ಮ್ಯಾಡ್ರಿಡ್: ಸ್ಪೇನ್ನ ನ್ಯಾಯಾಲಯವೊಂದು ನೀಡಿರುವ ತೀರ್ಪು ಇದೀಗ ಭಾರೀ ಚರ್ಚೆಗೆ ಗುರಿಯಾಗಿದೆ. ಮಹಿಳಾ ಹಕ್ಕುಗಳ ಸಂಘಟನೆಗಳು ಕೋರ್ಟ್ ನೀಡಿರುವ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿವೆ.
ವಿವರಣೆಗೆ ಬರುವುದಾದರೆ, ಸುಮಾರು 80 ಮಹಿಳೆಯರು ಸ್ಪೇನ್ನ ಸೆರ್ವೋ ನಗರದಲ್ಲಿ 2019ರಲ್ಲಿ ನಡೆದ ಮರುಕ್ಸೈನಾ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಹಿಳೆಯರು ಹೊರವಲಯದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಅಪರಿಚಿತ ವ್ಯಕ್ತಿಯೊಬ್ಬ ರಹಸ್ಯ ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಿ ಪೋರ್ನ್ ಸೈಟಿನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದ. ಈ ಘಟನೆ ಇಡೀ ಸ್ಪೇನ್ನಲ್ಲಿ ಭಾರೀ ಕೋಲಹಾಲ ಎಬ್ಬಿಸಿತ್ತು.
ಪೋರ್ನ್ ಸೈಟಿನಲ್ಲಿ ತಮ್ಮ ವಿಡಿಯೋಗಳನ್ನು ನೋಡಿದ ಸಂತ್ರಸ್ತ ಮಹಿಳೆರು 2020ರಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಅಂದಿನಿಂದ ಪ್ರಕರಣದ ವಿಚಾರಣೆ ನಡೆದುಕೊಂಡು ಬರುತ್ತಿದೆ. ಇದೀಗ ತೀರ್ಪು ಹೊರಬಿದ್ದಿದ್ದು, ಸಾರ್ವಜನಿಕ ಪ್ರದೇಶದಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವುದನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಡ್ಜ್ ಪಬಲೋ ಮುನೋಜ್ ವಾಕ್ಯೂಜ್ ಆದೇಶ ಹೊರಡಿಸಿದ್ದಾರೆ.
ತೀರ್ಪನ್ನು ಮರುಪರಿಶೀಲಿಸುವಂತೆ ಮಹಿಳಾ ಸಮಾನತೆಯ ರಾಷ್ಟ್ರೀಯ ಅಧ್ಯಕ್ಷೆ ಸುಸನ್ನಾ ಕ್ಯಾಮರೆರೊ ಅವರು ಲುಗೊ ಪ್ರಾಂತೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತೀರ್ಪಿನ ಬಗ್ಗೆ ಮಾತನಾಡಿರುವ ಸಂತ್ರಸ್ತೆ ಒಬ್ಬ, ನಮ್ಮ ವಿಡಿಯೋಗಳು ಪೋರ್ನ್ ಸೈಟಿನಲ್ಲಿವೆ ಎಂಬುದನ್ನು ನಮ್ಮ ಫ್ರೆಂಡ್ಸ್ ಮೂಲಕ ತಿಳಿದಾಗ ಭಾರೀ ಆಘಾತಕ್ಕೆ ಒಳಗಾದೆವು. ವಿಡಿಯೋ ನೋಡಿ ತುಂಬಾ ಅತ್ತಿದ್ದೇವೆ. ಇದೀಗ ಕೋರ್ಟ್ನಿಂದ ಬಂದಿರುವ ತೀರ್ಪು ನಮ್ಮ ಮನಸ್ಸನ್ನು ಮತ್ತಷ್ಟು ಗಾಯಗೊಳಿಸಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಮಹಿಳೆಯ ಅನುಮತಿಯಿಲ್ಲದೇ ಫೋಟೋ ಅಥವಾ ವಿಡಿಯೋಗಳನ್ನು ತೆಗೆದುಕೊಂಡು ಪೋರ್ನ್ ಸೈಟಿನಲ್ಲಿ ಅಪ್ಲೋಡ್ ಮಾಡುವುದು ಲೈಂಗಿಕ ದೌರ್ಜನ್ಯವಾಗಿದೆ ಎಂದು ಸ್ಪೇನ್ನ ಮಹಿಳಾ ಸಚಿವೆ ಇರೆನೆ ಮೊಂಟೆರೋ ತಿಳಿಸಿದ್ದಾರೆ.
ಇದೀಗ #Justice Maruxaina against the verdict given by the Lugo Provincial Court (ಲುಗೊ ಪ್ರಾಂತೀಯ ನ್ಯಾಯಾಲಯ ನೀಡಿದ ತೀರ್ಪನ್ನು ಮರುಪರಿಶೀಲಿಸಿ ಮರುಕ್ಸೈನಾಗೆ ನ್ಯಾಯ ಒದಗಿಸಿ) ಎಂಬ ಹ್ಯಾಷ್ಟ್ಯಾಗ್ ಮೂಲಕ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಹಿಳಾ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ವೀಡಿಯೋಗಳನ್ನು ರೆಕಾರ್ಡ್ ಮಾಡುವುದು “ಶಿಕ್ಷಾರ್ಹ” ಅಪರಾಧ ಎಂದು ತೀರ್ಪಿನ ವಿರುದ್ಧ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಅನಾ ಗಾರ್ಸಿಯಾ ಪ್ರತಿಭಟಿಸಿದ್ದಾರೆ. ಈ ತೀರ್ಪು ಮಹಿಳಾ ಸ್ವಾತಂತ್ರ್ಯಕ್ಕೆ ಮತ್ತಷ್ಟು ಧಕ್ಕೆ ತರುತ್ತದೆ ಎಂದಿದ್ದಾರೆ. (ಏಜೆನ್ಸೀಸ್)
ಪಾರ್ಟಿಯಲ್ಲಿ ಆಡಿದ ಆ ಒಂದು ಮಾತು, ಸಮಂತಾರ ನಿರ್ಧಾರವೇ ಡಿವೋರ್ಸ್ಗೆ ಕಾರಣವಾಯ್ತಾ? ಇಬ್ಬರ ಅಹಂ ಕತೆಯಿದು..?!
ಮೊಬೈಲ್ ತಂದ ಆಪತ್ತು! ಮಲಗುವುದಾಗಿ ಹೇಳಿ ಬೆಡ್ರೂಮ್ಗೆ ಹೋದ ಮಗಳು ದುರಂತ ಸಾವು
ನನ್ನ ಆಸೆ ಪೂರೈಸು ಇಲ್ದಿದ್ರೆ… ಕರೆ ಮಾಡಿದ ವಿವಾಹಿತನ ಮಾತು ಕೇಳಿ ಅಪ್ರಾಪ್ತೆ ನರ್ಸ್ ದುರಂತ ಸಾವು
ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರೆ ನಗದು ಬಹುಮಾನ: ಕೇಂದ್ರದ ಘೋಷಣೆ