More

    ಕಾಂಗ್ರೆಸ್​ ಸಮಾವೇಶಕ್ಕೆ ಮಳೆ ಅಡ್ಡಿ; ವರುಣನ ಅಬ್ಬರದ ನಡುವೆ ರಾಹುಲ್​ ಗಾಂಧಿ ಭಾಷಣ

    ಜೇವರ್ಗಿ: ರಾಜ್ಯ ವಿಧಅನಸಭೆ ಚುನವಾಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಸಬೆ, ಸಮಾವೇಶಗಳನ್ನು ಮಾಡುವ ಮೂಲಕ ಭರ್ಜರಿ ಮತಬೇಟೆಯಲ್ಲಿ ತೊಡಗಿದ್ದಾರೆ.

    ಇನ್ನು ಶುಕ್ರವಾರ ಕಲಬುರ್ಗಿ ಜಿಲ್ಲೆಯ ಜೇರ್ವಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ನೋಡಲು ಜನರು ಮಳೆಯ ನಡುವೆ ಕಿಕ್ಕಿರಿದು ಸೇರಿದ್ದು ವಿಶೇಷವಾಗಿತ್ತು.

    ಗುಡುಗು ಸಹಿತ ಮಳೆ

    ಜಿಲ್ಲೆಯಲ್ಲಿ ಗುಡುಡು ಸಹಿತ ಭಾರಿ ಮಳೆಯಾಗುತ್ತಿದ್ದು ಇದರ ನಡುವೆಯೂ ಸಾವಿರಾರು ಜನರು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ನೋಡಲು ಜೇವರ್ಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು.

    ಭಾರಿ ಮಳೆಯ ನಡುವೆಯೂ ಕೂಡ ಸಮಾವೇಶಕ್ಕೆ ಆಗಮಿಸಿದ ರಾಹುಲ್​ ಗಾಂಧಿ ಸಂಪೂರ್ಣ ವದ್ದೆಯಾಗಿದ್ದ ವೇದಿಕೆಯನ್ನು ಏರಿ ಸಮಾವೇಶವನ್ನು ಉದ್ದೇಶಿಸಿ ರಾಹುಲ್​ ಗಾಂಧಿ ಭಾಷಣ ಮಾಡಿದ್ಧಾರೆ.

    public meeting

    ನಿರಂತರ ಮಳೆಯ ನಡುವೆಯೂ ಭಾಷಣ ಮಾಡಿದ ರಾಹುಲ್​ ಗಾಂಧಿ ಕಾಂಗ್ರೆಸ್​ ಅಧಿಕಾರಿಕ್ಕೆ ಬಂದರೆ ಈಗಾಗಲೇ ಘೋಷಿಸಿರುವ ಗ್ಯಾರಂಟಿ ಕಾರ್ಡ್​ಗಳನ್ನು ಜಾರಿಗೆ ತರಲಾಗುವುದು. ಇದಕ್ಕಾದರೂ ನೀವು ಕಾಂಗ್ರೆಸ್​ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ವಿನಂತಿಸಿದ್ದಾರೆ.

    ಇದನ್ನೂ ಒದಿ: ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಜಾಗ ಕೇಳಿದ ಕಾನೂನು ವಿವಿ

    ಇದು ಒಳ್ಳೆಯ ಸಂಕೇತ

    ಇನ್ನು ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್​ ಅಭ್ಯರ್ಥಿ ಡಾ. ಅಜಯ್​ ಸಿಂಗ್ ಮಳೆ ಬರುತ್ತಿರುವುದು ಒಳ್ಳೆಯ ಸಂಕೇತವಾಗಿದ್ದು ಇದು ರೈತರಿಗೆ ಶುಭ ಸೂಚನೆಯಾಗಿದೆ. ಈ ಮೂಲಕ ರಾಜ್ಯವನ್ನು ಆಳಿದ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಒಂದು ದೊಡ್ಡ ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts