರುವ ಕಿಂಗ್​ಪಿನ್, ಹ್ಯಾಕರ್​, ಯುವತಿ ಸದ್ಯ ರಾಜಸ್ಥಾನದಲ್ಲಿದ್ದಾರೆ ಎನ್ನಲಾಗಿದೆ. ಇನ್ನು ಸಿಡಿ ಬಹಿರಂಗದ ಬಳಿಕ ಸಿಡಿ ಗ್ಯಾಂಗ್ ನಡೆಸಿದ್ದ ತಂತ್ರ ಏನು? ಹ್ಯಾಕರ್ ಶ್ರವಣ್ ಯಾವ ರೀತಿ ಪ್ಲಾನಿಂಗ್ ಮಾಡಿಕೊಂಡಿದ್ದ? ಅನ್ನೋದ್ರ ಕಂಪ್ಲೀಟ್​ ಡಿಟೇಲ್ಸ್ ಇಲ್ಲಿದೆ. ಇದನ್ನೂ ಓದಿರಿ ಸಿದ್ದು-ಡಿಕೆಶಿ ಜತೆ ಲಕ್ಷ್ಮೀ ಏಕಾಂತ ಮಾತುಕತೆ! ಸಿಎಂಗೆ ಲಕ್ಷ್ಮೀ ಬ್ಲಾಕ್​ಮೇಲ್​ ಮಾಡ್ತಾರಾ..?

    ಎಸ್ಐಟಿ ತನಿಖೆ ವೇಳೆ ಹ್ಯಾಕರ್ ಶ್ರವಣ್​ ಸಂವಹನ ನಡೆಸಲು ಹೊಸ ತಂತ್ರ ಅನುಸರಿಸಿದ್ದರ ಬಗ್ಗೆ ಗೊತ್ತಾಗಿದೆ. ವಾಟ್ಸ್​ಆ್ಯಪ್, ಫೇಸ್​ಬುಕ್ ಬಳಿಕ ಸಿಗ್ನಲ್​ನಲ್ಲಿ ಮಾತುಕತೆ ನಡೆಸಿದ್ದಾರೆ. ಪೊಲೀಸರು ಫೋನ್ ಟ್ರ್ಯಾಪ್ ಮಾಡಬಹುದೆಂಬ ಕಾರಣಕ್ಕೆ ಹ್ಯಾಕರ್​ನಿಂದ ಸಿಡಿ ಗ್ಯಾಂಗ್​ಗೆ ಹೊಸ ಸಂದೇಶ ಬಂದಿತ್ತು. ಅದರಂತೆ ಸಂವಹನ ನಡೆಸಲು ಮಾ.2ರಂದು ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ, ಶ್ರವಣ್​, ಕಿಂಗ್​ಪಿನ್​ ನರೇಶ್​ಗೌಡ ಅವರು ತಮ್ಮ ಮೊಬೈಲ್​ನಲ್ಲಿ ಸಿಗ್ನಲ್ ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡಿದ್ದರು.

    ನಾರ್ಮಲ್ ಕಾಲ್​ನಲ್ಲಿ ಮಾತನಾಡಿದ್ರೆ ಗೌಪ್ಯ ಬಯಲಾಗುತ್ತೆ ಅನ್ನೋ ಕಾರಣಕ್ಕೆ ಗುಪ್ತವಾಗಿ ಮಾತನಾಡಲು ವಾಟ್ಸ್​ಆ್ಯಪ್​ ಅಥವಾ ಫೇಸ್​ಬುಕ್ ಬಳಸಿದ್ದರು. ಮಾ.2ರಂದು ಸಿಗ್ನಲ್ ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡು ಮುಂದಿನ ನಡೆ ಕುರಿತು ಚರ್ಚಿಸಿದ್ದಾರೆ. ಸಿಗ್ನಲ್ ಆ್ಯಪ್ ಮೂಲಕವೇ ಸಂದೇಶವನ್ನ ರವಾನೆ ಮಾಡಿಕೊಳ್ಳುತ್ತಿದ್ದರು. ತುರ್ತಾಗಿ ಮಾತನಾಡಬೇಕಿದ್ರೆ ಸಿಗ್ನಲ್ ಆ್ಯಪ್​ನಲ್ಲೇ ಕರೆ ಮಾಡಿ ಮಾಹಿತಿ ಮಿನಿಮಯ ಮಾಡಿಕೊಳ್ಳುತ್ತಿದ್ದರು. (ದಿಗ್ವಿಜಯ ನ್ಯೂಸ್​)

    ಎರಡು ಮಕ್ಕಳ ತಾಯಿ ಆತ್ಮಹತ್ಯೆ! ಇಂಥ ನೀಚ ಕೆಲಸಕ್ಕೆ ಇಳಿದನಾ ಗಂಡ?

    ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

    ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

    ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts