More

    VIDEO| ನಟ ಧರಮ್​ ತೇಜ್​ ಭೀಕರ ರಸ್ತೆ ಅಪಘಾತದಲ್ಲಿ ಬದುಕಿದ್ದಾರೆಂದರೆ ಅವರ ಕರ್ಮದ ಫಲ ಕಾರಣವಂತೆ!

    ಹೈದರಾಬಾದ್​: ಗಣೇಶ ಹಬ್ಬದ ದಿನವೇ ಬೈಕ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ತೆಲುಗು ನಟ ಸಾಯಿ ಧರಮ್ ತೇಜ್​ಗೆ ಚಿಕಿತ್ಸೆ ಮುಂದುವರಿದಿದೆ. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಮತ್ತು ಆದಷ್ಟು ಬೇಗ ಅವರು ಸಹಜ ಸ್ಥಿತಿಗೆ ಮರಳಲಿದ್ದಾರೆಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಚೇತರಿಕೆಗೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಧರಮ್​ ತೇಜ್​ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಷ್ಟು ದೊಡ್ಡ ಅಪಘಾತವಾದರೂ ಅವರು ಬದುಕಿದ್ದಾರೆಂದು ಅದು ಅವರ ಕರ್ಮಫಲ ಎಂದು ವಿಡಿಯೋ ನೋಡಿದವರು ಹೇಳುತ್ತಿದ್ದಾರೆ.

    ಕೆಲವು ತಿಂಗಳ ಹಿಂದೆ ಧರಮ್​ ತೇಜ್​ ಅವರು ಬೈಕ್​ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಎತ್ತಿಕೊಂಡು ಹೋಗಿ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಗೊಂಡ ವ್ಯಕ್ತಿ ಓರ್ವ ಮ್ಯೂಸಿಕ್​ ಡೈರೆಕ್ಟರ್​. ಅವರ ಹೆಸರು ಅಚು ರಾಜಮಣಿ. ಅದೇ ದಾರಿಯಲ್ಲಿ ಹೋಗುತ್ತಿದ್ದ ಧರಮ್​ ತೇಜ್​, ಅಪಘಾತದಲ್ಲಿ ಗಾಯಗೊಂಡಿದ್ದ ರಾಜಮಣಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು. ಅವರ ಈ ಕೆಲಸ ಅನೇಕರ ಮನ ಮುಟ್ಟಿತ್ತು. ಧರಮ್​ ತೇಜ್​ ಅವರ ಸಹಾಯದ ಮನೋಭಾವವೇ ಇಂದು ಅವರನ್ನು ಅಪಘಾತದಿಂದ ಪಾರು ಮಾಡಿದೆ ಎಂದು ಅಭಿಮಾನಿಗಳು ನಂಬಿದ್ದಾರೆ.

    ಧರಮ್​ ತೇಜ್​ ಅಭಿಮಾನಿಗಳು ವಿಡಿಯೋವನ್ನು ಎಲ್ಲೆಡೆ ಶೇರ್​ ಮಾಡಿ, ಆದಷ್ಟು ಬೇಗ ನೆಚ್ಚಿನ ನಟ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ. ಕಾಕತಾಳೀಯವೆಂದರೆ, ಮ್ಯೂಸಿಕ್​ ಡೈರೆಕ್ಟರ್​ ಅಚು ರಾಜಮಣಿ ಕೂಡ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಡನ್​ ಬ್ರೇಕ್​ ಆಗಿ ಬೈಕ್​ ಸ್ಕಿಡ್​ ಆಗಿ ಬಿದ್ದಿದ್ದರು. ಅದೇ ಧರಮ್​ ತೇಜ್​ ಕೂಡ ರಸ್ತೆಯಲ್ಲಿದ್ದ ಮರಳಿನಿಂದ ಬೈಕ್​ ಸ್ಕಿಡ್​ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

    ಶುಕ್ರವಾರ (ಸೆ.10) ಸಂಜೆ ಧರಮ್​ ತೇಜ್​ ಅವರು ತನ್ನ Triumph Sports ಬೈಕ್​​​ನಲ್ಲಿ ಜುಬ್ಲಿ ಹಿಲ್ಸ್​ನಿಂದ ಗಾಚಿಬೌಲಿ ಕಡೆ ಹೋಗುತ್ತಿದ್ದರು. ರಸ್ತೆಯ ಮೇಲೆ ಮರಳು ಇದ್ದಿದ್ದರಿಂದ ಬೈಕ್ ಕಂಟ್ರೋಲ್ ತಪ್ಪಿ ಸ್ಕಿಡ್ ಆಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಅಪಘಾತದಿಂದಾಗಿ ಧರಮ್​ ತೇಜ್​ ಅವರಿಗೆ ಕ್ಲಾವಿಕಲ್ ಮೂಳೆ ಮುರಿತ ಮತ್ತು ತಲೆ ಹಾಗೂ ಎದೆಗೆ ತೀವ್ರ ಗಾಯಗಳು ಆಗಿದ್ದರೂ, ಪ್ರಾಣಕ್ಕೆ ಯಾವುದೇ ಕುತ್ತು ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.

    ನಟ ಚಿರಂಜೀವಿ, ನಟ ಪವನ್ ಕಲ್ಯಾಣ್, ನಟ ವೈಷ್ಣವ ತೇಜ್, ಅಲ್ಲು ಅರವಿಂದ್ ಮತ್ತು ಇತರ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಸಂಬಂಧ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಮಗ್ರ ತನಿಖೆ ಆರಂಭಿಸಿದ್ದಾರೆ. ಧರಮ್​ ತೇಜ್​ ವೇಗದ ಚಾಲನೆ ಮಾಡಿದ್ದಾರೆಂದು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಫಿಲ್ಮಿ ಲುಕ್ಸ್​)

    ಇಷ್ಟೊಂದು ಮಿಸ್ಟೇಕ್​ ಮಾಡಿದ್ರಾ ನಟ ಸಾಯಿ ಧರಮ್​ ತೇಜ್? ತನಿಖೆಯಲ್ಲಿ ಬೈಕ್​ ಕುರಿತ ಸ್ಫೋಟಕ ಮಾಹಿತಿ ಬಯಲು! ​​

    ನಟ ಧರಮ್ ತೇಜ್​ ಇತ್ತೀಚೆಗೆ ಖರೀದಿಸಿದ್ದ ದುಬಾರಿ ಬೈಕ್​ನಿಂದಲೇ ದುರಂತ: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

    ಭೀಕರ ಅಪಘಾತದಿಂದ ನಟ ಸಾಯಿ ಧರಮ್​ ತೇಜ್ ಬಚಾವ್​ ಆಗಿದ್ಹೇಗೆ? ಅದೊಂದಿಲ್ಲದಿದ್ದರೆ ಬದುಕುತ್ತಿರಲಿಲ್ಲವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts