ರಾಯಚೂರು: ಯೂಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸ್ಥಗಿತವಾಗಿರುವುದರಿಂದ ರಾಯಚೂರಿನ ಆರು ವೈದ್ಯಕೀಯ ವಿದ್ಯಾರ್ಥಿಗಳು ಯೂಕ್ರೇನ್ನಲ್ಲೇ ಸಿಲುಕಿದ್ದಾರೆ.
ದೇವದುರ್ಗದ ರುಬೀನಾ, ಅಭೀಷೇಕ್, ಲಿಂಗಸುಗೂರಿನ ಪ್ರಜ್ವಲ್, ರಾಯಚೂರು ತಾಲೂಕಿನ ದೇವಸುಗೂರಿನ ಚನ್ನವೀರೇಶ್, ಮಸ್ಕಿ ತಾಲೂಕಿನ ತುರವಿಹಾಳದ ಸೋಮು ಹಾಗೂ ನಂದೀಶ್ ವಾಪಸ್ ಭಾರತಕ್ಕೆ ಬರಲು ಆಗದೇ ಯೂಕ್ರೇನ್ನಲ್ಲೇ ಉಳಿದಿದ್ದಾರೆ.
ಯುದ್ಧ ನಡೆಯುತ್ತಿರುವ ಸ್ಥಳದಿಂದ ಈ ವಿದ್ಯಾರ್ಥಿಗಳು ದೂರದಲ್ಲಿ ಇದ್ದರೂ ಸಹ ಆತಂಕದಲ್ಲಿದ್ದಾರೆ. ಇತ್ತ ವಿದ್ಯಾರ್ಥಿಗಳ ಪೋಷಕರು ಸಹ ಭಯದಲ್ಲಿದ್ದಾರೆ. ಆದಷ್ಟು ಶೀಘ್ರವಾಗಿ ತಮ್ಮ ಮಕ್ಕಳನ್ನು ಭಾರತಕ್ಕೆ ಕರೆತರಲು ಸರ್ಕಾರಕ್ಕೆ ಪೋಷಕರು ಒತ್ತಾಯಿಸಿದ್ದಾರೆ.
ಯೂಕ್ರೇನ್-ರಷ್ಯಾ ಯುದ್ಧ: ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿ ಪ್ರಧಾನಿ ಮೋದಿ ಹೇಳಿದ್ದಿಷ್ಟು…
ಯೂಕ್ರೇನ್-ರಷ್ಯಾ ಯುದ್ಧ: ನಾನು ಸುರಕ್ಷಿತವಾಗಿದ್ದೇನೆ ಎಂದು ತಂದೆಗೆ ಕರೆ ಮಾಡಿ ಧೈರ್ಯ ಹೇಳಿದ ನವ್ಯಶ್ರೀ