More

    ರಾಮಭಕ್ತರ ಹತ್ತಿಕ್ಕುವ ಯತ್ನ ಸಲ್ಲ


    ಸಿಂಧನೂರು: ರಾಮ ಭಕ್ತರ ಬಂಧನ ಖಂಡಿಸಿ ಡಿವೈಎಸ್‌ಪಿ ಎಸ್.ಬಿ.ತಳವಾರಗೆ ಹಿಂದು ಜಾಗರಣ ವೇದಿಕೆ ತಾಲೂಕು ಘಟಕ ಗುರುವಾರ ಮನವಿ ಸಲ್ಲಿಸಿತು.

    ಸಿದ್ದರಾಮಯ್ಯ ಸರ್ಕಾರ ಕಳೆದ 31 ವರ್ಷ ಹಳೆಯದಾದ ಅಯೋಧ್ಯೆ ರಾಮ ಮಂದಿರ ಹೋರಾಟ ಪ್ರಕರಣವನ್ನು ಮುಂದಿಟ್ಟುಕೊಂಡು ರಾಮ ಭಕ್ತರನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಈ ಮೂಲಕ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಬಂಧಿಸಿರುವ ರಾಮ ಭಕ್ತರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

    ಪ್ರಮುಖರಾದ ಉದಯ, ಮರಿಸ್ವಾಮಿ, ಅವಿನಾಶ ಮುಳ್ಳೂರು, ಅಭಿಷೇಕ ಸಿಂಧನೂರು, ಸುಭಾಷ, ಮಂಜುನಾಥ ಹೊಸೂರು, ವೆಂಕಟೇಶ, ಯಂಕೋಬ, ಬಸವ ಗಾಂಧಿನಗರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts