More

    ಅಪ್ಪು ಬಗ್ಗೆ ಜಾಸ್ತಿ ಮಾತನಾಡುವುದಿದೆ ಎಂದು ರಜನಿಕಾಂತ್ ಹೇಳಿದ್ದಿಷ್ಟು..

    ಬೆಂಗಳೂರು: ಪವರ್​ಸ್ಟಾರ್ ಪುನೀತ್​ ರಾಜಕುಮಾರ್​ ಅವರಿಗೆ ಮರಣೋತ್ತರವಾಗಿ ಘೋಷಿಸಲಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಪರ್​ಸ್ಟಾರ್ ರಜನಿಕಾಂತ್, ನಟ ಜೂ.ಎನ್​ಟಿಆರ್ ಜತೆಯಾಗಿ ಪ್ರದಾನ ಮಾಡಿದರು.

    ಅಪ್ಪು ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್​ ರಾಜಕುಮಾರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಪ್ರದಾನ ಸಂದರ್ಭದಲ್ಲೇ ಮಳೆಯೂ ಸುರಿದಿದ್ದರಿಂದ ವರುಣ ಸಿಂಚನವೂ ಆಯಿತು. ಪ್ರಶಸ್ತಿ ಪ್ರದಾನ ಬಳಿಕ ಮಾತನಾಡಿದ ರಜನಿಕಾಂತ್, ಯಾವುದೇ ಭೇದ-ಭಾವವಿಲ್ಲದೆ ಎಲ್ಲರೂ ಶಾಂತಿಯಿಂದ ಬಾಳಬೇಕು ಎಂದು ದೇವರು, ಅಲ್ಲಾ, ಜೀಸಸ್​ನಲ್ಲಿ ಬೇಡಿಕೊಳ್ಳುತ್ತೇನೆ ಎಂದರು. ಅಪ್ಪು ಬಗ್ಗೆ ಜಾಸ್ತಿ ಹೇಳುವುದಿದೆ, ಮಳೆ ಬರುತ್ತಿದೆ, ಮತ್ತೊಮ್ಮೆ ಬಂದು ಮಾತನಾಡುತ್ತೇನೆ ಎಂದರು.

    ನಂತರ ರಜನಿಕಾಂತ್, ಸಿಎಂ, ಸಚಿವ ಅಶೋಕ್​ ಒಂದೇ ಕಾರಿನಲ್ಲಿ ವಿಧಾನಸೌಧದಿಂದ ಸಿಎಂ ಅವರ ಆರ್​.ಟಿ.ನಗರ ನಿವಾಸಕ್ಕೆ ತೆರಳಿದರು. ಪ್ರತ್ಯೇಕವಾಗಿ ಬೇರೆ ಕಾರಿನಲ್ಲಿ ಜೂ.ಎನ್​​ಟಿಆರ್​, ಸಚಿವರಾದ ಸುಧಾಕರ, ಮುನಿರತ್ನ ಹಾಗೂ ಇನ್ನೊಂದು ಕಾರಿನಲ್ಲಿ ಸುಧಾಮೂರ್ತಿ ತೆರಳಿದರು.

    ಅಪ್ಪು ಪರವಾಗಿ ಕರ್ನಾಟಕ ರತ್ನ ಸ್ವೀಕರಿಸಿದ ಅಶ್ವಿನಿ: ವರುಣ ಸಿಂಚನದ ನಡುವೆ ಪ್ರಶಸ್ತಿ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts