ಕೊಚ್ಚಿ: ತಮಗೆ ದೊರೆತಂತಹ ಒಂದು ಸವರನ್ ಚಿನ್ನದ ಸರವನ್ನು ಕಳೆದುಕೊಂಡ ಮಾಲೀಕರಿಗೆ ಮರಳಿಸುವ ಮೂಲಕ ವಿದ್ಯಾರ್ಥಿಗಳು ಪ್ರಾಮಾಣಿಕತೆ ಮರೆದು, ಇತರರಿಗೆ ಮಾದರಿಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಲ್ ಟಿಕೆಟ್ ಪಡೆದು ವಾಪಸಾಗುತ್ತಿದ್ದಾಗ ಕಡಕ್ಕಮೊನ್ನ ಚೇಳನ್ನೂರಿನ ಪ್ರಯಾಗ್ ಗಾರ್ಡನ್ ಬಳಿ ವಿದ್ಯಾರ್ಥಿಗಳಿಗೆ ಚಿನ್ನದ ಸರ ಪತ್ತೆಯಾಗಿತ್ತು. ಕೂಡಲೇ ಅವರು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಬಳಿಕ ಆಟೊದಲ್ಲಿ ಠಾಣೆಗೆ ತೆರಳಿ ಸರವನ್ನು ಹಸ್ತಾಂತರಿಸಿದರು. ಇದೀಗ ಆ ಸರವನ್ನು ಪೊಲೀಸರು ಮಾಲೀಕರಿಗೆ ಹಿಂತಿರುಗಿಸಿದ್ದಾರೆ.
ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ಅವರು ನೀಡಿದ ಉತ್ತರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾರವನ್ನು ಏಕೆ ಹಿಂದಿರುಗಿಸಿದಿರಿ ಎಂದು ಕೇಳಿದಾಗ, ‘ಯಾರಾದರೂ ಸರಿಯೇ ಚಿನ್ನವನ್ನು ಕಷ್ಟಪಟ್ಟು ಸಂಪಾದಿಸಿದ ಖರೀದಿಸಿರುತ್ತಾಲ್ಲಲ್ಲವೇ? ಸರ್ ಎಂದು ಹೇಳಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೇರಳ ಪೊಲೀಸರು ತಮ್ಮ ಅಧಿಕೃತ ಪುಟದಲ್ಲಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. (ಏಜೆನ್ಸೀಸ್)
ನೀವು ನನಗೋಸ್ಕರ ನಾನು ಹೇಳಿದ್ದನ್ನು ಮಾಡಿದ್ರೆ ನಿಮಗೋಸ್ಕರ ನಾನು ಬೆತ್ತಲಾಗ್ತೀನಿ ಅಂದ್ರು ಪೂನಂ ಪಾಂಡೆ!
ಬಳ್ಳಾರಿಯ ಗುಡ್ಡವೊಂದರಲ್ಲಿ ಪತ್ತೆಯಾಗಿದ್ದ ತಲೆಬುರುಡೆಯ ನಿಗೂಢ ಪ್ರಕರಣ ಭೇದಿಸಿದ ಪೊಲೀಸರು!
ಚಾಯ್-ಸ್ಯಾಮ್ ಭವಿಷ್ಯ ನಿಜವಾಯ್ತು ಇದೀಗ ಪ್ರಭಾಸ್ ಬಗ್ಗೆ ಭಯಾನಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!