ಹೈದರಾಬಾದ್: ಇಲ್ಲಿನ ಸಂಚಾರಿ ವಿಭಾಗದ ಪೊಲೀಸರು ಶನಿವಾರ ವಿಶೇಷ ಕಾರ್ಯಾಚರಣೆ ಕೈಗೊಂಡರು. ಎಂಎಲ್ಎ ಸ್ಟಿಕರ್ಸ್, ನಕಲಿ ಸ್ಟಿಕರ್ಸ್ ಮತ್ತು ಕಪ್ಪು ಪರದೆಯನ್ನು ಅಳವಡಿಸಿದ್ದ ಕಾರುಗಳಿಗೆ ಸ್ಥಳದಲ್ಲೇ ದಂಡಗಳನ್ನು ವಿಧಿಸಲಾಗಿತ್ತು. ಅಲ್ಲದೆ, ಸ್ಟಿಕರ್ಗಳನ್ನು ತೆಗೆಯಲಾಯಿತು. ಇದರ ಬಿಸಿ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಟ ಕಲ್ಯಾಣ್ ರಾಮ್ಗೂ ತಟ್ಟಿತು.
ಜುಬಿಲಿ ಹಿಲ್ಸ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಜುಬಿಲಿ ಹಿಲ್ಸ್ ಚೆಕ್ಪೋಸ್ಟ್ನಲ್ಲಿ ತಪಾಸಣೆಯನ್ನು ನಡೆಸಲಾಯಿತು. ಯಾವ ಯಾವ ವಾಹನಗಳಲ್ಲಿ ಕಪ್ಪು ಪರದೆ ಮತ್ತು ಸ್ಟಿಕರ್ಗಳು ಕಂಡುಬಂತೋ ಆ ವಾಹನವನ್ನು ತಡೆದು ಅವುಗಳನ್ನು ತೆಗೆದು ಸ್ಥಳದಲ್ಲೇ ದಂಡ ವಿಧಿಸಲಾಯಿತು.
ಜುಬಿಲಿ ಹಿಲ್ಸ್ ರಸ್ತೆ ನಂಬರ್ 36ರಲ್ಲಿ ಜುಬಿಲಿ ಹಿಲ್ಸ್ ಸಂಚಾರಿ ಪೊಲೀಸರು ಅಲ್ಲು ಅರ್ಜುನ್ ಇದ್ದ ಕಾರನ್ನು ತಡೆದರು. ಕಾರಿನ ಕಿಟಕಿಯಲ್ಲಿ ಕಪ್ಪು ಪರದೆಯನ್ನು ಅಳವಡಿಸಿದ್ದಕ್ಕೆ ಅದನ್ನು ಸ್ಥಳದಲ್ಲೇ ತೆಗೆಸಿ, 700 ರೂಪಾಯಿ ದಂಡ ವಿಧಿಸಿದರು. ಅದೇ ರಸ್ತೆಯಲ್ಲಿ ಬರುತ್ತಿದ್ದ ನಟ ಕಲ್ಯಾಣ್ ರಾಮ್ರನ್ನು ತಡೆದು ಪೊಲೀಸರು ದಂಡ ವಿಧಿಸಿದರು.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಲ್ಲು ಅರ್ಜುನ್ ಪುಷ್ಪ ಯಶಸ್ಸನ್ನು ಆನಂದಿಸುತ್ತಿದ್ದು, ಪುಷ್ಪ 2 ಮುಂದುವರಿದ ಭಾಗಕ್ಕೆ ಸಿದ್ಧತೆ ಕೈಗೊಂಡಿದ್ದಾರೆ. ನಟ ಕಲ್ಯಾಣ್ ರಾಮ್ ಅವರು ಬಿಂಬಿಸಾರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)
ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಹುಡುಗಿ ಇಂದು ಒಂದು ಕಂಪನಿಯ ಮ್ಯಾನೇಜರ್..!
ಮಧ್ಯರಾತ್ರಿ ಬೈಸಿಕಲ್ ಏರಿ ಸರ್ಪ್ರೈಸ್ ಭೇಟಿ ನೀಡಿ ಗಸ್ತು ಸಿಬ್ಬಂದಿಗೆ ಶಾಕ್ ಕೊಟ್ಟ ಮಹಿಳಾ ಐಪಿಎಸ್ ಅಧಿಕಾರಿ!
ಸಂಸದೆ ಸುಮಲತಾ ಅಂಬರೀಷ್ಗೆ ಓಪನ್ ಚಾಲೆಂಜ್ ಹಾಕಿದ ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ