ಲಖನೌ: ಪ್ರತಿಭಟನಾನಿರತ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಮತ್ತು ಸಾವುನೋವುಗಳು ಸಂಭವಿಸಿದ್ದ ಉತ್ತರಪ್ರದೇಶದ ಲಖೀಂಪುರ ಖೇರಿಗೆ ಭೇಟಿ ನೀಡಲು ರಾಜ್ಯ ಸರ್ಕಾರ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂದಿ, ಪ್ರಿಯಾಂಕಾ ಗಾಂಧಿ ಮತ್ತು ಇನ್ನೂ ಮೂವರಿಗೆ ಅನುಮತಿ ನೀಡಿದೆ.
ರಾಜ್ಯ ಸರ್ಕಾರವು ಐದು ಜನರ ಗುಂಪುಗಳಲ್ಲಿ ಲಖೀಂಪುರ್ ಖೇರಿಗೆ ಹೋಗಲು ಜನರಿಗೆ ಅನುಮತಿ ನೀಡಿದೆ. ಅಲ್ಲಿಗೆ ಹೋಗಬಯಸುವವರು ಯಾರು ಬೇಕಿದ್ದರೂ ಈಗ ಹೋಗಬಹುದು ಎಂದು ರಾಜ್ಯದ ಪೊಲೀಸ್ ಅಡಿಷನಲ್ ಡೈರೆಕ್ಟರ್ ಜನರಲ್ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಿರ್ಬಂಧಗಳನ್ನು ಹೇರಿತ್ತು, ಸಂಚಾರವನ್ನು ನಿರ್ಬಂಧಿಸುವ ಸಲುವಾಗಿ ಅಲ್ಲ. ಈ ಪ್ರಕರಣದಲ್ಲಿ ಪೊಲೀಸರು ವಿವರವಾದ ತನಿಖೆ ನಡೆಸಲಿದ್ದು, ಯಾರೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮುಳುಗುವ ಹಡಗು ಎನ್ನುವವರಿಗೆ 2023ರಲ್ಲಿ ಉತ್ತರ : ವಿರೋಧಿಗಳಿಗೆ ಮಾಜಿ ಸಿಎಂ ಎಚ್ಡಿಕೆ ಸಂದೇಶ
ಭಾನುವಾರ ನಡೆದ ಉದ್ವಿಗ್ನ ಘಟನೆಯ ನಂತರ ಘಟನಾ ಸ್ಥಳದಲ್ಲಿ ಸೆಕ್ಷನ್ 144 ಅಡಿ ಕರ್ಫ್ಯೂ ವಿಧಿಸಲಾಗಿತ್ತು ಹಾಗೂ ಅಲ್ಲಿಗೆ ಹೊರಟಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಮಾರ್ಗಮಧ್ಯೆಯೇ ತಡೆದು ಗೃಹಬಂಧನದಲ್ಲಿರಿಸಲಾಗಿತ್ತು. ಇದೀಗ ಯುಪಿ ಸರ್ಕಾರ ಕಾಂಗ್ರೆಸ್ ನಾಯಕರಿಗೆ ಸ್ಥಳಕ್ಕೆ ತೆರಳಲು ಅವಕಾಶ ಕಲ್ಪಿಸಿದೆ.
ಲಖನೌನಲ್ಲಿ ರಾಹುಲ್ ಗಾಂಧಿ: ಲಖೀಂಪುರ್ ಖೇರಿಗೆ ತೆರಳಲು ರಾಹುಲ್ ಗಾಂಧಿ, ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ, ಛತ್ತೀಸಗಡ ಸಿಎಂ ಭೂಪೇಶ್ ಬಗೇಲ್, ಕೆ.ಸಿ.ವೇಣುಗೋಪಾಲ್, ರಣದೀಪ್ ಸರ್ಜೇವಾಲಾ ಅವರನ್ನೊಳಗೊಂಡ ಕಾಂಗ್ರೆಸ್ ನಿಯೋಗ ಅದಾಗಲೇ ಲಖನೌ ತಲುಪಿದೆ. ಲಖನೌ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರಿಗೆ ಭದ್ರತಾ ದೃಷ್ಟಿಯಿಂದ ಪೊಲೀಸ್ ಎಸ್ಕಾರ್ಟ್ನಲ್ಲಿ ಘಟನಾ ಸ್ಥಳಕ್ಕೆ ಹೋಗಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರು ಕೊಂಚ ಕಾಲ ಅಲ್ಲೇ ಧರಣಿ ಕುಳಿತಿದ್ದರು. ನಂತರ ತಮ್ಮ ವಾಹನದಲ್ಲೇ, ಲಖೀಂಪುರದಲ್ಲಿ ಸಾವಪ್ಪಿದ ರೈತರ ಕುಟುಂಬಸ್ಥರನ್ನು ಮಾತನಾಡಿಸಲು ತೆರಳಿದರು. (ಏಜೆನ್ಸೀಸ್)
ಮಕ್ಕಳಾಗದ ದಂಪತಿಗಳೇ ಇವರ ಟಾರ್ಗೆಟ್! ಬಾಡಿಗೆ ತಾಯಿ ಹೆಸರಲ್ಲಿ ಬಡ ಮಕ್ಕಳ ಮಾರಾಟ