More

    ವಿಶ್ವಾಸ ಮತ ಯಾಚಿಸಲು ರಾಜಸ್ಥಾನ ಸಿಎಂ ಚಿಂತನೆ; ಆರು ತಿಂಗಳ ನೆಮ್ಮದಿಯೇ ಕಾರಣ…!

    ಜೈಪುರ: ಬಂಡಾಯ ಕಾಂಗ್ರೆಸ್​ ಶಾಸಕರು ಪಕ್ಷಕ್ಕೆ ಮರಳಿದ ಹೊರತಾಗಿಯೂ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲು ಸಿಎಂ ಅಶೋಕ್​ ಗೆಹ್ಲೋಟ್​ ಮುಂದಾಗಿದ್ದಾರೆ.

    ಈಗ ವಿಶ್ವಾಸ ಮತ ಯಾಚನೆ ನಡೆದಲ್ಲಿ ಇನ್ನಾರು ತಿಂಗಳವರೆಗೆ ಮತ್ತೊಮ್ಮೆ ಯಾರೂ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಿಲ್ಲ. ಇದರಿಂದಾಗಿ ಕೊಂಚ ನೆಮ್ಮದಿ ದೊರೆಯಲಿದೆ. ಇದಲ್ಲದೇ ಪಕ್ಷದೊಳಗಿನ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬಹುದು ಎಂಬುದು ಸಿಎಂ ಉದ್ದೇಶ ಎಂದು ಹೇಳಲಾಗಿದೆ.

    ಇದನ್ನೂ ಓದಿ; ಹುದ್ದೆ ಬಯಸಿಲ್ಲ, ರಾಜಕೀಯ ಕಲಹಕ್ಕೂ ಅವಕಾಶವಿಲ್ಲ; ತಿಂಗಳ ಬಳಿಕ ಜೈಪುರ್​ಗೆ ಮರಳಿದ ಸಚಿನ್​ ಪೈಲಟ್​ 

    ಆಗಸ್ಟ್​ 14ರಂದು ವಿಧಾನಸಭೆ ಕಲಾಪ ಆರಂಭವಾದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಇನ್ನಷ್ಟು ಸಮಯದವರೆಗೆ ಶಾಸಕರನ್ನು ರೆಸಾರ್ಟ್​ನಲ್ಲಿ ಹಿಡಿದಿಡಲು ಸಾಧ್ಯವಾಗದು ಎಂಬ ಅಂಶವೂ ಕೂಡ ಇದಕ್ಕೆ ಕಾರಣವೆನ್ನಲಾಗಿದೆ.

    ಕಾಂಗ್ರೆಸ್​ ಕೇಂದ್ರ ಪರಿವೀಕ್ಷಕರಾದ ರಣ್​ದೀಪ್​ ಸಿಂಗ್ ಸುರ್ಜೇವಾಲಾ ಹಾಗೂ ಅಜಯ್​ ಮಾಕನ್​ ಕಳೆದ ಒಂದು ತಿಂಗಳಿನಿಂದ ಜೈಪುರ್​ನಲ್ಲಿಯೇ ಬೀಡುಬಿಟ್ಟಿದ್ದಾರೆ. ಎಲ್ಲ ಬೆಳವಣಿಗೆಗಳ ಮೇಲೂ ಕಣ್ಣಿಟ್ಟಿದ್ದಾರೆ.

    ಇದನ್ನೂ ಓದಿ; ರಾಜಸ್ಥಾನದಲ್ಲಿ ತೇಪೆ ಹಚ್ಚಿದ್ರು, ಮಣಿಪುರದಲ್ಲಿ ಹೋಳಾಯ್ತು; 6 ಕಾಂಗ್ರೆಸ್​ ಶಾಸಕರ ರಾಜೀನಾಮೆ, ಪಕ್ಷಕ್ಕೂ ಗುಡ್​ಬೈ 

    ಸಚಿನ್​ ಪೈಲಟ್​ ಸೇರಿ ಬಂಡಾಯವೆದ್ದಿದ್ದ 19 ಶಾಸಕರು ಪಕ್ಷಕ್ಕೆ ಮರಳಿರುವುದರಿಂದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷೇತರರು ಹಾಗೂ ಇತರ ಪಕ್ಷಗಳ ಸಹಕಾರದೊಂದಿಗೆ ಕಾಂಗ್ರೆಸ್​ ಒಟ್ಟು 125ಕ್ಕೂ ಅಧಿಕ ಶಾಸಕರ ಬೆಂಬಲ ಹೊಂದಿದಂತಾಗಲಿದೆ.

    ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮೋದಿ ಸಜ್ಜು; ಭೌತಿಕ ತರಗತಿಗಳೇ ಇರಲ್ಲ, ಆನ್​ಲೈನ್​ ಕ್ಲಾಸ್​ಗಳೇ ಎಲ್ಲ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts