ವಿಜಯವಾಡ: ಹೆದ್ದಾರಿಯ ಪಕ್ಕದಲ್ಲಿ ಅಳವಡಿಸಿದ್ದ ಟ್ರಾನ್ಸ್ಫಾರ್ಮರ್ಗೆ ಕಾರು ಡಿಕ್ಕಿಯಾಗಿ ಆಂಧ್ರ ಪ್ರದೇಶದ ವೈಸಿಪಿ ಪಕ್ಷದ ಶಾಸಕರ ಪುತ್ರ ಮತ್ತು ಸೋದರಳಿಯ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರದ ಪೂರ್ವ ಗೋದಾವರಿಯ ಪೊಲಾವರಂ ವಲಯದ ಹಳೇ ಇಂಜರಮ್ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 216ರಲ್ಲಿ ಮಂಗಳವಾರ (ಮಾ.1) ರಾತ್ರಿ ನಡೆದಿದೆ.
ಶಾಸಕ ಪೊನ್ನಾಡ ವೆಂಕಟ ಸತೀಶ್ ಕುಮಾರ್ ಎಂಬುವರ ಹಿರಿಯ ಪುತ್ರ ಸುಮಂತ್ ಮತ್ತು ಸೋದರಳಿಯ ಲೋಕೇಶ್, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದಲ್ಲೇ ಇದ್ದ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹೆದ್ದಾರಿ ಮೊಬೈಲ್ ವಾಹನ ಗಾಯಾಳುಗಳನ್ನು ತಕ್ಷಣ ಯಾನಮ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಕಾಕಿನಾಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಶಾಸಕರ ಸೋದರಳಿಯ ಲೋಕೇಶ್ಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ಕಾರಣ ಏನೆಂಬುದು ತಿಳಿದುಬರಬೇಕಿದೆ. (ಏಜೆನ್ಸೀಸ್)
ಇಡೀ ದಿನ ಒಂದೇ ಕೋಣೆಯಲ್ಲಿ ಆತನೊಂದಿಗೆ ಇರಬೇಕಿತ್ತು: ಮಾಜಿ ಪತಿಯ ಕರಾಳ ಮುಖ ಬಿಚ್ಚಿಟ್ಟ ಪೂನಂ ಪಾಂಡೆ
ಗ್ರಾಪಂ ಸದಸ್ಯನ ಜತೆ ಕಾಮದಾಟ: ಪ್ರಶ್ನಿಸಿದ್ದ ಮಗನನ್ನೇ ಕೊಲೆ ಮಾಡಿದಳಾ ಪಾಪಿ ತಾಯಿ?
ಪ್ರಧಾನಿ ಅಮ್ಮನಿಗೂ, ಕಾಶಿ ವಿಶ್ವನಾಥನ ಗರ್ಭಗುಡಿಯ ಚಿನ್ನಕ್ಕೂ ಇದೆ ನಂಟು: ಖುದ್ದು ಅಚ್ಚರಿಗೊಂಡ ಮೋದಿ!