ಸೆಕ್ಸ್​ ಸೀನ್​ ಶೂಟಿಂಗೂ ಮುನ್ನ ರಾಧಿಕಾ ಆಪ್ಟೆ ಜತೆ ನಡೆದ ರಹಸ್ಯ ಮಾತುಕತೆ ಬಿಚ್ಚಿಟ್ಟ ನಟ!

blank

ಮುಂಬೈ: ಬಾಲಿವುಡ್​ ಅದ್ಭುತ ಕಲಾವಿದರಾದ ಆದಿಲ್​ ಹುಸೇನ್​ ಮತ್ತು ರಾಧಿಕಾ ಆಪ್ಟೆ, ಲೀನಾ ಯಾದವ್ ನಿರ್ದೇಶನದ ವಿಮರ್ಶಾತ್ಮಕವಾಗಿ ಬಹಳ ಮೆಚ್ಚುಗೆ ಪಡೆದಿರುವ “ಪಾರ್ಚ್ಡ್” ಚಿತ್ರದಲ್ಲಿ ಸಹ ಕಲಾವಿದರಾಗಿ ನಟಿಸಿದ್ದಾರೆ.

ಈ ಚಿತ್ರವನ್ನು ವಿಶ್ವದಾದ್ಯಂತ ಅನೇಕ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರದರ್ಶಿಸಲಾಯಿತು ಮತ್ತು ಎಲ್ಲರ ಗಮನವನ್ನು ಸೆಳೆಯಿತು. ಅದರಲ್ಲೂ ಆದಿಲ್​ ಮತ್ತು ರಾಧಿಕಾ ನಡುವೆ ಸೆಕ್ಸ್​ ದೃಶ್ಯ ಭಾರಿ ಚರ್ಚೆಗೀಡಾಯಿತು.

ಈ ಬಗ್ಗೆ ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ಆದಿಲ್​ ಹುಸೇನ್​ ಮುಕ್ತವಾಗಿ ಮಾತನಾಡಿದ್ದಾರೆ. ಶೂಟಿಂಗ್​ ಮುನ್ನ ರಾಧಿಕಾ ಮತ್ತು ಆದಿಲ್​ ನಡುವೆ ನಡೆದ ಮಾತುಕತೆ ಏನೆಂಬುದನ್ನು ಆದಿಲ್​ ತಿಳಿಸಿದ್ದಾರೆ.

ಮೊದಲಿಗೆ ನಟಿ ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆದಿಲ್​, ಇದುವರೆಗೂ ಅವರು ಭೇಟಿ ಮಾಡಿದವರಲ್ಲಿ ನಟಿ ರಾಧಿಕಾ, ಅತ್ಯಂತ ಸಮರ್ಪಿತ ಮತ್ತು ಪ್ರಾಮಾಣಿಕ ಕಲಾವಿದರಲ್ಲಿ ಒಬ್ಬರು ಎಂದಿದ್ದಾರೆ.

ರಾಧಿಕಾ ಅವರು ಸಂಪೂರ್ಣವಾಗಿ ಕಲೆಗೆ ಬದ್ಧರಾಗಿದ್ದಾರೆ ಮತ್ತು ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು. ರಾಧಿಕಾ ಮತ್ತು ನನ್ನಂತವರಿಗೆ ಮುಖ್ಯವಾದುದು ಕಲೆಯೇ ಹೊರತು, ಜನರು ಏನು ಹೇಳುತ್ತಾರೆಂಬುದಲ್ಲ ಎಂದು ಟೀಕಿಸುವ ಮಂದಿಗೆ ಆದಿಲ್​ ತಿರುಗೇಟು ನೀಡಿದರು.

ಸೆಕ್ಸ್​ ದೃಶ್ಯಕ್ಕೂ ಮುನ್ನ ಆಕೆಯ ಬಾಯ್​ಫ್ರೆಂಡ್​ ಬಗ್ಗೆ ನಾನು ಪ್ರಶ್ನಿಸಿದೆ. ಅದಕ್ಕೆ ಅವರು ಮದುವೆ ಆಗಿದೆ ಎಂದು ಉತ್ತರಿಸಿದರು. ಬಳಿಕ ನನ್ನ ಪತ್ನಿಯ ಬಗ್ಗೆ ಕೇಳಿದರು. ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದೆ. ನನ್ನ ಪತ್ನಿ ನನ್ನ ಕಲೆಗೆ ಗೌರವ ನೀಡುತ್ತಾಳೆಂದು ತಿಳಿಸಿದೆ ಎಂದು ಆದಿಲ್​ ಸಂದರ್ಶನದಲ್ಲಿ ಹೇಳಿದರು.

ಮಾತು ಮುಂದುವರಿಸಿದ ಆದಿಲ್​, ಬರ್ಬರ ಹತ್ಯೆ ಮಾಡುವಂತಹ ದೃಶ್ಯಗಳಲ್ಲೇ ಕಲಾವಿದರಾಗಿ ನಾವು ಹೇಸಿಗೆ ಪಟ್ಟುಕೊಳ್ಳುವುದಿಲ್ಲ. ಅಂತಹುದರಲ್ಲಿ ಸರಸ ಸಲ್ಲಾಪದ ದೃಶ್ಯಗಳನ್ನು ಚಿತ್ರೀಕರಿಸುವಾಗ ನಾವೇಕೆ ಹೇಸಿಗೆ ಪಟ್ಟುಕೊಳ್ಳಬೇಕೆಂದು ಪ್ರಶ್ನಿಸಿದರು. ದೂರ ಸರಿಯುವುದರ ಹಿಂದಿನ ತರ್ಕ ಏನು? ನಾವು 1.3 ಬಿಲಿಯನ್ ಜನರ ಭಾಗವಲ್ಲವೇ? ಮತ್ತು ಇದು ಕಾಮಸೂತ್ರ ಹುಟ್ಟಿದ ಭೂಮಿ ಅಲ್ಲವೇ? ಎಂದು ಆದಿಲ್​ ಮರು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

ಬಡತನದ ಪಾತ್ರಗಳನ್ನು ಕಾಜೋಲ್ ರಿಜೆಕ್ಟ್​ ಮಾಡೋದ್ಯಾಕೆ?

ರಜನಿಕಾಂತ್​, ವಿಕ್ರಮ್​, ವಿಜಯ್​ಗೆ ನಾಯಕಿಯಾಗಿದ್ದ ಈ ಹುಡುಗಿ ಯಾರು ಗೊತ್ತಾ?

ಡಿಸ್ನಿ ಹಾಟ್​ಸ್ಟಾರ್​ ಪ್ಲಸ್​ ಒಟಿಟಿಗೆ ಕೋಟಿ ಕೋಟಿ ಮೊತ್ತಕ್ಕೆ ಮಾರಾಟವಾಯ್ತು ಹಂಗಾಮಾ 2!

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…