ರಾಯಚೂರು: ಚರಂಡಿ ನೀರು ಬಿಡುವ ವಿಷಯಕ್ಕೆ ನಡೆದ ಗಲಾಟೆಯಲ್ಲಿ ವೃದ್ಧೆ ಸಾವನ್ನಪ್ಪಿದ್ದು, ಸ್ಥಳೀಯರು ಆರೋಪಿಗಳ ಮನೆ ಮುಂದೆ ವೃದ್ಧೆ ಶವವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ನಿಲೋಗಲ್ ಕ್ರಾಸಿನಲ್ಲಿ ಬಿಜೆಪಿ ಮುಖಂಡ ಶರಣಪ್ಪ ಗೌಡ ಹಾಗೂ ಅವರ ಗುಂಪಿನಿಂದ ಹಲ್ಲೆ ಆರೋಪ ಮಾಡಲಾಗಿದೆ. ಸೈನಿಕ ಅಮರೇಶ ಅವರ ತಾಯಿ ವೀರಮ್ಮ ಲಿಂಗಪ್ಪ (75) ಸಾವನ್ನಪ್ಪಿದೆ ವೃದ್ಧೆ. ಸ್ಥಳೀಯರು ಪ್ರತಿಭಟನೆಗೆ ಮುಂದಾಗ್ತಿದ್ದಂತೆ ಶರಣಪ್ಪಗೌಡ ಪರಾರಿಯಾಗಿದ್ದು, ಮನೆಯ ಮುಂದೆ ಶವ ಇಟ್ಟು ನ್ಯಾಯಕ್ಕಾಗಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಹಿನ್ನೆಲೆ, ಕೆಎಸ್ಆರ್ಪಿ ತುಕಡಿ ಸೇರಿದಂತೆ ಡಿವೈಎಸ್ಪಿ ಎಸ್.ಎಸ್ ಹುಲ್ಲೂರ್, ಇಬ್ಬರು ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪ್ರೇಮಿಗಳ ದಿನದಂದೇ ಪತಿ ಮನೆಯಿಂದ ಮಗಳನ್ನು ಕಿಡ್ನಾಪ್ ಮಾಡಿದ ಅಪ್ಪ? ಗಂಡನಿಂದ ದೂರು ದಾಖಲು!
ರೇಪ್ಗೂ ಹಿಜಾಬ್ಗೂ ಸಂಬಂಧ ಕಲ್ಪಿಸಿ ಉಲ್ಟಾ ಹೊಡೆದ ಜಮೀರ್: ಮುಜುಗರದಲ್ಲಿ ಕಾಂಗ್ರೆಸ್!