ಬೆಂಗಳೂರು: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ “ವಿಜಯಾನಂದ” ಸಿನಿಮಾದ ಭರ್ಜರಿ ಆಡಿಷನ್ ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದು, ಜನರ ದಂಡು ಹರಿದುಬಂದಿದೆ.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಡಿಷನ್ ನಡೆಯುತ್ತಿದೆ. ಇಂದು (ಅ. 9) ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿರುವ ಆಡಿಷನ್, ಸಂಜೆ 7 ಗಂಟೆಗೆ ಮುಗಿಯಲಿದೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ಆಡಿಷನ್ ನಡೆದಿತ್ತು. ಆ ಸಂದರ್ಭದಲ್ಲಿ 3500ಕ್ಕೂ ಹೆಚ್ಚು ಜನರು ಆಡಿಷನ್ನಲ್ಲಿ ಭಾಗವಹಿಸಿದ್ದರು. ಈ ಮೂಲಕ ವಿಜಯಾನಂದ ಚಿತ್ರದ ಮೊದಲ ಆಡಿಷನ್ಗೆ ಭರಪೂರ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಆಡಿಷನ್ಗೂ ಪ್ರತಿಭೆಗಳು ಜಮಾಯಿಸುತ್ತಿದ್ದಾರೆ.
ಅಂದಹಾಗೆ ವಿಜಯಾನಂದ ಸಿನಿಮಾ ವಿಆರ್ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಸಂಸ್ಥೆಯ ಚೊಚ್ಚಲ ನಿರ್ಮಾಣದ ಸಿನಿಮಾ. ಈ ಚಿತ್ರದ ಮೂಲಕ VRL ಸಮೂಹ ಸಂಸ್ಥೆಗಳ ಎಂ.ಡಿ. ಆನಂದ ಸಂಕೇಶ್ವರ ಅವರು ಚಿತ್ರ ನಿರ್ಮಾಣ ಸಾಹಸಕ್ಕೂ ಕೈಹಾಕಿದ್ದಾರೆ. ಈಗಾಗಲೇ ಲಾಜಿಸ್ಟಿಕ್ಸ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ವಿಆರ್ಎಲ್ ಸಂಸ್ಥೆ ಅದ್ವಿತೀಯ ಸಾಧನೆ ಮಾಡಿದೆ.
ವಿಜಯಾನಂದ, ರಿಶಿಕಾ ಶರ್ಮ ನಿರ್ದೇಶನದ ಸಿನಿಮಾ ಆಗಿದ್ದು, ಉತ್ತರ ಕರ್ನಾಟಕದ ಪ್ರತಿಭೆ ನಿಹಾಲ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಮಾಸಾಂತ್ಯದಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ನಿಂದ ಸಿನಿಮಾ ಗಮನ ಸೆಳೆದಿದೆ. ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಕಾಣಿಸಿಕೊಳ್ಳುತ್ತಿದ್ದಾರೆ.
ಕಾಮಿಡಿ ಮಾಡಿ ಬೇಜಾರಿಲ್ಲ ಆದ್ರೆ ಟ್ರೋಲ್ ಮಾಡಿ ಕುಟುಂಬಕ್ಕೆ ನೋವು ಕೊಡ್ಬೇಡಿ: ರವಿಯ ನೋವಿನ ಮನವಿ..!
ಮಗ ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಆಗ್ತದ್ದಂತೆಯೇ ಶತಕೋಟಿ ಆಸ್ತಿ ದಾನ- ಇಡೀ ಚಿತ್ರರಂಗಕ್ಕೆ ಶಾಕ್ ತಂದ ನಟ!
ಇಡೀ ರಾಜ್ಯವೇ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: ಆರೋಪಿ ಪತಿಗೆ ಹೈಕೋರ್ಟ್ ಬಿಗ್ ಶಾಕ್..!
ಐಟಿ ವಶಕ್ಕೆ ಮಹತ್ವದ ದಾಖಲೆ: ಟೆಂಡರ್ನಲ್ಲಿ ಕೋಟ್ಯಂತರ ರೂ. ಅವ್ಯವಹಾರ, ಕೆಲವೆಡೆ ದಾಳಿ ಅಂತ್ಯ..