ಅಯೋಧ್ಯೆ: ಶ್ರೀರಾಮಮಂದಿರ ನಮ್ಮ ರಾಷ್ಟ್ರದ ಸಂಪ್ರದಾಯಗಳ ಆಧುನಿಕ ಸಂಕೇತವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದರು.
ಶತಮಾನಗಳ ನಿರೀಕ್ಷೆ ರಾಮಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿ, ನಂತರ ಮಾತನಾಡಿದ ಮೋದಿ, ಇಂದು ಜೈ ಸಿಯಾ ರಾಮ್ ಎಂಬ ಮಂತ್ರ ಘೋಷ ಕೇವಲ ಅಯೋಧ್ಯೆಯಲ್ಲಿ ಅಷ್ಟೇ ಅಲ್ಲ. ಜಗತ್ತಿನಾದ್ಯಂತ ಮೊಳಗುತ್ತಿದೆ. ಈ ಧಾರ್ಮಿಕ ಸಮಾರಂಭದ ದಿನ ನಾನು ಎಲ್ಲ ರಾಮಭಕ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಪತಂಜಲಿ ಯೋಗಪೀಠದ ಬೃಹತ್ ಗುರುಕುಲ: ಯೋಜನೆ ಘೋಷಿಸಿದ ಬಾಬಾ ರಾಮದೇವ್
ಶ್ರೀರಾಮಮಂದಿರ ಭಕ್ತಿ, ನಮ್ಮ ದೇಶದ ಭಾವನೆಗಳ ಸಂಕೇತವಾಗಲಿದೆ. ಕೋಟ್ಯಂತರ ಜನರ ಸಂಕಲ್ಪ ಶಕ್ತಿಯ ಪ್ರತೀಕವಾಗಲಿದೆ. ಹಾಗೇ ಮುಂದಿನ ಪೀಳಿಗೆ ಶ್ರೀರಾಮಮಂದಿರ ಸ್ಫೂರ್ತಿ ಎಂದರು.
ಇಷ್ಟ ದಿನ ಮಂದಿರವಿಲ್ಲದೆ, ಟೆಂಟ್ನಲ್ಲಿದ್ದ ರಾಮಲಲ್ಲಾನಿಗೆ ಭವ್ಯ ಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂದು ಮೋದಿಯವರು ಹೇಳಿದರು.ಇಂದು ಸರಯೂ ನದಿಯ ದಡದಲ್ಲಿ, ಭಗವಾನ್ ಭಾಸ್ಕರನ ಸಮ್ಮುಖದಲ್ಲಿ ಭಾರತದ ಇತಿಹಾಸದಲ್ಲಿ ಅದ್ಭುತ ಅಧ್ಯಾಯ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು. (ಏಜೆನ್ಸೀಸ್)
LIVE: ನೆರವೇರಿತು ರಾಮಮಂದಿರದ ಶಿಲಾನ್ಯಾಸ: ರಾಮ ಪರಿವರ್ತನೆಯ ಪ್ರತಿಪಾದಕ – ಪ್ರಧಾನಿ ಮೋದಿ