More

    ಯಾವ ಸರ್ಕಾರಕ್ಕೆ ಭಾರತವನ್ನು ಸೂಪರ್ ಪವರ್ ಮಾಡುವ ಶಕ್ತಿಯಿದೆಯೋ ಅದಕ್ಕೆ ಮಾತ್ರ… ರಾಮ್‌ದೇವ್ ಮನವಿ

    ಡೆಹ್ರಾಡೂನ್: ಇಂದು ಡೆಹ್ರಾಡೂನ್​ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಯೋಗ ಗುರು ಬಾಬಾ ರಾಮ್‌ದೇವ್, ರಾಷ್ಟ್ರೀಯ ಹಿತಾಸಕ್ತಿಗಾಗಿ ಮತ ಚಲಾಯಿಸಿ ಮತ್ತು ದೇಶವನ್ನು ಆರ್ಥಿಕ ಹಾಗೂ ಕಾರ್ಯತಂತ್ರದ ಸೂಪರ್ ಪವರ್ ಮಾಡಲು ಸಮರ್ಥವಾಗಿರುವ ಸರ್ಕಾರವನ್ನು ಮಾತ್ರ ಆಯ್ಕೆ ಮಾಡುವಂತೆ ಜನರಲ್ಲಿ ಮನವಿ ಮಾಡಿದರು.

    ಇದನ್ನೂ ಓದಿ: ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಹೊಣೆ: ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್‌ಕುಮಾರ್ ಹೇಳಿಕೆ

    “ನೀವು ರಾಷ್ಟ್ರೀಯ ಹಿತಾಸಕ್ತಿಯಿಂದ ನಿಮ್ಮ ಮತವನ್ನು ಚಲಾಯಿಸಬೇಕು. ಭಾರತವನ್ನು ಆರ್ಥಿಕ ಮತ್ತು ಕಾರ್ಯತಂತ್ರದ ಸೂಪರ್ ಪವರ್ ಮಾಡಲು ಸಮರ್ಥವಾಗಿರುವ ಸರ್ಕಾರವನ್ನು ಆಯ್ಕೆ ಮಾಡಿ. ಕೇವಲ ಅಭಿವೃದ್ಧಿಗಾಗಿ ಕೆಲಸ ಮಾಡುವ ಹಾಗೂ ದೇಶದ ಸಾಂಸ್ಕೃತಿಕ ಪರಂಪರೆಯ ಕಾಳಜಿ ವಹಿಸುವ ಸರ್ಕಾರಕ್ಕೆ ಮತ ನೀಡಿ” ಎಂದು ಹರಿದ್ವಾರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

    “ಆಧ್ಯಾತ್ಮಿಕ ಜೀವನವು ನಮ್ಮ ಸಂಸ್ಕೃತಿ ಮತ್ತು ಸನಾತನದ ಸಂವಿಧಾನದಿಂದ ನಿಯಂತ್ರಿಸಲ್ಪಡುತ್ತದೆ. ಆದರೆ ದೇಶವು ಭಾರತದ ಸಂವಿಧಾನದಿಂದ ನಡೆಸಲ್ಪಡುತ್ತದೆ. ಅದು ನಮಗೆ ಮತದಾನ ಮಾಡುವ ದೊಡ್ಡ ಹಕ್ಕನ್ನು ನೀಡುತ್ತದೆ. ಸನಾತನದಲ್ಲಿ ಬೇರೂರಿರುವ ಜನರಿಗೆ ನಾವೆಲ್ಲರೂ ಮತ ಹಾಕಬೇಕು” ಎಂದರು,(ಏಜೆನ್ಸೀಸ್). 

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts