ತಿರುಪತಿ (ಆಂಧ್ರ ಪ್ರದೇಶ): ಯುವತಿಯೊಬ್ಬಳು ಮದುವೆ ಹೆಸರಲ್ಲಿ ನಂಬಿಸಿ ಹಣ ದೋಚಿದ್ದಾಳೆಂದು ಆರೋಪಿಸಿ ಯುವಕನೊಬ್ಬ ಶನಿವಾರ ರಾತ್ರಿ ಅಲಿಪಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ವಿಜಯಪುರಂ ವಲಯದ ನರಪರಾಜು ಕಂಡ್ರಿಗ ಮೂಲದ ಸುನೀಲ್ ಕುಮಾರ್ (29) ಮಾರ್ಕೆಟಿಂಗ್ ಕೆಲಸ ಮಾಡಿಕೊಂಡು ಕಳೆದ ಐದು ವರ್ಷಗಳಿಂದ ಸತ್ಯನಾರಾಯಣಪುರಂನಲ್ಲಿ ನೆಲೆಸಿದ್ದಾನೆ. ಈ ವೇಳೆ ಎಡಿಬಿ ಫೈನಾನ್ಸ್ ಕಾರ್ಪೊರೇಷನ್ನಲ್ಲಿ ಕೆಲಸ ಮಾಡುತ್ತಿದ್ದ ಎಂ. ಸುಹಾಸಿನಿ ಎಂಬಾಕೆಯ ಪರಿಚಯವಾಗಿದೆ.
ಇಬ್ಬರ ನಡುವಿನ ಪರಿಚಯ ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿದೆ. ತಾನೊರ್ವ ಅನಾಥೆ ಎಂದು ಹೇಳಿಕೊಂಡಿರುವ ಸುಹಾಸಿನಿ, ಕಳೆದ ಡಿಸೆಂಬರ್ನಲ್ಲಿ ಸುನೀಲ್ ಜತೆ ಮದುವೆ ಆಗಿದ್ದಳು. ಈ ವೇಳೆ ಸುನೀಲ್ ಕುಟುಂಬ ಸುಹಾಸಿನಿಗೆ 20 ಗ್ರಾಂ ಚಿನ್ನಾಭರಣ ತೊಡಿಸಿದ್ದರು. ಈ ನಡುವೆ ಸುಹಾಸಿನಿ ಚಿಕ್ಕಂದಿನಿಂದಲೂ ತನ್ನನ್ನು ನೋಡಿಕೊಳ್ಳುತ್ತಿದ್ದ ಅಂಕಲ್ಗೆ ಇತ್ತೀಚೆಗಷ್ಟೇ ಲಕ್ಷ ಲಕ್ಷ ರೂ. ಹಣವನ್ನು ನೀಡಿದ್ದಳು. “ನನ್ನ ಆರೋಗ್ಯ ಸರಿಯಿಲ್ಲದಿದ್ದಾಗ ಸ್ವಲ್ಪ ಸಾಲ ಮಾಡಿದ್ದೆ ಮತ್ತು ಮದುವೆಗೂ ಹಣ ಪಡೆದುಕೊಂಡಿದ್ದೆ” ಎಂದು ಸುಳ್ಳು ಹೇಳಿದ್ದಳು.
ಇತ್ತ ಸುನೀಲ್ ಕಡೆಯಿಂದ ಲಕ್ಷ ಲಕ್ಷ ಹಣ ಪಡೆದುಕೊಂಡ ಮಾರನೇ ದಿನವೇ ಆಕೆ ಪರಾರಿಯಾಗಿದ್ದಾಳೆ. ಅಂದರೆ, ಇದೇ ತಿಂಗಳ 7ರಂದು ಪರಾರಿಯಾಗಿದ್ದು, ಈವರೆಗೂ ಆಕೆಯ ಸುಳಿವಿಲ್ಲ. ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಇದರ ನಡುವೆ ಆಕೆಯ ಆಧಾರ್ ಕಾರ್ಡ್ ಸಹಾಯದಿಂದ ಆಕೆಗೆ ಮೊದಲೇ ನೆಲ್ಲೂರು ಜಿಲ್ಲೆಯ ವೆಂಕಟೇಶ್ವರ್ ಎಂಬಾತನ ಜತೆ ಮದುವೆ ಆಗಿ ಓರ್ವ ಹೆಣ್ಣು ಮಗಳಿದ್ದಾಳೆ ಎಂಬ ಶಾಕಿಂಗ್ ವಿಚಾರ ಸುನೀಲ್ಗೆ ತಿಳಿದಿದೆ. ಇದೀಗ ಸುನೀಲ್ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. (ಏಜೆನ್ಸೀಸ್)
ಮದುವೆ ಊಟದಲ್ಲಿ ಮೀನಿನ ತಲೆಗಾಗಿ ಹೊಡೆದಾಡಿದ ಸಂಬಂಧಿಗಳು! 11 ಮಂದಿ ಆಸ್ಪತ್ರೆಗೆ ದಾಖಲು
ಸಂಚಾರಿ ವಿಜಯ್ಗೆ ಬೆಡ್ ಇಲ್ಲ ಎಂದಿದ್ದ ಆಸ್ಪತ್ರೆ: ಸುದೀಪ್ ಮನವಿ ಬಳಿಕ ತಕ್ಷಣ ಚಿಕಿತ್ಸೆ ಆರಂಭ
ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಲು ಸಂಚು ರೂಪಿಸಿದ್ದ ಟಿಕ್ಟಾಕ್ ಸ್ಟಾರ್ ಸಿಕ್ಕಿಬಿದ್ದಿದ್ದೇ ರೋಚಕ!