ಬೆಂಗಳೂರು: ಡ್ರಗ್ಸ್ ಕೇಸ್ ವಿಚಾರವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಪಡೆದುಕೊಂಡಿದ್ದ ಆರ್.ವಿ.ಯುವರಾಜ್ ನಿಗದಿತ ಸಮಯಕ್ಕೂ ಒಂದೂ ಕಾಲು ಗಂಟೆ ಮುಂಚಿತವಾಗಿಯೇ ಸಿಸಿಬಿ ಕಚೇರಿ ತಲುಪಿದ್ದಾರೆ. ಅಲ್ಲಿ ಬಾಗಿಲ ಬಳಿ ನಿಂತಿದ್ದ ಸಿಸಿಬಿ ಸಿಬ್ಬಂದಿಗೆ, “ಆರ್.ವಿ.ಯುವರಾಜ್ ಬಂದ್ರು ಅಂತ ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ಅವರಿಗೆ ಹೇಳಿ…” ಎಂದು ಹೇಳಿದರು.
ಸುಧಾಮನಗರದ ಮಾಜಿ ಕಾರ್ಪೊರೇಟರ್ ಆಗಿರುವ ಯುವರಾಜ್ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ ಪುತ್ರ. ಇಬ್ಬರು ಆಪ್ತರೊಂದಿಗೆ ಆಗಮಿಸಿದ ಯುವರಾಜ್ ಮುಖದಲ್ಲಿ ಆತಂಕದ ಛಾಯೆ ಇದ್ದು, ಚಡಪಡಿಕೆ ಕಾಣುತ್ತಿತ್ತು. ಯುವರಾಜ್ ಪೇಜ್ 3 ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು.
ಇದನ್ನೂ ಓದಿ: ಭಾರತದಲ್ಲಿ ಸೈಬರ್ ಕ್ರೈಂ 500% ಹೆಚ್ಚಳ: ಎನ್ಎಸ್ಎ ಅಜಿತ್ ದೋವಲ್ ಕಳವಳ
ಡ್ರಗ್ ಪೆಡ್ಲರ್ ಜತೆಗೆ ಯುವರಾಜ್ಗೆ ಸಂಪರ್ಕ ಇರುವುದು ಫೋನ್ ಕರೆಗಳ ಮೂಲಕ ಸಾಬೀತಾಗಿದ್ದು, ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಈ ನಡುವೆ, ಇಂದು ಬೆಳಗ್ಗೆಯ ಆರ್.ವಿ.ದೇವರಾಜ್ ಅವರ ಕುಟುಂಬ ಕಲಾಸಿಪಾಳ್ಯದ ತಮ್ಮ ನಿವಾಸದಿಂದ ಹೊರ ಹೋಗಿದೆ. ಆರ್.ವಿ.ದೇವರಾಜು ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)
9 ಅಲ್ಕೈದಾ ಉಗ್ರರ ಸೆರೆ- ಕೇರಳ, ಪಶ್ಚಿಮ ಬಂಗಾಳ ಸೇರಿ ವಿವಿಧೆಡೆ ಎನ್ಐಎ ವಿಶೇಷ ಕಾರ್ಯಾಚರಣೆ